Thursday 13 December 2012

ನನ್ನ ಉಸಿರ ಒಂದು ನೆನಪು ನಿನ್ನಲಿಲ್ಲವೇ
ಕಾಡಿಬೇಡಿ ಚಿಗುರಫಲಿತ  ಪ್ರೀತಿಯಿಲ್ಲವೇ
ಹಸುರ ಕಂಡು ಮರುಗೋ ಮನಸು ಇಲ್ಲವೋ
ಎಲ್ಲ ಹರಿವ ನೀರ  ಹಾಗೆ ತೇಲಿ ಹೋಯಿತೇ ..
 
 
 
.....ಮಾಲಿನಿ ಭಟ್..........
 
ನೀ  ಕಂಡ ದಿನವೇ ಹಸನಾಗಿದೆ
ಎದೆಯೆಲ್ಲ ಸಡಿಲಾಗಿದೆ
ಕನಸೆಲ್ಲ ಕೈ ಗೂಡಿದೆ
ಹೃದಯವೇ ಮಾತಾಡಿದೆ
ಜೊತೆಗಿರು ಜೀವವೇ
ಉಸಿರಿರೋವರೆಗೂ .....
 
 
......ಮಾಲಿನಿ ಭಟ್.........
ಅನಂತ ಅಂತರದಲಿ
ದೀಪದ ತುಣುಕೊಂದು
ಅಕ್ಷರಶಃ ಮೌನವಾಗಿದ್ದು
ನಿನ್ನಂತರಂಗವ ನೋಡಿದ ಮೇಲೆ
 
 
....ಮಾಲಿನಿ ಭಟ್....

Wednesday 7 November 2012

ಆ ದಿನ ನಿನ್ನ ಮನಸೊಳಗೆ ನಾನಿರಲಿಲ್ಲ
ಪರಿತಪಿಸಿದೆ ನಿನ್ನ ಮನಸಿಗಾಗಿ
ಈ ದಿನ ನಿನ್ನ ಮನಸಲ್ಲಿ ನಾನಿರುವೆ
ನನ್ನ ಮನಸು ನಿನ್ನ ಬಿಟ್ಟು ಬಹುದೂರ ಸಾಗಿದೆ ..
 
......ಮಾಲಿನಿ ಭಟ್ ..........

Tuesday 6 November 2012

ನೀನಿರುವೆ ನನ್ನ ಜೊತೆ
 
ಕಂಬನಿ ಅಳಲ ಮರೆಸಿದೆ
 
ನಾನಿರುವೆ ನಿನ್ನ ಜೊತೆ
 
ಹೃದಯ ಆತ್ಮ ಬೆರೆಯೋವರೆಗೆ
 
 
 
.......ಮಾಲಿನಿ ಭಟ್.........
ಹೊಸತನ ಬಯಸಿದೆ ಮನದ ತುಂಬಾ
ಹೃದಯ ಭಾರಗೊಂಡಿದೆ ನೋವು ತುಂಬಿ
ಅಳಿಸಬೇಕು ಎಲ್ಲವನು ದೃಢತೆ ತುಂಬಿ
ಹೊಸ ಕನಸ ಬಿತ್ತಿ ನಲಿವು ತುಂಬಿ
 
 
....ಮಾಲಿನಿ ಭಟ್

Wednesday 5 September 2012

ಈ ಸಂಜೆ ಬಾನಲ್ಲಿ ಮೋಡವು ಸೆರಗನ್ನು ಚಾಚಿತ್ತು
ನೀರನು ತುಂಬಿದ ಮೋಡವು ಸೆರಗನ್ನು ಚಾಚಿತ್ತು
ಮರೆಯಾದ ರವಿಯು ಮೋಡಕ್ಕೆ ಹೆದರಿ
ಅವಿತು ಹೋದನು ಸಾಗರದ ತಳದಲಿ
 
ಕೈ ಚಾಚುತಿರುವೇನು ಗಗನಕೆ
ಮುಳುಗುವ ಜೀವನದ ಭಿಕ್ಷೆಗೆ 
ಭೂಮಿ , ನೀರು , ಎಲ್ಲ ಮಲಿನಗೊಂಡಿದೆ 
ನಿನ್ನಲ್ಲಿ ಆಶ್ರಯ ಬೇಡಿ ಬಂದಿಹೆನು ...
 
 
...ಮಾಲಿನಿ ಭಟ್...... 
 
ಬೀಜ ಮೊಳೆತಿದೆ,
ಚಿಗುರು ಬೆಳಕ ಕಂಡಿದೆ
ಮಣ್ಣ ಒಡೆದು ಮೆಲ್ಲ ಬಂದಿದೆ ,
ಜಗವ ನೋಡೋ ಕಾತರದಿ ....
 

ಗುರುದೇವ


 
ಮಗುವಿನ ಮುಗ್ಧತೆ ಮಂಟಪದಲ್ಲಿ,
ಅಕ್ಷರ ಜ್ಞಾನದ ಬೆಳಕನು ತುಂಬಿಸಿ ,
ಪ್ರತಿಭೆಯ ಹುಡುಕಿ ದೇಶಕೆ ನೀಡುವ ,
ರಾಷ್ಟ್ರದ ಏಳ್ಗೆಗೆ ಕಾರಣ ನೀನು ..
                ನಮ್ಮಯ ಪ್ರೀತಿಯ ಗುರುಗಳು  ನೀವು ...
ಕಣ್ಣು ಹೇಳುವ ನೂರು ಮಾತು
ನಿನ್ನ ಅಂತರಂಗ ತಲುಪಿಯೂ
ಮೌನದ ಸಂದೇಶ ನೀಡಿದೆ
ನಾ ಅರಿಯುದಾದರು ಏನನ್ನು ..
 
....ಮಾಲಿನಿ ಭಟ್..........
ಬೆರಳುಗಳ ಸಂದಿಯಲಿ ಗೋಚರಿಸಿದ
ಕಿರಿದಾದ ಹೊಸ ಪ್ರಪಂಚ
ಜೀವನವು ಸೋರಿ ಹೋಗೋ ಸಂಬಂಧವು
ಇರುವುದರಲ್ಲಿಯೇ ಹೊಸತನ ಹುಡುಕಬೇಕು ..
 
 
.........ಮಾಲಿನಿ ಭಟ್ ......
 

Thursday 30 August 2012

ಕಾರಣವ ಹೇಳಿ ಹೋಗು

 
 
ಕಾರಣವ ಹೇಳದೆ ದೂರಾದೆ ಗೆಳಯ
ಕಾರಣವ ಹೇಳಿಯೇ ಹೋಗು
ನಿನಗಾಗಿ ಕಟ್ಟಿದೆ ನನ್ನ ಮನಸಲಿ ಅರಮನೆಯನ್ನು
ಒಮ್ಮೆ ಬಂದು ನೋಡು ಸೌಧವು ಖಾಲಿಯಾಗಿದೆ
 
ನಾನಿಟ್ಟ ಹೆಜ್ಜೆಯ ಗುರುತಿನ್ನು ಮಾಸಿಲ್ಲ
ಸಾಗರಕೂ ನಮ್ಮ ನೋಡಿ ಪ್ರೀತಿ
ನಿನಗೇಕೆ ನನ್ನ ಮೇಲೆ ಈ ಪರಿಯ ಕೋಪ
ಒಮ್ಮೆ ಬಂದು ನೋಡು ನೀನಿಲ್ಲದೆ ಸೊರಗಿರುವುದನ್ನು
 
ಮರಗಳಿಂದು ಮರೆತಿಲ್ಲ ನಾವಾಡಿದ ಮಾತನು
ಗಾಳಿಗೂ ನಮ್ಮ ಮೇಲೆ ಅನುರಾಗವು
ನಿನ್ನ ಮನಸಿಗೆ ನಾನಿಂದು ದೂರದ ತಾರೆ
ಒಮ್ಮೆ ಬಂದು ನೋಡು ನನ್ನ ಕಣ್ಣುಗಳು ನಿನಗಾಗಿ ಕಾದಿದೆ
 
ಇಂಚರವು  ಆಲಿಸಿದೆ ನಾವು ಗುನುಗಿದ ಹಾಡನು
ಮೋಡಗಳು ಹನಿ ಹನಿ ಮಳೆಬಿಂದು ಚಿಮುಕಿಸಿದೆ
ನೀ ಮಾತ್ರ ಹೇಳದೆ ನನ್ನ ಆಗಲಿದೆ
ಒಮ್ಮೆ ಬಂದು ನೋಡು ನನ್ನ ಹೃದಯ ನಿನಗಾಗಿ ಕಾದಿದೆ 
 
 
......Malini Bhat..........
 
 

ಹೀಗಿರಬೇಕು ನನ್ನ ಇನಿಯ



ಹೀಗಿರಬೇಕು ನನ್ನ ಇನಿಯ
ಕನಸುಗಳಿಂದ ಎದ್ದ ರಾಜಕುಮರ
ಮನಸುಗಳ ಮಧುರ ಅಕ್ಷಯಪಾತ್ರೆ
ಪ್ರೀತಿಗಾಗಿಯೇ ಜನಿಸಿಬಂದವ

ನಾ ಹೆಜ್ಜೆ ಇತ್ತ ಕಡೆ ನನ್ನವನ ಹೆಜ್ಜೆಯಿರಬೇಕು
ಕನಸಿಗೆ ಉಸಿರನ್ನ ನೀಡಬೇಕು
ದುಃಖಕ್ಕೆ ಹೆಗಲಾಗಬೇಕು
ಪ್ರೀತಿಗೆ ನನ್ನವನೇ ಆದರ್ಶವಾಗಬೇಕು

ಕಾಲದ ಪರೀಕ್ಷೆಗೆ ಎದೆಗುಂದಬಾರದು
ಕಣ್ಣಿನ ನೋಟದಲಿ ತಪ್ಪು ಇಣುಕಬಾರದು
ಮನದ ಮೂಲೆಯಲಿ ಸಂಶಯ ಸುಳಿಯಬಾರದು
ಅವನು ನನ್ನವನು ನನ್ನ ಪ್ರೀತಿಯ ಇನಿಯ

ಗುರು ಹಿರಿಯರ ಗೌರವಿಸಬೇಕು
ಬಡವರಿಗೆ ಸಹಕರಿಸಬೇಕು
ಮನೆಗೆ ಅಡಿಗಲ್ಲಾಗಬೇಕು
ತಂದೆ ತಾಯಿಯ ಮುದ್ದಿನ ಮಗನಾಗಬೇಕು

ದುಸ್ಟ ಚಟಗಳಿಗೆ ಸೋಕಬಾರದು
ಕಷ್ಟ ಸುಖದಲ್ಲಿ ಜೊತೆನಿಲ್ಲಬೇಕು
ಬಣ್ಣ ಹೇಗಿರಲಿ ಮನಸು ಸುಂದರವಾಗಿರಲಿ
ಅವನು ನನ್ನವನಾಗಬೇಕು

....ಮಾಲಿನಿ ಭಟ್ ....

Friday 24 August 2012

ಎಚ್ಚರದಿ ಕಾಲಿಡು

ಬುದ್ಧಿ ಬರೋ ಮೊದಲು ಅಂಧನಾಗಬೇಡ
ಅಂಧನಾಗಿ ಜೀವನವ ಕಳೆದುಕೊಳ್ಳಬೇಡ
ತಿಳುವಳಿಕೆ ನಿನ್ನದೇ ಪರಿಶ್ರಮವು ನಿನ್ನದೇ
ನಿನ್ನ ಬದುಕ ನೀ ರೂಪಿಸಿಕೋ

Wednesday 22 August 2012

ಸ್ಫೂರ್ತಿ ನೀ


 
ಕಣ್ಣಿನ ವಿಹಾರದಲಿ , ಮನಸಿನ ಬಣ್ಣವಿದೆ
ಮನಸಿನ ಬಣ್ಣದಲಿ ಹೃದಯದ ಪಲ್ಲವಿಯಿದೆ
ಹೃದಯದ ಪಲ್ಲವಿಯಲಿ ಚಿಂತನೆಯ ಬೆಳಕಿದೆ
ಚಿಂತನೆಯ ಬೆಳಕಲ್ಲಿ ನಿನ್ನ ಸ್ಪೂರ್ತಿಯ ಹನಿಯಿದೆ
 
   ....ಮಾಲಿನಿ ಭಟ್ ............

ರಕ್ಷಾ ಬಂಧನ

ಜೊತೆಯಲ್ಲಿ ಯಾರಿಲ್ಲ ಎಂದು ಅಂಜಿಲ್ಲ ನಾನು
ನನಗಾಗಿ ನೀನಿರುವೆ ಅಣ್ಣ ...
ರಕ್ಷಣೆಗಾಗಿ ನಿಂತಿರುವೆ ನೀ
ಪ್ರೀತಿಯಿಂದ ಸಲಹುವ ನನ್ನ ಪ್ರೀತಿಯ ಅಣ್ಣ
ಮನಸಲ್ಲಿ ನಿನಗಾಗಿ ಸುಂದರ ಕನಸಿದೆ
ನಾವಿಬ್ಬರು ಬೆಳೆದ ಅಳಿಸದ ಗುರುತಿದೆ
ಹಂಚಿಕೊಂಡ ಸುಖ ದುಃಖದ ಪಾಠವಿದೆ
ಸದಾ ನನಗಾಗಿ ಕನಸ ನೇಯ್ದ ನನ್ನ ಪ್ರೀತಿಯ ಅಣ್ಣ
ನಾ ಕಟ್ಟಿಲ್ಲ ನಿನಗೆ ಯಾವ ರಕ್ಷಣೆಯ ಹೊಣೆ
ನಿನ್ನಲ್ಲಿ ಪ್ರೀತಿ  ಇಲ್ಲವೆಂದಲ್ಲ , ತೋರಿಸಲಾಗದು
ಒಂದು ದಾರದಿಂದ ಬಂಧವನ್ನು ಹೇಳಲಾಗದು
ನಿನಗಾಗಿ ಏನನ್ನು ಕೊಡಲಿ ನನ್ನ ಪ್ರೀತಿಯ ಅಣ್ಣ
ನೀನರಿತಿರುವೆ ಎಲ್ಲವನು , ಮೌನವಾಗಿ
ನಿನ್ನ ಜೊತೆ ನಿಲ್ಲುವೆ ನಿನ್ನ ಪ್ರೀತಿಯ ತಂಗಿಯಾಗಿ
ನೀ  ಮರೆಯಲಾರೆ ಎಂದಿಗೂ , ಕಾಲ ಹೇಳಲಾಗದು
ಪ್ರತಿದಿನವೂ ನಿನ್ನ ಪ್ರೀತಿಗೆ ಸ್ವಾರ್ಥಿ ನಾ ಅಣ್ಣ ..
       ...ಮಾಲಿನಿ ಭಟ್ ..............

ಮೌನ ಮಾತಾಗುವ ಮೊದಲು


ನಿನ್ನ ಕಣ್ಣ ಕುಸುಮದಲ್ಲಿ , ಆಳವಾಗಿ ಮೂಡಿದೆ
ನನ್ನ - ನಿನ್ನ ಪ್ರೀತಿ ಮೊಗ್ಗು ಹೂವಿನಂತೆ ಅರಳಿದೆ

ಒಮ್ಮೆ ಮುನಿಸು , ಒಮ್ಮೆ ಒಲವು
ಪ್ರೀತಿಯೊಂದೆ ನಮ್ಮ ಉಸಿರು

ಸುದಿರ್ಘವಾಗಿ ಬಾಳಿ ಬದುಕೋ ಮನದ ಇಂಗಿತ
ಪುಟ್ಟ ಪುಟ್ಟ ಆಸೆ ಹೆಣೆದು ನವಿರು ತಂದಿತು

ಮೌನವಾಗಿ ತಬ್ಬಿ ಕನಸು ಕಂಡೆವು
ನಿನ್ನ ಸ್ಪರ್ಶ ಆಲಿಂಗನ ಮಧುರ ಕ್ಷಣವು

ಹೃದಯದೀಪ ನಿನ್ನ ಆಗಮನಕೆ ಕಾದು ಕುಳಿತಿದೆ
ಸಮಯ ಮೀರದೆ ಬಂದು ತಲುಪು

ನನ್ನ ಹೃದಯದ ಮೌನ ಮಾತಿಗೆ
ಮೌನ ಮಾತಾಗುವ ಮೊದಲು ಪ್ರೀತಿ ನಿನಗೆ ಕಾದಿದೆ ...



         ಮಾಲಿನಿ ಭಟ್


Friday 17 August 2012

ಬಡವನ ಭಾಗ್ಯ


 
 
ರಾತ್ರಿಯ ಕನಸು ಮಬ್ಬಲಿ ಕವಿಯಿತು
ಚಿಂತೆಯ ಸಾರ ಜೀವನ ಬಿಗಿಯಿತು
ಹೆಂಡತಿ ಮಕ್ಕಳ ಕುಂದಿದ ಮೊಗವು
ತಟ್ಟನೆ ನೆನಪಲಿ ಬೆಂದಿತು ಹೃದಯವು
 
ಪ್ರೀತಿಯ ಬೆಳಕು ಬಡವನಲಿ
ಉದಾರ ಮನಸು ಭಾವದಲಿ
ಮನೆಯಲಿ ತುಂಬಿದ ದಾರಿದ್ರ್ಯ ಜೊತೆಯಲಿ
ಎಲ್ಲಾಸೇರಿತು ಮೂಲೆಯಲಿ
 
ಹಸಿವನು ನೀಗಲು ಪಟ್ಟಿಹ ಕಷ್ಟ
ಬೆವರ್ಲಿ ಸಾರಿದೆ ನೋವಿನ ಇಷ್ಟ
ಮಗುವಿನ ಕಣ್ಣಿನ ಆಸೆಯ ತುಡಿತ
ಪತ್ನಿಯ ಸೊರಗಿದ ದೇಹದ ಬಡಿತ
 
ದುಃಖವು ಎದೆಯ ಸಿಡಿದಿತ್ತು
ಬಡತನ ನೋವ ಹರಡಿತ್ತು
ಜೊತೆಯಲಿ ನಿಲ್ಲದ ಬಂಧುಗಳು
ಸ್ವಾರ್ಥವೇ ಸಾಧಿಸೋ ಜನರುಗಳು
 
ಹಣವೇ ಎಲ್ಲವೂ ಎಂದಿತ್ತು
ಬಡತನ ಪ್ರೀತಿಯ ಮುದುದಿತ್ತು
ಪ್ರೀತಿಯ ಮಗುವ ಕನಸು ಕಮರಿತ್ತು
ಆಶಯವೊಂದು  ಆಗಸದಲ್ಲಿ
 
ಬಡತನ ಭಾಗ್ಯವ ಬೆಳಗಿತಾ  ನೋಡು
ಸೂರ್ಯನು ಉದಯಿಸಿದಾಕ್ಷಣದಿಂದ
ಚಿಂತೆಯು ಕಳೆದು ಚಿತ್ತಾರ ಮೂಡಲಿ
ಬಡವನ ಮುಖದಲಿ ಸಂತಸ ಬೆಳಗಲಿ ..
 
 
...ಮಾಲಿನಿ ಭಟ್ .........
 
 

Monday 13 August 2012

ಮತ್ತೆ ಮತ್ತೆ ನೆನಪಾಗುತಿದೆ
ಮೆಲುನುಡಿಯು ಕರೆದಂತಾಗುತಿದೆ
ಮಳೆಯ ಹನಿಯೊಂದಿಗೆ ಜಾರುತಿದೆ
ನಿಲ್ಲು ಗೆಳಯ ನಿಲ್ಲು ನನ್ನ ಅಗಲದಿರು ..
 
   ....ಮಾಲಿನಿ ಭಟ್ .............
ಗೋಕುಲದ ಕುವರ ನೀ
ಗೋವುಗಳ ಪಾಲಕ ನೀ
ರಾಕ್ಷಸರಿಗೆ ಸ್ವಪ್ನ ನೀ
ಪ್ರೀತಿಗೆ ಸರದಾರ ನೀ
 
..ಜನ್ಮಾಷ್ಟಮಿ ಯ ಶುಭಾಶಯಗಳು ....
     ....ಮಾಲಿನಿ ಭಟ್.........
 
ಕನಸುಗಳು ಸಂದಿಸುವ ಆ ಸಮಯದಲ್ಲಿ
ಬೆಳ್ಳಿ ಬೆಳದಿಂಗಳು ಹೊತ್ತ ಆ  ಬಾನಿನಲ್ಲಿ
ಮೆಲ್ಲನೆ ಇಣುಕುತಿತ್ತು ನಗುವಿನ ಮುಖದಲ್ಲಿ
ಗೆಳತಿ ನೀ ನೀಡಿದ ಹರ್ಷಧಾರೆಯ ರಸಜೇನು
 
 
......ಮಾಲಿನಿ ಭಟ್ ....

ಸ್ವತಂತ್ರ ಭಾರತ


 
ಸ್ವಾತಂತ್ರ್ಯದ ಜ್ಯೋತಿ ಹರಡಿತು  ಅಂದು
ದೇಶಕಾಗಿ ಸಾಲು ನಿಂತರು ಜನರು
ದಾಸ್ಯ ಬದುಕಲಿ ನೊಂದು ಹೋದರು
ಮಾತೃಭೂಮಿಗಾಗಿ ಹಗಲಿರುಳು ಹೋರಾಟಗೈದರು
ಹೆಸರು ಪಡೆದರು ಹಲವರು
ಮರೆಯಲ್ಲಿ ಮರೆಯಾಗಿ ಹೋದರು ಅಸಂಖ್ಯಾತ ಜನರು
ಎಲ್ಲರ ಪರಿಶ್ರಮದಿ ಭಾರತ ಎದ್ದುನಿಂತಿತು
 
...ಎಲ್ಲರಿಗೂ ಸ್ವಾತಂತ್ರೋತ್ಸವದ  ಶುಭಾಶಯಗಳು .....
 

Thursday 2 August 2012

ರಕ್ಷಾ ಬಂಧನ

 
 
ಜೊತೆಯಲ್ಲಿ ಯಾರಿಲ್ಲ ಎಂದು ಅಂಜಿಲ್ಲ ನಾನು
ನನಗಾಗಿ ನೀನಿರುವೆ ಅಣ್ಣ ...
ರಕ್ಷಣೆಗಾಗಿ ನಿಂತಿರುವೆ ನೀ
ಪ್ರೀತಿಯಿಂದ ಸಲಹುವ ನನ್ನ ಪ್ರೀತಿಯ ಅಣ್ಣ
 
ಮನಸಲ್ಲಿ ನಿನಗಾಗಿ ಸುಂದರ ಕನಸಿದೆ
ನಾವಿಬ್ಬರು ಬೆಳೆದ ಅಳಿಸದ ಗುರುತಿದೆ
ಹಂಚಿಕೊಂಡ ಸುಖ ದುಃಖದ ಪಾಠವಿದೆ
ಸದಾ ನನಗಾಗಿ ಕನಸ ನೇಯ್ದ ನನ್ನ ಪ್ರೀತಿಯ ಅಣ್ಣ
 
ನಾ ಕಟ್ಟಿಲ್ಲ ನಿನಗೆ ಯಾವ ರಕ್ಷಣೆಯ ಹೊಣೆ
ನಿನ್ನಲ್ಲಿ ಪ್ರೀತಿ  ಇಲ್ಲವೆಂದಲ್ಲ , ತೋರಿಸಲಾಗದು
ಒಂದು ದಾರದಿಂದ ಬಂಧವನ್ನು ಹೇಳಲಾಗದು
ನಿನಗಾಗಿ ಏನನ್ನು ಕೊಡಲಿ ನನ್ನ ಪ್ರೀತಿಯ ಅಣ್ಣ
 
ನೀನರಿತಿರುವೆ ಎಲ್ಲವನು , ಮೌನವಾಗಿ
ನಿನ್ನ ಜೊತೆ ನಿಲ್ಲುವೆ ನಿನ್ನ ಪ್ರೀತಿಯ ತಂಗಿಯಾಗಿ
ನೀ  ಮರೆಯಲಾರೆ ಎಂದಿಗೂ , ಕಾಲ ಹೇಳಲಾಗದು
ಪ್ರತಿದಿನವೂ ನಿನ್ನ ಪ್ರೀತಿಗೆ ಸ್ವಾರ್ಥಿ ನಾ ಅಣ್ಣ ..
 
       ...ಮಾಲಿನಿ ಭಟ್ ..............

Sunday 29 July 2012

ಭೀಷ್ಮ

 
 
ಗಂಗೆಯ ಕುವರ
ಬೆಳೆದನು ರಾಜ್ಯದ ಬೆಳಕಾಗಿ
ಪ್ರೀತಿಯ ಮಗುವಿಗೆ
ಒಲವಿನ ಹೆಸರು ದೇವವ್ರತ
ತಂದೆಯ ಮೋಹದ
ಕಾಮದ ಶರಕೆ
ಅಂಧನೆ ಆದನು ಪುತ್ರನು 
ಸಂಕಟ ನೋಡಲು ಆಗದೆ 
ಹೊರಟನು ಅಂಬಿಗನ ಮನೆಯತ್ತ 
ಕೇಳಿದ ತಂದೆಗೆ ವಧುವಿನ ಭಿಕ್ಷೆ 
ಅಂಬಿಗನಿತ್ತ ಕ್ಲಿಸ್ಟ  ಪ್ರಶ್ನೆ
ನನ್ನ ಮಗಳ ಪುತ್ರರು ರಾಜ್ಯಕೆ
ವಾರಸುದಾರರು ಆಗುವರೇ
ಜೇಷ್ಠ ಪುತ್ರನು ನೀನಿರುವಾಗ
ಯೋಚಿಸಿ ನೀಡಿದ ಸರಳ ಉತ್ತರ
ನಾರಿಯರೆಲ್ಲ ತಾಯಿಗೆ ಸಮ
ಎನ್ನುವ ಪ್ರತಿಜ್ಞೆ ಮಾಡಿದನು
ತಂದೆಯ ಸಂತಸ ನೋಡಿ
ತೃಪ್ತಿಯ ನಗುವ ಬಿರಿದನು
ನಂತರ ತಿಳಿಯಿತು ಲಗ್ನದ ಷರತ್ತು
ಬೇಸರಗೊಂಡನು ಪಾಪಪ್ರಜನೆಯೋಳು
ಪ್ರೀತಿಯ ಪುತ್ರಗೆ ವರವನಿಟ್ಟನು
ಇಚ್ಚಾ  ಮರಣಿಯಾಗು
ಘೋರ ಪ್ರತಿಜ್ಞೆಯ ಪಲವಾಗಿ
ಭೀಷ್ಮನೆಂದು ಹೆಸರಾದನು ........
 
.......ಮಾಲಿನಿ ಭಟ್ .............

Wednesday 25 July 2012

ನನ್ನ ಕಣ್ಣುಗಳ ಕಟ್ಟೆಯಲ್ಲಿ
ತುಂಬು ನೀರಿನ ಹರಿವಿದೆ
ರಭಸದಿ ಸೋಕಿದ ಗಾಳಿಯಲ್ಲಿ
ನೆನಪಿನ ರಸವು ಜಾರುವುದೆಂಬ ಭಯ ..
 
................ಮಾಲಿನಿ ಭಟ್....................

Saturday 21 July 2012

ಚಿರನಿದ್ರೆಗೆ ಜಾರಿದೆಯಾ ನನ್ನ ಕಂದ

 
 
ಪ್ರೀತಿಯ ನನ್ನ ಕಂದ, ನೀ ಗರ್ಭಕ್ಕೆ ಬಂದ ಕ್ಷಣ 
ನನ್ನಲ್ಲಿ ಅದೇನೋ ರೋಮಾಂಚನ, 
ತೆರೆಮರೆಯಲ್ಲಿ   ಪೋಣಿಸಿಟ್ಟೆ, ಪ್ರೀತಿಯ  ಹೂಮಾಲೆಯನ್ನು,
ಪ್ರತಿಕ್ಷಣವು ನಿನ್ನದೇ ನೆನಪು ,
                           ನನ್ನೆಲ್ಲ ನೋವು ಪ್ರೀತಿ ಬಿಂದಿಗೆಯಾಯ್ತು ||
 
ದಿನ - ದಿನ ಕಳೆದು ನೀ ಬಂದೇ ಬಾಳ ದೀವಿಗೆಯಾಗಿ ,
ಮೂಡಣದ ರವಿಯಾಗಿ ಕಿರಣದ ಸ್ಪರ್ಶ ನೀಡಿದೆ,
ಪ್ರತಿದಿನ ಹೃದಯದ ಮೃದುಲ  ಭಾಷೆಯಾದೆ,
ನಿನ್ನ ಕನಸಿಗೆ ಕ್ಷಣ ಬಿಡದೆ ಶ್ರಮಿಸಿದೆ,
 
                                   ನನ್ನೆಲ್ಲ ನೋವು ಮರೆಯಾಯ್ತು||
 
ಮೊಗ್ಗಾಗಿ ಚೆಲ್ಲಿದೆ ಸೌಂದರ್ಯದ ಬೆಳಕು,
ಬೆಳೆಯುತ್ತ ಹರಡಿದೆ ನಗುವಿನ ಸೌಗಂಧ,
ನಿನ್ನ ನಡೆ ನುಡಿ ಮನೆ ನಂದನವಾಯ್ತು ,
ಕರುಳಿನ ಬೆಸುಗೆಯ ಅರ್ಥ ನೀಡಿದೆ,
                               
                                     ನಿನ್ನೋಲುಮೆಯಲ್ಲಿ ಮನ ತಂಪಾಯ್ತು ||
 
ಯಾರು ಕಂಡರು ನಿನ್ನ ಕರುಬೂ ಮನಸಿಂದ,
ಬಂದಿತಲ್ಲ ಗ್ರಹಚಾರದ ಕೂಪ ,
ಉತ್ತರವಿರದ ಪ್ರಶ್ನೆಗೆ ನೀ ಗುರಿಯಾದೆ,
ಮೌನದ ತಡಿಕೆಯಲ್ಲಿ ಚಿರನಿದ್ರೆಗೆ ಶರಣಾದೆ ,
                                      ಇಂದು ಬಾಳೆಲ್ಲ ರಣಗುಡುವ ಸುಡುಗಾಡು||
 
ಚಿರನಿದ್ರೆಗೆ ಜಾರಿದೆಯಾ ನನ್ನ ಕಂದ
ಹೆತ್ತಮ್ಮನನ್ನೇ ಅಗಲಿದೆಯಾ ?
ನಿನಗಾಗಿ ಎಲ್ಲ ಕಷ್ಟ ಸಹಿಸಿದೆ
ನೋವ ಕಣ - ಕಣದಲ್ಲೂ ನಿನ್ನ ಮುದ್ದು ಪ್ರೀತಿಗೆ ಸೋತೆನು
                                      
                                         ನನ್ನೆಲ್ಲ ನಗುವು ನೋವ ಹಾಸಿಗೆಯಾಯ್ತು .
 
 
  ............ಮಾಲಿನಿ ಭಟ್ ..........................
 
 
 

Tuesday 17 July 2012

ನಿನ್ನ ಚಿತ್ರಣ

 
 
ಕನಸಲ್ಲಿ ಬಿಡಿಸಿದ ಚಿತ್ರಕೆ
ಬಣ್ಣವಿಲ್ಲದೆ ಹುಡುಕಾಡಿದೆ
ಮುಂಜಾನೆ ನೋಡಿದರೆ
ನಿನ್ನ ಸುಂದರ ನೆನಪ ಬಣ್ಣ ಬಳಿದೆ
ಎಷ್ಟು ಸೊಗಸಾಗಿದೆ ನೋಡು
ನಿನ್ನ ನೆನಪುಗಳ ನನ್ನ ಚಿತ್ರಣ 
 
...... ಮಾಲಿನಿ ಭಟ್ ...........
ಮನಸ ತುಮುಲ ಎಲ್ಲ ಅಕ್ಷರವಾಗದು
ಹೇಳುವೆನೆಂದರೂ ಎಲ್ಲ ಹೇಳಲಾಗದು
ಅರಿಯದಂತೆ ಮೌನವಾಗುವುದು
ಉತ್ತರ ಹೇಳದೆ ನೀ ಸರಿದ ರೀತಿ ..
 
..........ಮಾಲಿನಿ ಭಟ್.............
 

ಪ್ರೀತಿಯ ಸಾಕ್ಷಾತ್ಕಾರ

ನಿನ್ನ ಕಣ್ಣುಗಳ ಸುಳಿಯಲ್ಲಿ
ಕವಲೊಡೆದ ಕನವರಿಕೆಯಲ್ಲಿ
ಒಲಿದ ಜೀವ ಮೊಳಕೆಯಲ್ಲಿ
ಏರಿಳಿತದ ಉದ್ವೇಗದಲ್ಲಿ
ಮೃದುಲ ಮನಸಿನ ಬಂಧದಲ್ಲಿ
ಮೌನ ಸಂವಹನದೊಂದಿಗೆ
ಸಾಕ್ಷತ್ಕಾರಗೊಂಡಿದೆ ಪ್ರೀತಿಯ ಬಳ್ಳಿ



.............ಮಾಲಿನಿ ಭಟ್ ............

Wednesday 11 July 2012

ಮರೆಯದ ನಿನ್ನ ನೆನಪು


 
ಕನಸ ಮೂಲೆಯಲ್ಲಿ  ಬೆಚ್ಚನೆಯ ಹೊದಿಕೆ ಹರಡಿ
ಮೌನದ ಪದರ ಜೊತೆಯಲ್ಲಿ ನಗುವ ಕದಡಿ
ಮನಸಿನ ಚಿತ್ರಪಟಡಿ ನೆನಪಿನ ಸರವ ಹರವಿ
ನೀನು ನೀಡಿದ ಮಾಣಿಕ್ಯ ಹುಡುಕುತಿರುವೆ ....
 
 
...............ಮಾಲಿನಿ ಭಟ್ .................
 
ನಿನ್ನ ಒಳಗೆ ನಾನಿರಬೇಕೆಂಬ ಆಶಯ
ನನ್ನ ಹೃದಯ ಸುತ್ತ ನೀ ಕಾವಲಿರಬೇಕೆಂಬ ಹಂಬಲ
ನಿನ್ನ ಭಾವನೆ ನನಗೆ ಸೇರಲಿ ಎನ್ನೋ ಬಯಕೆ
ನನ್ನ ಮಿಡಿತ ನಿನ್ನದೇ  ಎಂದು  ಗೃಹಿಸಲಿ ಎಂಬ ತುಡಿತ ..
 
 
 
............ಮಾಲಿನಿ ಭಟ್ ................... 

ಅಪ್ಪಾ ನಿನ್ನ ಬರುವಿಕೆಯಲ್ಲಿ

 
 
ಅರಿತವರು ಹೇಳಿದರು
ಅರಿಯದವರು ಸುಮ್ಮನಾದರು
ಭವಿಷ್ಯಕ್ಕೆ ತಂದೆಯೇ ಶಿಲ್ಪಿ
ನೂರು ಕನಸಿಗೆ ನೀ ಆಧಾರ
ಪುಟ್ಟ ಪುಟ್ಟ ಕನಸ ಬೆಳಕಿಗೆ
ನೀ ಮೌನದೀವಿಗೆ
ನಿನ್ನ ನೆನಪಾಗುತಿದೆ ಅಪ್ಪಾ
ಹೃದಯ ಮಿಡಿಯುತಿದೆ
ಅಪ್ಪಾ - ಅಮ್ಮ ನಿಮ್ಮಿಬ್ಬರ ಹೊರತು
ಮತ್ತೇನು ಬೇಡವಾಗಿದೆ
ತಟದಲ್ಲಿ ಕಾದು ಕುಳಿತಿರುವೆ
ಒಮ್ಮೆಯಾದರು ಬರುವೆಯೆಂದು 
ನಿನ್ನಲ್ಲಿ ಮಾತನಾಡಬೇಕು ಅಪ್ಪಾ 
ನಡೆಯುದನ್ನು ಕಲಿತ ಗಳಿಗೆ ನೀ ಅಗಲಿದ್ದು 
ದೇವ ನಿನ್ನನ್ನು ತನ್ನೆಡೆಗೆ ಸೆಳೆದುಬಿಟ್ಟ 
ಅಪ್ಪಾ ಒಮ್ಮೆ ಬಂದುಬಿಡು 
ನನ್ನ ಅಮ್ಮನಿಗಾಗಿ ಅವಳ ಮಾಸಿದ 
ಕಣ್ಣಿನಲ್ಲಿ ಅಡಗಿರುವ ನೋವಿಗೆ 
ನೀನು ಮಾತ್ರ ಸಮಾಧಾನ ಮಾಡಬಲ್ಲೆ 
ನಿನಗಾಗಿ ಅವಳು ಕಾಯದ ದಿನವಿಲ್ಲ 
ಪ್ರಪಂಚವರಿಯದ ನನ್ನ ಅಮ್ಮ 
ಸುತ್ತುವರಿದ ಸುಳಿಯಿಂದ ನೀನೇ 
ಬಿಡಿಸಬೇಕು , ಅಪ್ಪಾ ನನಗಿಂತಲೂ 
ನನ್ನ ಅಮ್ಮನ ನಗುವಿಗಾಗಿ ನೀ ಬರಬೇಕು 
ಎಲ್ಲಿ ಅಡಗಿರುವೆ 
ನೀಲನಭದ  ಗಾಳಿಯಲಿ 
ಲೀನಗೊಂದೆಯಾ
ಅಪ್ಪಾ ಕರ್ತವ್ಯ ಮರೆತು  ಹೋಗದಿರು,
ನಿನಗಾಗಿ ಕಾಯುತಿರುವೆ
ಕಣ್ಣೀರು ತಡೆದು , ನಿನ್ನ ನೆನಪಿನೊಂದಿಗೆ ...
 
 
.............ಮಾಲಿನಿ ಭಟ್ ...................

Sunday 8 July 2012

೧.)
ಹೃದಯ ಅವ್ಯಕ್ತ ಭಯದಿ ತೇಲಿದೆ
ಸಾಂತ್ವನ ಮಾಡೋ ಮನಸು ಮರೆಯಲಿ
ನಿನ್ನ ನೆನಪು ಘಾಸಿ ಮಾಡಿದೆ
ಹೇಗೆ ನಿನಗೆ ತಿಳಿಸಲಿ ....
 
೨.) ಪುಟ್ಟ ಮಗುವೆ
ನಿನ್ನ ಜೊತೆ ನಾ ಸೋತೆನು
ನಿನ್ನ ಮುದ್ದು ಮುಖದಿ
ಹೊಳೆಯುತಿಹುದು
ಪುಟ್ಟ - ಪುಟ್ಟ ದೀಪವು
ಸದಾ ಚೆಲ್ಲುತಿರಲಿ
ಆನಂದದ ತೈಲವ ...
 
 
 
.................ಮಾಲಿನಿ ಭಟ್....................

Thursday 5 July 2012

ನಿನ್ನ ಆಗಮನಕೆ
 
ಆ ಗಾಳಿ ತೂಗೋ ಮೆಲ್ಲುಸಿರ ಗಾನಕ್ಕೆ
ಎದೆಯ ಕಣವೂ ಕಂಪಿಸಿತು
ಅತ್ತಿತ್ತ ನೋಡೋದರವೊಳಗಾಗಿ ಬಂದಿರುವೆ
ಮುದ್ದಾದ ಹೂವ ಪರಿಮಳವ ತಂದಿರುವೆ
ಮನದಲ್ಲಿ ಮಡಚಿಟ್ಟ ಹಾಳೆಯು ತೆರೆದಿರುವೆ
ಬೆಚ್ಚನೆಯ ಬೆಸುಗೆಯ ಮುದ ನೀಡಿರುವೆ
ಬೆಳಕು ಚೆಲ್ಲೋ ಕಂಗಳಿಂದ ಕಾದಿರುವೆ ...
 
..ಮಾಲಿನಿ ಭಟ್..............

Monday 2 July 2012

ದೇವ ಸ್ಮರಣೆ

 
ನಿತ್ಯ ಸಂಕಲ್ಪದಿ ಕರಮುಗಿದು ಪ್ರಾರ್ಥಿಸು
ಆತ್ಮಶಕ್ತಿಯ ವರ್ಧಿಸೋ ಆಗರ
ನಿನ್ನ ಸ್ಮರಣೆಯೊಂದೇ ಶ್ರೇಷ್ಠ ಕಿರಣ
ಕತ್ತಲಿಂದ ಬೆಳಕಿನೆಡೆಗೆ ನಡೆಸೋ ಹರಿವು  ..
 
 
.............ಮಾಲಿನಿ ಭಟ್ ..................

Friday 29 June 2012

ಪ್ರೀತಿ


 
ಪ್ರೀತಿಯ ಕುಸುಮವೇ
ಹೃದಯದಿ ಕೆತ್ತಿದೆ ನಿನ್ನಯ ಪಟವ
 
ಗಗನದಿ ನೋಡಿದ ಸುಂದರ ತಾರೆಯೇ
ಮನಸಲಿ ಬರೆದೇನು ನಿನ್ನಯ ಹೆಸರ
 
ಮಾಗಿಯ ಚಳಿಯ ನಿನ್ನಯ ಮೊಗವೇ
ನನ್ನ  ಒಡಲ ಹಸಿರಿನ ತಾಣವೇ
 
ಕಂಪ ಸೂಸುವ ಗಂಧವೇ
ಪದ ವಿನ್ಯಾಸ ನಾ ಕಾಣೇ
 
ಮುಸುಕಿದ ತೆರೆಯೇ
ನಂದಾದೀಪ ನೀ ನನ್ನ ಹೃದಯದ
 
ಹೊಸಹಾರೈಕೆ  ಓ  ಒಲವೇ
ಚಿತ್ತಾರವ ಬಿಡಿಸಿದೆ ನನ್ನ ಮನದಂಗಳದಿ
 
ಲತೆಯ ಮಾಧುರ್ಯವೇ
ಹೆಣೆದು ಬಿಡು ಹೊಸ  ಸಂಬಂಧವ ..
 
 
.......ಮಾಲಿನಿ ಭಟ್ ...................
 
ಸಾಗರದ ಆಚೆ, ಕಿನಾರೆ ಮಗ್ಗುಲಲ್ಲಿ
ನನ್ನದೊಂದು ಪುಟ್ಟ ಗೂಡಿದೆ
ಗದ್ದಲದ ಬದುಕ ದೂಡಿ
ಶಾಂತವಾಗಿ ಬಂದು ನೋಡಿರಿ
ಇಲ್ಲಿಯೇ ಹೊಸದು ವಿಶ್ವ ಕಟ್ಟಿ ಕೊಳ್ಳೋಣ ...

Thursday 28 June 2012

ಸೆಟೆದು ನಿಂತ ಬೆನ್ನುಹುರಿ
ತದೇಕಚಿತ್ತದ ಮನಸು
ದೃಷ್ಟಿ ಬದಲಿಸದ ಕಣ್ಣ ಹೂಗಳು
ನಿರಂತರ ಚಲನೆಯ  ಕೈ ಬೆರಳುಗಳು
ತಲೆ ತುಂಬಿಕೊಂಡಿರುವ ಗೊಂದಲ
ಸ್ವಂತ ಕನಸಿಗೆ ಬಣ್ಣ ಬಳಿಯದೆ
ದೂರವಿರಿಸೋ   . ಇಂದಿನ ಸ್ವಾಫ್ಟವೇರ್ ಗಳು
 

Wednesday 27 June 2012

ತುಟಿಯ ಅಂಚಿನಲ್ಲಿ  ಹೊರಳಿದ  ನಗುವಿಗೆ  
ತಾರೆಯೇ  ಮೋಹಗೊಂಡಿದೆ
ಚಂದನದ ಮುಖವು ಕಾಂತಿಯಲಿ ತೇಲಿದೆ
ನನ್ನ ನಗುವಿಗೆ ನೀನು ಕಾರಣ ಗೆಳಯ
ನಿನ್ನ ಒಲವಿನ ಮಾತು ಸ್ಪೂರ್ತಿಯು .
 
 
ನಿನ್ನ ಜೀವನ , ನಿನ್ನ ಕನಸು  ಏಲ್ಲವೂ ನಿನ್ನದೇ
ಉಕ್ಕಿ ಹರಿವ ಜಲಪಾತದಲ್ಲಿ
ತೇಲಿ ಬಂದ ಕಸವು ನಾನು
ರಕ್ತ ಸಂಬಂಧದ  ಹೆಸರ ನೀಡಿದೆ
ಕಸವು ಚಿತ್ರವಾಗದು ಗೆಳಯ
ಮರಳಿ ತೇಲಿ ಬಿಡು ತನ್ನ ಗೂಡ ಸೇರಲಿ ...
 
 
....ಮಾಲಿನಿ ಭಟ್ ............
ಉಸಿರ ಗಾಳಿ ಹೃದಯ ಸೋಕಿದಾಗ
ನೆನಪಾಗಿದ್ದು ನೀನೇ
ಮನಸು ಮೌನದಲ್ಲಿ ಕರಗಿದಾಗ
ಸೆಳೆದಿದ್ದು ನೀನೇ
ಕಣ್ಣೀರು ಕನಸಿನೊಂದಿಗೆ ಜಾರಿದಾಗ
ನೋವು ನೀಡಿದ್ದು ನೀನೇ
ಭಾವನೆಗಳು ಬರಿದಾದಾಗ
ಮತ್ತೆ ಮನಸಿಗೆ ಹತ್ತಿರವಾಗಿದ್ದು ನೀನೇ ..
 
 
.....ಮಾಲಿನಿ ಭಟ್ ......................

Monday 25 June 2012

ಹೊಸದು ಭಾಷ್ಯ

  
 
ಕಪ್ಪು ಮೋಡ ಬಾನ ತುಂಬಾ ಹರಡಿಕೊಂಡಿದೆ
ಚಲಿಸೋ ಗಾಳಿ ಮೌನವಾಗಿ ಗೂಡ ಸೇರಿದೆ
 
ಜಗದ ಶಿಲ್ಪಿ ಹುದುಗಿಹೋದ ಮಣ್ಣ ಕಣದಲಿ
ಹರಿಯೋ ನೀರು ತನ್ನ ಕಾಯ ಮರೆತ ಹಾಗಿದೆ
 
ಲೋಕವೆಲ್ಲ ಮಿಥ್ಯದಡಿಗೆ ಬಂಧಿಯಾಗಿದೆ
ಮಾನವತೆಯು ಜೊಳ್ಳು ತಬ್ಬಿ ಅಜ್ಞಾನ ಮೊಳಗಿದೆ
 
ನಿತ್ಯ ತೈಲವೆರೆಯೋ ಕೈ ರಕ್ತ ಬಸಿದಿದೆ
ಜ್ಞಾನದೀಪ ಷೋಕಿ ಮಡಿಲ ಅಡಗಿ ಕೂತಿದೆ
 
ಜಗದ ಜನಗೆ ಕರಿಯ ಪಟ್ಟಿ ಕಣ್ಣ ಕಟ್ಟಿದೆ
ವಿಶ್ವಕೆಲ್ಲ ಹೊಸದು ಭಾಷ್ಯ ಬರೆಯಬೇಕಿದೆ ...
 
ಮುಂಜಾನೆಯ ಶುಭಾಶಯಗಳು ...................
 
 
............ಮಾಲಿನಿ ಭಟ್ ..................

Thursday 21 June 2012

ಇಂದು ನನಗೆ ನೀನೇ ಕಂದನು


 
ಅಮ್ಮ ನಿನ್ನ ಮಡಿಲಿನಲ್ಲಿ ಮಲಗುವಾಸೆ
ನನ್ನ ತೋಳಿನಿಂದ ನಿನ್ನ ಮುದ್ದುವಾಸೆ
ಮಮತೆ ಬಡಿಸಿ , ಪ್ರೀತಿಯಿಂದ ಸಲಹುವಾಸೆ
ದೇವನನ್ನು ಕಾಣದಾದೆ ನಿನಗೆ ಪೂಜೆ ಮಾಡುವಾಸೆ
                         ಇಂದು ನನಗೆ ನೀನೇ ಕಂದನು ||
 
ನಿನ್ನ ಉಸಿರು ನನಗೆ ನೀಡಿ ಜೀವ ತುಂಬಿದೆ
ರತ್ನದಂತೆ ನನ್ನ ನೀನು ಸಾಕಿ ಬೆಳೆಸಿದೆ
ಗುರುವು ನೀನೇ , ದೈವ ನೀನೇ , ನನ್ನ ಪಾಲಿಗೆ
ನಗುವ ತಾರೆಯಂತೆ ನೀನು ಬೆಳಕ ಚೆಲ್ಲಿದೆ
                           ಇಂದು ನನಗೆ ನೀನೇ ಕಂದನು ||
                                   
ಮೌನವಾಗಿ ನೋವು ತಿಂದು ಸುಖವು ನೀಡಿದೆ
ಗುಬ್ಬಿಯಂತೆ ನನ್ನ ನೀ ಕಾದು ತುತ್ತ ಕೊಟ್ಟೆ
ನಿನ್ನ ಸುಖವ ತ್ಯಜಿಸಿ ನನಗೆ ಪ್ರೇಮ ನೀಡಿದೆ
ಸವೆದ ಹಾದಿ ನನ್ನ ನೋಡಿ ನೀನು ಮರೆತೇ
                          ಇಂದು ನನಗೆ ನೀನೇ ಕಂದನು ||
 
 
 
 
 
       ...ಮಾಲಿನಿ ಭಟ್.........

ನನ್ನ ಬಾಳು

 
 
ನನ್ನ ಬಾಳು ನನ್ನದು
ನನ್ನ ಕನಸು ನನ್ನದು
ಉರಿವ ಬೆಳಕ ತಪ್ಪಲಲ್ಲಿ
ಮೌನಗೆರೆಯೇ ಉತ್ತರ
ಜೀವ ಕಳೆದ ಸಾಲಿನಲ್ಲಿ
ಸವೆದ ಮಣ್ಣ ಅಣುವಿನಲ್ಲಿ
ನನ್ನ ನೆರಳ ಆಕೃತಿ
ತಂಪ ನೀಡೋ ಮಾತೇ ಇಲ್ಲ
ಬರಿಯ ನಡಿಗೆ ಜೊತೆಯಲಿ
ಋಣವು ಇರುವ ಕ್ಷಣದವರೆಗೆ
ನಾನು ನನ್ನದು ಪಲ್ಲವಿ
ಎಲ್ಲ ಮುಗಿದ ಕೊನೆಯ ಹಂತಕೆ
ಕದವ ತೆರೆದು ನಡೆಯಲು ...
 
 
..ಮಾಲಿನಿ ಭಟ್ ./....
 
 
ಮೋಡ ಕಟ್ಟಿದ ಬಾನು
ಹುದುಗಿ ಇಟ್ಟಿರೋ ಜಲವನು
ಭುವಿಯ ಸೆಳೆತ ; ಮಣ್ಣು ಕಾದಿದೆ
ತಂಪ ಮಾಧುರ್ಯಕೆ ,
ಮಣ್ಣ ಗಂಧಕೆ
ವಿಶ್ವ ಸಂಕುಲ ತನ್ಮಯವಾಗಿದೆ ...
 
 
 
...........ಮಾಲಿನಿ ಭಟ್ ....................
ಮತವೆಂಬ ಬೇಧ
ಮನಸೆಂಬ ಜೀವದಲಿ
ಅಪ್ಪಿ ಹಿಡಿದ ಜಡತೆ
ದೂರದಲಿ ನಿಂತು
ಮಾನವತೆಯ ಹತ್ಯೆಗಯ್ಯೋ
ನಿಜವಾದ ಕೊಲೆಪಾತಕರು..
 
...ಮಾಲಿನಿ ಭಟ್................. 
 
ಅಮ್ಮಾ ನಿನ್ನ ಆದರ
 
ಕರೆಯುವಳು ಮನಸೋಲುವವರೆಗೆ
ಒಲೈಸುವಳು ಹೃದಯ ಬತ್ತುವವರೆಗೆ
ಪ್ರೀತಿಸುವಳು ಜೀವವಿರುವವರೆಗೆ
ಆದರಿಸುವಳು ಪ್ರಪಂಚ ನಿಬ್ಬೆರಗಾಗುವಂತೆ ..
 
 
 
 
.....ಮಾಲಿನಿ ಭಟ್ .................
 
ಸಿಗದ ನೀ  ಬಹುದೂರ
 
ಗಗನ ಚಪ್ಪರದಿ ಅರಳಿದ ಕುಸುಮ ನೀನು
ಕೈಯಲ್ಲಿ ಹಿಡಿಯಬೇಕೆಂಬ ಬಯಕೆ
ನೀ ಬಹುದೂರದಲಿರುವುದ ಮರೆತೇ
ನಿನ್ನ ಎದುರಲಿ ಕುಳಿತಿರಲು ಬಯಸಿದೆ
ಪದೇ ಪದೇ ನಿನ್ನ ಮಾತೆ ಕೇಳುತಿದೆ
ನಾ ನಿನಗೆ ಸಿಗಲಾರೆ ಮರೆತುಬಿಡು 
 
 
 ....ಮಾಲಿನಿ ಭಟ್ .....
ನಿನಗಾಗಿ ನಾನೇನು ಕೊಡದಾದೆ,
ನಿನ್ನ ಸ್ನೇಹವು ಮಾತ್ರ ಚಿರನೂತನ
ನಿನ್ನ ಮನವು ನನಗೆ ಆದರ್ಶವಾಗಿರಲಿ
ನಿನ್ನ ನಡತೆ ಅಪರಂಜಿಯಂತಿದೆ
ನೀನಾದೆ   ನನ್ನ ಜೀವದ ಗೆಳತಿ
ನಿನಗಾಗಿ ಒಂದು ಶುಭ ಕೋರದಾದೆ
ಮರೆವೆಯ ಪರಿ ಅರಿಯದಾದೆ
ಕ್ಷಮೆ ಇರಲಿ, ಒಲವಿನ ಗೆಳತಿ ..
 
....ನಿನ್ನ ಪ್ರೀತಿ ಗೆಳತಿ ...
 
 
........ಮಾಲಿನಿ ಭಟ್ .....................
ಮೌನ ಗೆರೆಯ ಪರಿಧಿಯ  ಒಳಗೆ
ಹನಿಗಳ ಗುಚ್ಹ ಅರಳಲು ನಿಂತಿದೆ
ಒಳಗಿನ ಭಾವನೆ ಬೆಳಕನು ನೋಡಲು ಕಾದಿದೆ
ಜೀವನ ನೌಕೆಗೆ ,ಬೇಲಿ  ಹೊರಗೆ
ಜೊತೆಯಲಿ ನಡೆಯುವ  ಬಾ
ಮಧುರ ಮನಸಿನ ಮಾತುಗಳ ಸರದಿಯಲಿ ...
 
 
............ಮಾಲಿನಿ ಭಟ್ .........................
 

Thursday 14 June 2012

ಮನೆಯ ಮಾಡಿನ ಹಂಚಿನ ಮಧ್ಯೆದಿಂದ
ಮಳೆ ಬಂದಾಗ ಸುರಿಯೋ ಆ ಚಿಕ್ಕ ನೀರ ಹನಿ
ನನ್ನ ಮನದ ಪುಟ್ಟ ಸಸಿಗೆ ಜೀವ ತುಂಬುವುದೇ ?
ನಿನ್ನ ಬರುವಿಕೆಗೆ ಕಾದು ಕುಳಿತಿರುವೆ ...
 
 
 
...........ಮಾಲಿನಿ ಭಟ್..............
 
 

Tuesday 12 June 2012

೧.)
 
 ಚಕ್ರವ್ಯೂಹ
 
ಎಳೆಯ ಕಂದನೆ
ನೀನರಿಯೆ  ಈ  ಜಗದ
ನಿಯಮವ
ಕಣ್ಣ ಬಿಡುವ ಮುನ್ನ
ಎಚ್ಚರದಿಂದಿರು ...
 
೨.)
     
 ಪ್ರೀತಿ
 
ಕಾಣದಾದ ದಾರಿಯಲ್ಲಿ
ತಿಳಿಯದಾದ ಮನಸಿನಲ್ಲಿ
ಅವಿತು ಅವಿತು ಆವರಿಸಿ
ಕುಳಿತಿರುವೆ ನೀನು .....
 
..... ಮಾಲಿನಿ ಭಟ್ .......
 
 
 
ಮೋಡ ಕಟ್ಟಿದ ಬಾನು
ಹುದುಗಿ ಇಟ್ಟಿರೋ ಜಲವನು
ಭುವಿಯ ಸೆಳೆತ ; ಮಣ್ಣು ಕಾದಿದೆ
ತಂಪ ಮಾಧುರ್ಯಕೆ ,
ಮಣ್ಣ ಗಂಧಕೆ
ವಿಶ್ವ ಸಂಕುಲ ತನ್ಮಯವಾಗಿದೆ ...
 
 
 
...........ಮಾಲಿನಿ ಭಟ್ ....................

Friday 8 June 2012

ಮಮತೆ ಪ್ರತೀಕ

 
 
ಹೂವ ಬಳ್ಳಿ ಚಾಚಿ ನಿಂತಿದೆ
ಪರಿಮಳವ ನೀಡಲೆಂದು
ಮೆಲ್ಲ ಬೆಳಕು ಬಂದ ಕ್ಷಣವೇ
ತನ್ಮಯತೆಯಲಿ ತೇಲಿದೆ
ಜಗಕೆ ಸತ್ವ ನೀಡಿದೆ
ಮಮತೆಯ ಪ್ರತೀಕವಾಗಿ ...
 
 
....ಮಾಲಿನಿ ಭಟ್ ..................

ಕಣ್ಣೀರು

ಹೃದಯ ಸಾಗರದಲ್ಲಿ
ಜೋಡಿಸಿಟ್ಟ ನಿನ್ನ ಮಾತುಗಳು
ಇಂದು ಕಣ್ಣಿರಾಗಿ ,
ಮುಖದ ಸೌಮ್ಯತೆಯಲಿ
ಛಾಪು ಮೂಡಿಸಿದೆ,
ಸೋತ ನಯನದ
ನೂರು ಕನಸಿನ ಚಿತ್ರಪಟವು ಬಾಡಿದೆ,
ಮುಂಗುರಳು ಕಣ್ಣೀರ  ಜೊತೆ ನಡೆದಿದೆ
ಕೈಗಳು ಶಕ್ತಿಹೀನವಾಗಿದೆ ,
ಅಲ್ಲಲ್ಲೇ ಕಣ್ಣೀರ ಒರೆಸಲಾರದೆ
ತಟಸ್ಥ ತಳೆದಿದೆ..
ನಿನ್ನ ಹೃದಯವು ಈಗ ನನ್ನಲ್ಲಿಲ್ಲ
ಎಲ್ಲ ದೂರ ಸರಿದಿದೆ
ನಿರಂತರ ಚಲನೆಯ ವಾಸ್ತವಕೆ
ಮತ್ತೆ ಹಳೆ ಗುರುತು ಒಂದೇ
ಕಣ್ಣಿರಾಗಿ ಕಾಡುತಿದೆ ....
................ಮಾಲಿನಿ ಭಟ್..................

Wednesday 6 June 2012

ಮನಸ ತೋಟದಲಿ

 
 
ಇದು ಎಂಥ ಅನುಬಂಧವೋ
 ಭಾವನೆಯ ತೆರೆಯ ಮನದಿ
ಕನಸಿನ ಸುಪ್ತ ಬೀಜದಿ
ನನ್ನ ದೇಹ , ನನ್ನ ಜೀವ
ನಿನ್ನ ಅಡಿಯಲಿ .....
 
 
......ಮಾಲಿನಿ ಭಟ್...................
 
 
 

ಇನಿಯ


ಕಣ್ಣ ಬಳಿಯಲಿ ಸುಳಿಯುವೆ
ತಂಪ ಗಾಳಿ ಸೋಕೊ ರೀತಿ
ಮನದ ಇಂಚು ಜಾಗದಲ್ಲೂ
ನಿನ್ನದೇ ಚಿಲಿಪಿಲಿ
ಹಲವು ರಂಗು ಮನಕೆ
ನಿನ್ನ ಒಂದು ನೋಟಕೆ
ಮಿಟುತಿಹುವುದು ಹೃದಯವು
ನಿನ್ನ ನೆನಪ ಚಕ್ರದಲಿ
ಯಾರು ಅರಿಯದಂತೆ ನೀಡಿದೆ
ಕನಸ ಗರಿಯ ಹೊಳಪನು ...
 
 
....ಮಾಲಿನಿ ಭಟ್..............

ಪರಿಸರ ದಿನ

 
 
ನಮ್ಮಯ ಸುತ್ತಲು ಕವಿದಿರೋ  ಕಾಣದ ಮುಸುಕಿನಲಿ
ಪದರಿನ ಲೇಪದಿ ಮರೆಸಿರೋ ತಿಳಿಯದೆ ಅಂಧತೆಯಲಿ
ನಮ್ಮಯ ಸಲಹುವ ಮರಗಳ ಅಳಿವಿನಲಿ
ಶಕ್ತಿಯ ನೀಡೋ ಜಲದ ಕಲ್ಮಶದಲಿ
ನಶೆಯ ಲೋಕದಲಿ ,
ಸುಂದರ ಪರಿಸರವ ಸಾಯಿಸುವ
ಎಲ್ಲರೂ ಸೇರಿ ... ಮನವನು ಮೆಚ್ಚಿ
ಭವ್ಯತೆ ಮಂದಿರ ಕಟ್ಟೋಣ
ಉಸಿರನು ಹಂಚೋ ಜೀವಕೆ ನಾವು
ಪ್ರೀತಿಯ ಒಪ್ಪಿಗೆ ನಿಡೋಣ..
 
 
 
 
 
              ಮಾಲಿನಿ ಭಟ್............... 
 

Friday 1 June 2012

ಭಾರತ ದೇಶ

ಭಾರತದಲಿ ಉದಯಿಸಿದ ನಾವು
ಹಲವು ಭಾಷೆಯ ಸಮ್ಮಿಶ್ರದಲಿ
ಧರ್ಮ ಸತ್ವದ ಸಂಸ್ಕಾರದಲಿ
ಕೊಳಲು ನಾದ ಸ್ವರ ಸಲ್ಲಾಪದಲಿ
ಚರಣ ಕಾಂತಿಯ ಶುಭ್ರತೆಯಲಿ
ಭವ್ಯತೆಯ ಶಿಖರದಲಿ
ಅತ್ತ ಹಿಮಾಲಯ ತುದಿಯಲಿ
ಬಳುಕುತ ಸಾಗಿವೆ ಶ್ರೇಣಿಗಳು
ಸಾಧನೆ ಶಕ್ತಿಯ ಎತ್ತರಿಸಿ
ದೇವತೆಯಂತ ನದಿಗಳು ಹರಿದಿವೆ
ಸಾವಿರ ಸಾವಿರ ದೂರವ ಕ್ರಮಿಸಿ
ಮಣ್ಣನು ತಿದ್ದಿವೆ ಸುಂದರ ಫಲಕೆ
ಮಧ್ಯದಿ ಸಮತಲ
ತ್ರಿಕೋನ ಮೆರೆದಿದೆ
ಅಂಚುಗಳಲಿ ಅರಳಿವೆ
ಸಾಗರ ತೀರ, ತೆಂಗು - ಕಂಗಳ
ನೆಲೆಬೀಡಾಗಿ ,. ಜನರನು ಹರಿಸಿದೆ ಬಾ ಎಂದು
ಜನ್ಮವು ಇರುವುದು ಮಗದೊಂದು
ಹುಟ್ಟಿ ಬರುವೆನು ನಾ ಭಾರತದಲಿ ...
............ಮಾಲಿನಿ ಭಟ್ .......................

ಮೋಹದ ಅಲೆ


 
ಮನಸಲಿ ಸುಳಿದ ಮಾತಿನ ಪಲ್ಲವಿಗೆ
ಮಿಡಿಯಿತು ಹೃದಯದ ಕನ್ನಡಿಯು
ಸುತ್ತಲು ತಿರುಗುವ ಭೂಮಿಯಲ್ಲಿ
ಸಾಗರದಲೆಯ ಸುಳಿಯಲ್ಲಿ
 ಮೋಹನ ತೆರೆಯ ನಾಟ್ಯದಲ್ಲಿ
ಸಿಲುಕಿದ ನಿನ್ನನು ಕಂಡೇನು
ಕರಗಿದೆ ನಿನ್ನಯ ಮಾಯದ ಬೆರಗಿಗೆ
ನಿನ್ನಲಿ ನಾನು ಸೇರಿರಲು
ಅರಿವಿನ ಬಲವು ಕದವನು ತೆರೆಯಲು
ಸೋಲಿನ ಗೆರೆಯ ಮುಟ್ಟಿರಲು
ಬಿಡಿಸಲು ಆಗದೆ ನಲುಗಿರಲು
ಉಸಿರಿನ ಕೊನೆಯೂ ಕಾದಿರಲು
ಮಿಂಚಿತು ಕಿರಣವು ದೂರದಲಿ .
 
 
..................ಮಾಲಿನಿ ಭಟ್ ..........
 
 
 

ನಿರೀಕ್ಷೆ

            
ನರಗಳು ಸ್ಪಷ್ಟವಾಗಿ ಕಾಣೋ ಆ ಕೈಗಳು
ಮೂಕವೇದನೆಯಲಿ ಸೊರಗಿದ ತನುವಿನಲಿ
ಪ್ರತಿನಿತ್ಯ ದೇವರ ಪ್ರಾರ್ಥನೆಯಲಿ
ಒಂದೇ ಸಮ ಸಲ್ಲಿಸುವ ವಿನಂತಿಯಲಿ
ಹೊಸ ಬೆಳಗು ಮೂಡಿ ಬರಲಿ ನಿರೀಕ್ಷೆಯಲಿ ..
 
 
........ಮಾಲಿನಿ ಭಟ್......................
 
ಕಣ್ಣ ತುದಿಯ ಅಂಚಿನಲಿ , ಹೊಳೆ ಹೊಳೆಯುತ ಬೆಳಗಿದೆ
ನನ್ನ ಹೃದಯವೆಂಬ ದೇಗುಲವ, ಅಲೆಯ ಅಗಲದಿ ತುಳುಕಿಸಿದೆ
ಚಿಗುರಾಗಿ ನಲುಗಿದ ಕುಡಿಯ ಮನಸಿನಾರಾಧನೆಗೆ
ಹೊಸ ದಿಗಂತದ ಸೂರ್ಯ ಕಿರಣ ಹರಿದು ಬರಲಿ ...
 
 
 
 
 
            ............ಮಾಲಿನಿ ಭಟ್.................

Thursday 31 May 2012

ಮಾತನಾಡಲು ಏನಿದೆ ?

 
ಸಂಬಂಧಗಳು ದೂರ ದೂರ
ಅರ್ಥವಾಗದ ಬದುಕಿನಲಿ
ಪರಿಚಿತರಾಗಿ ಸರಿಯುವರು
ಉತ್ತರವಿರದ ಪ್ರಶ್ನೆಗೆ
ಅರಿತವರಾಗಿ ಬಂದು ಅರಿಯದವರಾಗಿ
ಕಳೆದು ಹೋಗುವರು
ನಾಳೆ ಇರದ ಬಾಳಿನಲಿ ..
 
....ಮಾಲಿನಿ ಭಟ್ ..............

Friday 11 May 2012

ಜೀವನ ಜೋಕಾಲಿ
ಭಾವನೆಗಳ ಸಮ್ಮಿಲನ
ಮಧುರತೆಯ ಕಲ್ಪತರು
ಸುತ್ತಿಟ್ಟ ಗೂಡಲಿ
ಪ್ರತಿಕ್ಷಣ ಹೊಸಚೈತನ್ಯ ಚಿಮ್ಮಲಿ
ಮನಸಿನ ತೋಟದಲಿ ..
 
 
....ಮಾಲಿನಿ  ಭಟ್

ಮರಳಿ ಬಾ ಗೆಳಯ ..



ಕೈ ಬೆರಳು ಮೃದುವಾಗಿ
ಕೀ ಬೋರ್ಡ್ ಅದುಮಿ
ನಿನ್ನ ಹೆಸರು ಶುರುವಾಗಿ
ನನ್ನ ಕಣ್ಣು ಹನಿಯಾಗಿ
ಒಲವು ಹುಸಿಯಾಗಿ
ಕನಸು ನೆರಳಾಗಿ
ನಿನ್ನ ನೆನಪು ಚಿರವಾಗಿ
ಮನವು ಹಸಿಯಾಗಿ
ಕಾದು ಕುಳಿತಿದೆ
ನಿನ್ನ  ಆಗಮನಕೆ ..


...........ಮಾಲಿನಿ ಭಟ್ ......................
 

Friday 4 May 2012

ಮುದುರಿಕೊಂಡು ಚಾಪೆ ಮೇಲೆ ಮಲಗಿಕೊಂಡಿರುವ 
ಸಾವಿರ ಕನಸುಗಳೊಂದಿಗೆ , ಕಮರಿದ ಬದುಕ ಹಿಡಿದು
ಆಳದ ಮನಸಲ್ಲಿ ಉಳಿದ ದೀಪದ ಪ್ರಜ್ವಲತೆಯಲ್ಲಿ
ಮುನಿದ ಕತ್ತಲೆಗೆ ಶರಣು ಹೋದ ನಿನ್ನ ಏನನ್ನಬೇಕು ...
 
 
.......ಮಾಲಿನಿ ಭಟ್.....

ಮುಂಜಾನ ಸೊಬಗು

 
 
ಮುಂಜಾನೆ ರವಿ ಮೂಡೋ ಮುನ್ನ
ಪ್ರೀತಿಯ ಸೆರಗೊಡ್ಡಿ ,
ಕರೆದ ಸ್ವಚಂದ ಎಲೆ
ಎಲೆಯ ತಬ್ಬಿದ ಇಬ್ಬನಿಯ ಮುತ್ತು 
ನವಿರಾದ ಸ್ಪರ್ಶಕೆ ..
ನಾಚಿದ ನಿನ್ನ ...
ಪ್ರೇಮದ  ತಂಪಿಗೆ
ದಿನಕರ ಹೊನ್ನಿನ ಬೆಳಕ ನಿಡುತಿರುವನು..
 
..ಮುಂಜಾನೆಯ ಶುಭಾಶಯಗಳು ...
 
ಪ್ರೀತಿ ನೀ ದೂರ
 
ನನ್ನ ಕಂಗಳ ತುಂಬಾ ನಿನ್ನದೇ ನೋಟ
ನೀ ದೂರ ನಡೆದ ದಾರಿಯ ಗುರುತು
ಜೊತೆ ಪಯಣಿಸಿದ ಹೆಜ್ಜೆಗುರುತುಗಳು
ಆ ದಾರಿಯು ಇಂದು ಮುಳ್ಳಗರಿಕೆಯಾಗಿದೆ
ಅಲ್ಲೊಮ್ಮೆ ನಡೆದಾಡಿದರೆ ರಕ್ತ ಕಣ್ಣೀರು
ಜೀವ ತೇಯುವುದು , ಮರೆಯದ ನೋವು
ನೀ ನೀಡಿದ ಪ್ರೀತಿಯ ಕೊಡುಗೆ
 
...............ಮಾಲಿನಿ ಭಟ್.............
ಮುಸುಕ ಮಬ್ಬು ಬಾನ ತುಂಬಾ
ಕರಿಯ ಪದರು ಹೊದಿಕೆ ಅಗಲ
ಮೌನದಲ್ಲಿ ಚಂದ್ರ ಮಲಗಿ
ನಿದಿರೆ ಮರೆತು ಕಾದು ಕುಳಿತನು
ನಿಶೆಗೆ ಕಾವಲಾಗಿ ....
 
 
 
 
ಮಾಲಿನಿ ಭಟ್..........................
 

Tuesday 24 April 2012

ಸರಿದಾಡದ ನೋವ ಜಾಲ

 
 
ಬಾಲ್ಯ ಜೊತೆಯಲಿ  ಕಾಲದ ಮಿಲನದಿ
ಸರಿದು ಹೋಗಿದೆ , ಕನಸ ಕಲ್ಪನೆ
 
ಒಡೆದ ಹೃದಯ ಕನ್ನಡಿ , ಹೆಣೆದಿದೆ
ಜಾಲದ ಬಲೆಯನು ಮನಸ ಗೂಡಲಿ
 
ಕಣ್ಣ ರೆಪ್ಪೆ ಮುಚ್ಚಿ ಕಣ್ಣೀರು ಅವಿತಿದೆ
ಜಗದ ಕಟೋರ  ನಿಲುವಿಗೆ
 
ಅವಿತ ಕಣ್ಣೀರು ನೋವ ಕಥೆಯ ಸಾರಿ ಹೇಳಿದೆ
ನವ್ಯ ಬೆಳಕ ತೋರಿಸೋ ಕೈಗಳು ಇಲ್ಲವಾಗಿದೆ ..
 
 
 
           ...........ಮಾಲಿನಿ ಭಟ್..................
 
 

Friday 20 April 2012

ಒಲವ ನೆನಪಲಿ

 
 
ಹೂವಗಂಧದಿ ನಿನ್ನ ನೋಡಲು
ಕಂಪಿತೆನ್ನೆದೆ ಮೆಲ್ಲನೆ
ಜೀವ ಕರೆದಿದೆ
ಮನಸು ಅರಳಿದೆ
ಬೆಳಗು ಮೂಡಿದೆ ಕಣ್ಣಲಿ
ಹೃದಯ ತನ್ಮಯವಾಗಿದೆ
ನಗೆಯು ಹೊರಟಿದೆ ಸುಳಿಯದೇ
ತಂಪ ಗಾಳಿ ಸೋಕಿದೆ
ನೆನಪು ಮೆಲ್ಲ ಅರಳಿದೆ.
 
....ಮಾಲಿನಿ ಭಟ್ ..........
 

ಹಂಬಲ

 
 
ಜೀವದ ಬೆಸುಗೆಯಲ್ಲಿ
ಉಸಿರಿನ  ಮಿಲನದಲ್ಲಿ
ಸವಿಗನಸಿನ ಮಾಧುರ್ಯದಲ್ಲಿ
ಇಬ್ಬನಿಯ ಮಂಜಿನಲ್ಲಿ
ಸುಪ್ತವಾಗಿ ಕುಳಿತು
ಸಕಲ ನೋಡುತಿರುವ ಆತ್ಮವೇ
ನಿನ್ನ ಒಮ್ಮೆ ಕಣ್ಣಂಚಿನ ತೆರೆಯಷ್ಟಾದರೂ
ನೋಡಿ ಆಂದಿಸುವ ಹಂಬಲ ..
 
 
....ಮಾಲಿನಿ ಭಟ್.............

Thursday 19 April 2012

ಮನಸ ವೇದನೆ




ಮನಸ ಗಂಧದಿ
ಕಿರಣ ನೀನು
ನೋವ ತಬ್ಬಿ
ಅಳುವೇ ಏಕೆ
ಜೀವ ತುಂಬಿದ
ಉಸಿರ ಹಿಡಿತದಿ
ನನ್ನ ನೀ
ಕೊಲ್ಲುತಿರುವೆ
ಸಾಗು ನೀ
ನನ್ನ ಹೃದಯದಿ
ಉಳಿದು ಹೋಗಲಿ
ಶಾಂತಿ ಮಾತ್ರ
ನೀ ದೂರ ಸರಿಯದೆ
ಜೀವ ಬದುಕದು
ಕೊನೆಗೆ ಉಳಿವುದು
ನನ್ನ ದೇಹದ
ಬೂದಿ ಮಾತ್ರ ..

..........ಮಾಲಿನಿ ಭಟ್ .........

Wednesday 18 April 2012

ತಂಗಾಳಿ ನಿನ್ನ ಮುದ್ದಿಸೋ .. ಆತುರ
ಕಣ್ಮನ ತಪ್ಪಿಸಿ ಅಡಗಿರಲು
ಭಾವುಕ ಮನವು ಮೆಲ್ಲನೆ ಅರಳಲು
ನಿನ್ನಯ ಸ್ಪರ್ಶವು ನನಗಿರಲು ...
 

ಸ್ನೇಹದಲ್ಲಿ ಒಂದು ಬಿರುಕು

 
 
 
ಮನದ ನಡುವೆ ಸೊಗಸಾ ಚೆಲ್ಲಿ
ಹೃದಯ ತುಂಬಾ ನಗುವ ಹರಡಿ
ಕಂಡ ಕನಸ ಕರದಿ ಹಿಡಿದು
ಸ್ನೇಹದಿಂದ ಜೊತೆಯೂ ನಿಂತ ಹೂವು ನೀನು
 
ಭಾವನೆಯ ಗೂಡವೊಳಗೆ
ಕೂಗಿ ಕರೆವ ನಿನ್ನ ದನಿಗೆ
ಅದೃಷ್ಟವು  ನನದು ಎಂದು
ಬಿಗಿಕೊಂಡೇನು
 
ಸಮಯ ಕಳೆದು   ನಿಶೆಯು ಹರಿದು
ಅಂದು ಬಂತು ನಿನ್ನ ಮನದಿ ಹೊಸದು ರೂಪವೂ
ಅರಿತ ಮನವ ಚಿವುಟಿ ಹೊರಟೆ
ನನ್ನ ಯಾವ ತಪ್ಪಿಗೆ
 
ಸ್ನೇಹಕ್ಕೆ - ಸ್ನೇಹವೆಂದು
ಭರವಸೆಯಲಿ ನಿನ್ನ ಕಲಶವಿಡಲು
ಹುದುಗಿ ನೋವ ನೀಡಿದೆ
ಭಗ್ನವಾಯಿತಿಂದು ಎನ್ನ ಹೃದಯ ದೇಗುಲ
 
 
ಅವಿತ ಮನವು ಬಿಗಿದುಕೊಂಡಿದೆ
ಎದೆಯ ನೋವು ತುಂಬಿ ನಡುಗಿದೆ
ಹೃದಯ ಕೂಗಿ ಕೂಗಿ ಕೇಳಿದೆ
ಯಾವ ತಪ್ಪಿಗೆ ಶಿಕ್ಷೆ ನೀಡಿದೆ
 
ನನ್ನ ಮನವ ಗೃಹಿಸದಾದೆ
ಕಣ್ಣ ನೀರ ಕಾಣದಾದೆ
ಸ್ನೇಹದಲ್ಲಿ ಯಾವ ಲೋಪ ನೋಡಿದೆ
ಜೊತೆಯೇ ಇರುವೆ ಎಂಬ ಮಾತು ಇಷ್ಟು ಕ್ಷಣಿಕವೇ
 
ನೋವು ನನಗೆ ಉಳಿಯಲಿ
ನೀನು ಸದಾ ನಗುತಿರು
ನನ್ನ ಹೃದಯ ಮಿಥ್ಯ ನುಡಿಯದು
ಗ್ರಹಣ ಕಳೆದು ಬೆಳಕು ಹರಿಯಲಿ ...
 
.........ಮಾಲಿನಿ ಭಟ್..............
 
 
 

ಸಂಬಂಧ

 
 
ಸೋಲಲ್ಲಿ ಕೈ ಹಿಡಿದ ಆ ಜೀವ
ಜೀವಕ್ಕೆ ಜೊತೆಯಾದ ಆ ಹೃದಯ
ಹೃದಯಕ್ಕೆ ಸಂಗಾತಿಯಾದ ಆ ಮನಸು
ಮನಸಿಗೆ ಆಧಾರವಾದ ಆ ನನ್ನ ಭಾಗ್ಯ
ಸುತ್ತಲು ಕವಿದಿರುವ ಸುಳಿ
ಸುಳಿಯ ಮೋಹಕ್ಕೆ ತನುವಿನಾರ್ಭಟ
ತನುವಿನ ಭರವಸೆಗೆ ಹೃದಯದ ಬೆಂಬಲ
ಹೃದಯ ಚಿತ್ತಾರಕ್ಕೆ  ಭಾವನೆಗಳ ಬೆಸುಗೆ
ಭಾವನೆಗಳ ತೋಟಕ್ಕೆ ನಗುವಿನ ಲೇಪನ
ನಗುವಿಗೆ ಆಧಾರ ಆ ಸ್ವಚ್ಛ ದಿಗಂತ .
 
........ಮಾಲಿನಿ ಭಟ್ ....
ಹೃದಯ ನೋವಲು , ಮೆಲ್ಲ ಬೆಳಕು ಹರಡಿದ
ಪುಟ್ಟ ಹಣತೆ , ಶ್ರಮಿಸಿದೆ  ನಿಶೆಯ ದೂರ ಸಾರಲು
ನನ್ನ ನೋವ ಮೊದಲು ಅಳಿಸಿ ,
ಜಗಕೆ ಬೆಳಕ ನೀಡುವೆ ......
 
.........ಮಾಲಿನಿ ಭಟ್ .........
 

Tuesday 17 April 2012

ನನ್ನ ಜೀವನ
 
ಕನಸುಗಳ ಕನ್ನಡಿಯಲ್ಲಿ
ನನಗಾಗಿ ಬರೆದ ನಿನ್ನ ಮುಖಪುಟದಲ್ಲಿ
ನೂಲ ಎಳೆಯಷ್ಟು ಲೋಪವಿಲ್ಲ
ತಿದ್ದಿ ತೀಡಿದ ನಿನ್ನ ಬಣ್ಣದ ಚಾಕ - ಚಕ್ಯತೆಗೆ
ಬೆರಗಾಗಿ ನಿನ್ನಲೇ ನನ್ನ ಜೀವನ ಸವಿಯುವಾಸೆ ...
 
 
...........ಮಾಲಿನಿ ಭಟ್.........................
 
ತಂಗಾಳಿ ನಿನ್ನ ಮುದ್ದಿಸೋ .. ಆತುರ
ಕಣ್ಮನ ತಪ್ಪಿಸಿ ಅಡಗಿರಲು
ಭಾವುಕ ಮನವು ಮೆಲ್ಲನೆ ಅರಳಲು
ನಿನ್ನಯ ಸ್ಪರ್ಶವು ನನಗಿರಲು ...
 
 
.....ಮುಂಜಾನೆಯ ಶುಭಾಶಯಗಳು .............

Monday 16 April 2012

ಗೆದ್ದಲು ಹುಳ

 
 
ಒಂದು ದಿನ ಮರದ ತೊಗಟೆ
ಕಳಚಿ ಬೀಳಲು
ನೋವಿನಿಂದ ಚೀರಿಕೊಂಡಿತು  
ಮೌನವಾಗಿಯೇ
 
ಅಂದು ಮಣ್ಣಕಣದಿ ಹೆಮ್ಮೆಯಿಂದ
ಬೆಳೆದು ನಿಂತಿತು
ಜಗಕೆ ಸಾರಿ ಹೇಳುತಿತ್ತು
ತನ್ನ ಕಥೆಯನು
 
ಸ್ನೇಹ ಬಯಸಿ ಬಂತು ಒಂದು ಪುಟ್ಟ ಹುಳವು
ಮುದ್ದಿನಿಂದ ಮಮತೆ ನೀಡಿ
ತನ್ನ ಒಡಲ ಕೊಟ್ಟಿತು
ಪ್ರೀತಿಯಿಂದ ಬೆಳೆಯಲೆಂದು ಸಲಹೆ ನೀಡಿತು
 
ಎಲ್ಲ ಕಾಲದಲ್ಲೂ ತೊಗಟೆಯಡಿಯಲಿ
ಮನೆಯ ಮಾಡಿತು
ಪುಟ್ಟ ಪುಟ್ಟ ಮರಿಯು ಬೆಳೆದು
ವಂಶ ಬೆಳೆಯಿತು
 
ಕೊಟ್ಟ ಮಾತ ಮರೆತು
ಮರವು ತನ್ನದೆಂದು ಹೇಳಿತು
ಮುಗ್ಧ ಮನವು ಮೌನವಾಗಿ
ಕಣ್ಣ ನೀರು  ಹರಿಸಿತು
 
ದಿನವೂ ತೊಗಟೆ ಕಳಚಿ
ಬೀಳಲು, ಮಣ್ಣಗೂಡು
ಬೆಳೆದು ನಿಂತಿತು
 
ಪುಟ್ಟ - ಪುಟ್ಟ ಭಾಗವಾಗಿ
ತಿನ್ನತೊಡಗಿತು ,ನೋವಿನಿಂದ
ಮರವು ಬಳಲಿ ಹೋಯಿತು
ತನ್ನ ತನಕೆ ತಾನು ವ್ಯಥೆಯ
ಪಟ್ಟುಕೊಂಡಿತು.......
 
 
ಶುಭಸಂಜೆಯ ಶುಭಾಶಯಗಳು......
 
.........ಮಾಲಿನಿ ಭಟ್...........
ಸೂರ್ಯ ನಲಿದನು ಬಾನ ತೇರಿನಲ್ಲಿ
ಪುಟ್ಟ ಹಕ್ಕಿಯು ತೇಲಿದೆ ಗಗನ ತಲುಪುವ ಬಯಕೆಯಲ್ಲಿ
ಹೃದಯ ಕಟ್ಟಿದೆ ದೂರದಾಸೆಯಲ್ಲಿ
ಮನದ ವಿನಂತಿ ಸಲ್ಲಿಸುವಲ್ಲಿ
ವಿಶ್ವಮಂದಿರ ಸೊರಗಿದೆ   ಬಿಸಿಲ ಆರ್ಭಟದಲ್ಲಿ
ತಂಪ ಸ್ಪರ್ಶವ ನೀಡು ದೇವನೇ ..
ಇದುವೇ ಪುಟ್ಟ ಮನಸಿನ ಪ್ರಾರ್ಥನೆ ...
 

ಜನ್ಮ ಸಾರ್ಥಕ

 
 
ಬಂಗಾರದಿ  ಬರೆದ ಜೀವದ ಅಂಕುರ
ಮೋಹದ ಕವಚದಿ ದೀಪ್ತಿಯ  ಶ್ರವಣ
ಛಾಯೆಯ ಆಶ್ರಯದಿ ಕರ್ಮದ ಫಲವು
ನಿತ್ಯ ಶ್ರವಣದಿ ಚೈತನ್ಯದ ಹೊಳಪು
ಪೂಜ್ಯ ವಂದನೆಗೆ ಬ್ರಾಹ್ಮಣ ಹೆಸರು
ಪ್ರವಚನದಿ ದುಃಖವು ದೂರ
ಚಿತ್ತಶುದ್ಧಿಗೆ ದೇವರ ನಾಮ
ಸಂಪತ್ತಿನ ಹರಿವು ವೀನೀತ ಮನಸು
ಮುಕ್ತಿಯ ಆರಾಧನೆಗೆ ದೃಢತೆ
ತಾಂತ್ರಿಕ ಜಾಲ ಕಾಲದ ಹಿರಿಮೆ
ಜನ್ಮಕೆ ವರದಾನ ಉತ್ತಮ ಮನಸು ...
 
(ಬ್ರಾಹ್ಮಣ ಎಂದರೆ ಸಕಲ ಜೀವಿಗಳಿಗೂ ಒಳ್ಳೆದನ್ನು ಉಂಟುಮಾಡುವವನು ಎಂದರ್ಥ )
 
.......ಮಾಲಿನಿ ಭಟ್ .........

Friday 13 April 2012

ಮನದೊಳಗೆ ಮುಗಿಬಿದ್ದಿರುವ ನೋವ ಸರಪಳಿಗೆ
ಬಂಧನವ ಕಳಚಲಾಗದೆ , ಸುತ್ತುವರಿದಿರುವ ಬೇಲಿಗೆ
ತುಟಿಯ ಅಂಚಿನಲ್ಲಿ  ಮೂಡಿದ ನಗುವ ಹೊನಲಿಗೆ
ಉತ್ತರ ಸಿಗಲಾರದೆ , ಬಾನ ನೋಡುತಿರುವ ಮರುಳ ಮನಸಿಗೆ
ಬೇಸರಿಸದೆ ನಡೆ ಮುಂದೆ ಎಲ್ಲ ಕಷ್ಟವ ಮೆಟ್ಟಿ ನಿಲ್ಲುತ ..
 
..ಮುಂಜಾನೆಯು ಎಲ್ಲರಿಗೂ ಶುಭವನ್ನೇ ತರಲಿ  .............
 
ಮುದುರಿಕೊಂಡು ಚಾಪೆ ಮೇಲೆ ಮಲಗಿಕೊಂಡಿರುವ 
ಸಾವಿರ ಕನಸುಗಳೊಂದಿಗೆ , ಕಮರಿದ ಬದುಕ ಹಿಡಿದು
ಆಳದ ಮನಸಲ್ಲಿ ಉಳಿದ ದೀಪದ ಪ್ರಜ್ವಲತೆಯಲ್ಲಿ
ಮುನಿದ ಕತ್ತಲೆಗೆ ಶರಣು ಹೋದ ನಿನ್ನ ಏನನ್ನಬೇಕು ...

Wednesday 11 April 2012

ಮುನಿಯದಿರು ಇಳೆಯೇ, ನಿಮ್ಮ ಕಂದಗಾಗಿ
ನಿನ್ನ ನೀ ಕಂಪಿಸದಿರು , ಸಾಗರದಿ ಅಲೆಯ ಏಳಿಸದಿರು
ನಮ್ಮೆಲರ ತಾಯಿ ನೀ , ನಮ್ಮ ತಪ್ಪ ಮನ್ನಿಸಲಾರೆಯ
ನಿನ್ನ ಒಡಲ ವೇದನೆಯ ಅರಿತು ಮೂರ್ಖರಾಗಿರಲು
ನಮ್ಮ ಮನಸು ನೀನು ತಿಳಿಯಲಾರೆಯ
ನೋಡಲ್ಲಿ ಬಾನ, ಸೂರ್ಯನು ಪ್ರತಿದಿನ ಬೇಸರಿಸದೆ
ಜೀವ ಬೆಳಕ ನೀಡುತಿರುವನು
ಆ ಗಾಳಿ ನೋಡು ಸದಾ ತಂಪ ಸ್ಪರ್ಶ ಮಾಡುತಿರುವುದು
ಈ ದಿನವು ಶುಭವನ್ನೇ ಕೋರು ತಾಯಿ ನಿನ್ನ ಮಕ್ಕಳಿಗಾಗಿ ...
 
......ಶುಭಮುಂಜಾನೆಯ  ಶುಭಾಶಯಗಳು...........................
 
.          .........ಮಾಲಿನಿ ಭಟ್ .................
 

ತಪ್ಪು ಕಲ್ಪನೆ


 
 
ಬದುಕಿನ ಹುಡುಕಾಟದಲ್ಲಿ , ಜಾರಿದ ಕಣ್ಣಿರಲ್ಲಿ
ನೋವಿನ ಸರಪಳಿ ಅಪ್ಪಿ  ಮಿಸುಕಾಡಲು ಬಿಡದೆ
ದಿನ- ದಿನ ಅಧಿಕ , ಸಹಿಸಲಾರದ ಬಾಧೆಯಲ್ಲಿ 
ಸಂಬಂಧಗಳ ಕೊಂಡಿ ಕಳಚದೆ
 
 
ಭಾವನೆಗೆ ಸ್ಪಂದಿಸಲು , ಹೊಸ ಮಾರ್ಗದಲ್ಲಿ
ಕಮರಿದ ಕನಸಿಗೆ , ಜೀವಸೆಲೆ ನೀಡಲಾಗದೆ
ಸ್ವಚ್ಛ ಮನಸಿನ ಕನ್ನಡಿಯು ಅನುಮಾನದಲ್ಲಿ
ಸಾಗರದಾಚೆ ಸೇರಲು ಆಗದೆ 
 
 
ಮನಸಿನ ಬಿಗುಮಾನ , ದರ್ಪದಲ್ಲಿ 
ಸೋಲದ ಹಟದ ಜಾಣತನದಲ್ಲಿ
ಹೃದಯದ ಮೌನ ವೇದನೆಯಲ್ಲಿ
ಚಿವುಟಿದ ಕರಾಳ ಮುಖದಿ
 
 
ಯಾರ ಅನುಮಾನವೋ , ಯಾರ ಅರಿಕೆಯೋ
ತಪ್ಪು ನಡೆದಿದೆ , ವಿಧಿಯ ಇಚ್ಚೆಯಂತೆ
ಮನಸುಗಳು ದೂರ ದೂರ
ಸನಿಹದ ಮಾತು , ಬಡವಾಗಿದೆ
 
 
ನೋವ ಹೇಳಲು ಬಂದ ಜೀವಕೆ
ಕಾರಣವೇ ತಿಳಿಯದೆ , ಸುಸ್ತಾಗಿದೆ
ಸ್ನೇಹದ ಸೌಧ ಕುಸಿದಿದೆ
ಚಿಕ್ಕ ತಪ್ಪು ಗೃಹಿಕೆಯಿಂದ..
 
 
ದೇವರ ಸಂಕಲ್ಪ ಹೇಗಿದೆಯೋ
ವಿಶಾಲ ಜೀವನದಲ್ಲಿ
ಹೆಜ್ಜೆಗುರುತುಗಳು ಅಮೂಲ್ಯ
ಎಲ್ಲ ಜ್ಞಾನದ ಸಂಕೇತ ....
 
....ಮನಸಿನ ಚಿತ್ರಪಟದಲ್ಲಿ ನಾವು ಎಣಿಸಿರುವುದೇ ಒಂದು ,ವಿಧಿಯ ಕೈವಾಡವೇ ಇನ್ನೊಂದು ,..  ಅರಿತೋ ಅರಿಯದೆಯೋ ಜೀವನದಲ್ಲಿ ಅಲ್ಲಲ್ಲಿ  ಅನುಮಾನಗಳು , ತಪ್ಪು ಕಲ್ಪನೆ ಹುಟ್ಟುವುದು ಸಹಜ .. ಇವುಗಳನ್ನು ಮೆಟ್ಟಿ ನಿಲ್ಲುವುದೇ ನಿಜವಾದ ಸ್ನೇಹ .....             ಮಾಲಿನಿ ಭಟ್ .......................
 
 
 
 
 
 
 
 
 
 
 
 

Tuesday 10 April 2012

ಮದುಮಗಳ ತಾಯಿ ವೇದನೆ

ಇಂದಿನ ದಿನ ಶುಭದಿನ , ಶುಭಕರ
ಮಾಂಗಲ್ಯದಿನ ನಮ್ಮ ಕುವರಿಗೆ
ಹೊಳೆಯುತಿಹಳು ಕೆಂಪಾದ ಮುಖದಲಿ
ನೂರೊಂದು ಆಸೆಯಲಿ
ಕರಗಿಹಳು ಪ್ರೀತಿಸಾಗರದಲಿ
ತಾಯ ತೊಡೆಯಲಿ ಬೆಳೆದ
ಮುತ್ತಿನ ಕಣ್ಣುಗಳಿಗೆ
ತಿಳಿಯದು ಜೀವನದ
ಸುಖ ದುಃಖಗಳು
ಹೊರಟಿಹಳು , ಬಾಳ ನೌಕೆ ಎಳೆಯಲು
ಅರಿಯಲು ಕಷ್ಟ ಸಾಗರವ
ತಿಳಿಯಲು ಬೆರೆಯುವ ಗುಣವ
ಸಾಗಿಹಳು ಸಾಹಸ ಯಾತ್ರೆಗೆ
ಯೌನದ ಬಿಸಿರಕ್ತದಲಿ
ಮೂಡುತಿದೆ ಆತ್ಮವಿಶ್ವಾಶ
ಹೇಗಿರುವಲೋ ಗಂಡನ ಜತೆ
ಸಿಗಲಿ ದೇವರೇ ತಾಯಂತ ಅತ್ತೆಯು
ಸುಖದಲುಳಿಯಲಿ  ನೂರ್ಕಾಲ
ಪತಿಯ ಜೊತೆ
ಬೆಳಗಲಿ ಜ್ಯೋತಿಯಂತೆ ಮನೆಯ
ಪಡೆಯಲಿ ತಾಯಿ ಸುಖವ
ಇರಲಿ ಎಂದೆಂದೂ ಅನ್ಯೋನ್ಯ ಬಾಳ್ವೆಯಲಿ
ಕಣ್ತುಂಬ ನೋಡುವೆವು
ಮಗಳ ಕುಸುಮ ಮುಖವ ...
....ಮಾಲಿನಿ ಭಟ್ .............

Monday 9 April 2012

ಬೇಲಿಯ ಮೇಲಿನ ಹೂವು

 
 
ಬೇಲಿಯ ಮೇಲಿನ ಹೂವು ಕಾದಿದೆ
ಜಗದ ಪ್ರೀತಿಯ ಬೆಳಕಿಗೆ
 
ಮೋಸ ಸೆಳೆದ ಕಪಟಕೆ
ರಕ್ಷೆ ಇಲ್ಲದೆ ನಲುಗಿದೆ
 
ದಿನವೂ ಕಾದು , ಕಾದು ಸುಪ್ತ ಮನವು ತಲ್ಲಣಿಸಿದೆ
ಶವದಂತಾಗಿದೆ  , ನೋವ ಹೊರಲಾಗದೆ
 
ಬೇಲಿ ಹೂವು , ಕಂಪು ಸಿಗದೇನು?
ರಸದ ಜೇನು ನನ್ನಲ್ಲಿಲ್ಲವೇನು ?
 
ನನ್ನಲ್ಲೇನು ತಪ್ಪು ಹುಡುಕಿದೆ , ಯಾವ ಜೀವಿಗೂ ಬೇಡವಾದೆ
ಸೃಷ್ಟಿದಾತ  ಸಿಗಲಿ ನನಗೆ ಕೇಳುವೆ ಇದರ ಮರ್ಮವ
 
ನನ್ನ ಸೌಂದರ್ಯ ಕಡಿಮೆಯೇನು ?
ದೇವ ಅಡಿಗೂ ದೂರವಾದೆ , ನನ್ನಲೇನು ಪಾಪವಿದೆ ...
 
................ಮಾಲಿನಿ ಭಟ್ ...
 
 
 
 
 
 
 
 
 
ಮುಖದ ಮೇಲೆ ತುಂಬಿ ನಲಿದ ಹನಿ- ಹನಿ ನೀರ ಗುಚ್ಚದಲ್ಲಿ
ಉಳಿದು ಹೋದ ಸಾವಿರ ಮನಸಾ ವೇದನೆಯಲ್ಲಿ 
ಬಾನು ನೋಡಲು ಉತ್ತುಂಗದಲ್ಲಿ ಸರಿದಾಡಿದ ಮೋಡ 
ದಿನಕರನು ಮುನಿದು ತನ್ನ ಗೃಹವ ಸೇರುತಿರಲು 
ಹೊಸ   ತಂಗಾಳಿ ಬಿಸಿ ಬರಲಿ  .. ಸಕಲ ವಿಶ್ವದ ಒಳಿತಿಗೆ ..
 
 
..........ಶುಭಸಂಜೆಯ  ವಿದಾಯ .. ಗೆಳಯ / ಗೆಳತಿಯರೆ ..........

ಅಮ್ಮ ನಿನ್ನ ಮಡಿಲು

ಅಮ್ಮ ನಿನ್ನ ಮಡಿಲು ನನಗೆ ಪ್ರೀತಿಯ ಹೂಗೊಂಚಲು
ನಿನಗೆ ಋಣಿಯು ನಾ , ಬಾಳ ಕೊನೆಯ ಅಂಚಲು
ಜೀವ ತೇದು , ನಿನ್ನ ಮರೆತು ನನಗೆ ಜನ್ಮ ಕೊಡಲು
ಉಸಿರಿನಲ್ಲಿ ಉಸಿರ ಹುದುಗಿಸಿ , ಮಮತೆ ನೀಡಲು
ಜಗದ ಕಷ್ಟ ಅರಿಯದಂತೆ , ನಿನ್ನ ಹೃದಯದಲ್ಲಿ ಜಾಗ ನೀಡಿದೆ
ಅಮ್ಮ ಎಂಬ ತೊದಲು ನುಡಿಯು ಮನಕೆ ಹರ್ಷ ಕೊಟ್ಟಿದೆ ..
.............ಮಾಲಿನಿ ಭಟ್...

Sunday 8 April 2012

ಒಂದು ಗುಲಾಬಿಯ ಗಿಡ ನೆಡಲು ನಾನಂದು
ಮನಸಾರೆ ಹೂವ ನೀಡಿ ಕರೆಯುತಿದೆ  ಇಂದು
ಇರುವ ಒಂದು ದಿನವ , ನಮಗಾಗಿ ನೀಡುತಿದೆ
ಎಂತಹ ನಿಸ್ವಾರ್ಥ ಗುಣ .....
ಮನುಜನಿಗೆ ಒಂದು ಪಾಠವಾಗಬಲ್ಲದೆ ...

ಕಾಡಿದನು ಗೆಳಯ


ಕನಸುಗಳ ಕಟ್ಟೆಯಲ್ಲಿ  ಮಡುಚಿದ ಮೌನ ಗೆರೆಯಲ್ಲಿ
ನಿನ್ನೊಂದು ಮೆಲುನುಡಿಗಾಗಿ ತವಕದಲ್ಲಿ
ನದಿಯಲೆ ತೆವಳುವ ಸಪ್ಪಲದಲ್ಲಿ
ಮರಳ ಕಣಗಳು ಹನಿಗೂಡೋ ಚಿತ್ರಣದಲ್ಲಿ
ನಡೆವ ಹಾದಿಯಲಿ , ಹೂವ  ಕನಸಲ್ಲಿ  
ಬದುಕು ಸಾಗಿದ ಮಧುರ ಪಟದಲ್ಲಿ
ಸುಪ್ತವಾಗಿ ಹುದುಗಿದ ಒಲವ ಮಂಟಪದಲ್ಲಿ
ಹೊಳೆವ ನಯನದಲ್ಲಿ ನೆನಪಾದ ಮುಗ್ಧತೆಯಲ್ಲಿ

ಕಾಡಿದನು ಗೆಳಯ ಹೃದಯ ಪರ್ವತದಲ್ಲಿ 
ಕಾಡಿದನು ಗೆಳಯ ಉಸಿರ ಗಂಧದಲ್ಲಿ ..
.........ಮಾಲಿನಿ ಭಟ್...

Tuesday 3 April 2012

ಪ್ರಕೃತಿಯ ಕೋಪವು

ಮರಳ ತಡಿಯಲಿ ಕನಸ ಹೆಣೆಯಲು ಅಲೆಗೂ ನನ್ನಲಿ ಕೋಪವು
ರಭಸವಾಗಿ ಬಿಸಿತೊಮ್ಮೆ , ಕಣ್ಣ ಕುಕ್ಕಿಸೋ ಕಿರಣವು
ಮಬ್ಬು ಕವಿದು ಕಣ್ಣು   ಕ್ಷೀಣ ನೋಟವ ಬೀರಲು
ಅಸ್ಪಷ್ಟ   ಚಿತ್ರದಿ ಬದುಕು ನೀರಲಿ ಮುಳುಗಲು
ಹುಡುಕಿದೆ ಬಿಡದ ಪ್ರಯತ್ನ ನೀರ ತಡಿಯಲಿ
ಮತ್ಸ್ಯಗಳು ಜೊತೆ ವಿಭಿನ್ನ ಪರಿಶ್ರಮದಲಿ
ಆಳವಿಳಿದಂತೆ ಹೃದಯ ಬಡಿತ ನಾಗಾಲೋಟದಲಿ
ಬದುಕು ಅರಸಿ , ವಿಚಿತ್ರ ಕೂಪದಲಿ
ಸಿಗುವುದೇ ನನ್ನ ಕನಸಿನ  ಚಿತ್ರಪಟ
ಬರಿಗೈ ಯಲ್ಲಿ ಬಂದು ಬಿಟ್ಟಿದ್ದೇನೆ
ಸಾವಿರ ಕನಸಿನ  ಬದುಕಿನ ತೋಟ
ದೇವರೇ ನಿನ್ನನ್ನು ನಂಬಿದ್ದೇನೆ ...
...........ಮಾಲಿನಿ ಭಟ್ ..........

ಸೃಷ್ಟಿಯ ಕೊಡುಗೆ

ಭಾವ ಹಲವು  ಜೀವ ಒಂದೇ
ದನಿಯು ಹಲವು ಜೊತೆಗೆ ಮಾತ್ರ ಯಾರು ಇಲ್ಲ
ಕರುಳ ಬಳ್ಳಿಯ ಕಡಿದು ಬಂದೇವು
ಮತ್ತೆ ಮತ್ತೆ ಸ್ವಾರ್ಥ ದ ಜೊತೆ
ಭುವಿ , ನೀರು, ಗಾಳಿಯ ಜೊತೆ ;
ಪ್ರತಿದಿನ ಆಡಿದೆವು ಆಟವ,
ಒಂದೇ ಗುರಿ ಮನುಜಗೆ
ಮುಗಿಯದ ಆಸೆಗೆ .. ಮತ್ತಿಸ್ಟು ಬೆಸುಗೆ ಲೇಪನ ...
 
ಮನುಜನ ಆಸೆಗೆ ಎಂದು ಮುಕ್ತಾಯ
ಉಳಿಯುವುದೇ ಸೃಷ್ಟಿಯ ಕೊಡುಗೆ ..
 
 
 

Monday 2 April 2012

ಹೊಸ ಸಂಬಂಧ

ಜೀವ ತುಡಿದು ಸೆಳೆಯಿತು ಹೊಸದು ಬಂಧಕೆ
ಹೃದಯ ಬಯಸಿ  ಬೆಳೆಯಿತು,ಭಾವ ವೀಣೆ ಮಿಡಿತಕೆ
ದೀಪ ಬೆಳಕು ಪ್ರಜ್ವಲಿಸಿತು , ಉರಿದು ಹೋಗೋ ಕೊನೆಯ ಹಂತಕೆ
ಮೂರ್ಖ ತನದಿ ಕನಸ ನೆಟ್ಟಿತು , ನವ್ಯತೆಯ ಭಾವಕೆ
ಬೇಡವೆಂದರೂ ಬೆಳೆಯ ಹತ್ತಿತು ಮನದ ಮಲ್ಲಿಗೆ ಗೂಡಲಿ
ಸೆಳೆಯಿತು ಭವಿಷ್ಯದ ಕನಸ ನಿರ್ಮಾಣದಲಿ
ಮೌನದಲ್ಲೇ ಅರಳಿತು , ಕಂಡ ಕನಸ  ಬೆಳಕಲಿ
ಹೊತ್ತಿತು ಹೊಸ ಕ್ರಾಂತಿ ಮನಸಿನ ತೊಯ್ದಾಟದಲಿ
ಭರವಸೆಯು ಚಿಲುಮೆಯಾಗಿ ಸೇರಿತು , ಮುಗ್ಧ ಮನದಲ್ಲಿ
ನೇಯ್ದ ಗೂಡು , ಬಣ್ಣದ ಲೇಪನದಲ್ಲಿ
ಮುಗಿಲ ಮಲ್ಲಿಗೆ ಸುಂದರ ಮಾಲೆಯಲ್ಲಿ
ಸುಂದರ ಸಂಬಂಧಕೆ ಅಲೆಯಾಗಿ ಹಾಡ ಗುನುಗುತಿತ್ತು ...
...........ಮಾಲಿನಿ ಭಟ್...............

ಜೀವಜಲ



ಬಿಸಿಲು ಕಾದು ನೆಲವು ಬರಿದಾಗಿದೆ
ಹಸಿರು ಮೊಳಕೆ ಅಲ್ಲೇ ಕರಗಿದೆ
ಜೀವಸೃಷ್ಟಿ ನೊಂದು ಕೊರಗಿದೆ
                 ಪುಟ್ಟ ಮನವು ಕರೆದಿದೆ

ಬರಡು ನೆಲದಿ , ಜೀವ ಸೆಲೆಯು ಉಕ್ಕಲಿ
ಬತ್ತಿ ಹೋದ ಮನಸಿನಲ್ಲಿ ಹೂವ ನಗುವು ಚೆಲ್ಲಲಿ
ಅಮೃತಧಾರೆ ನೀಡಲಿ ...
                          ಪುಟ್ಟ ಜೀವ ಬಯಸಿದೆ

ಜಲವು ನಮಗೆ ಅನ್ನದಾತ
ಜಲವು ನಮಗೆ ಜೀವಕಲ್ಪ
ಜಲವೇ ನಮ್ಮ ಭಾಗ್ಯದಾತ
                     
                           ಜೀವ ಜಲವ ಆವರಿಸಿದೆ

ಕಾಡು ಕಡಿದು , ನಾಶವಾಯ್ತು ವನದ ತಪ್ಪಲು
ಜೀವ ಕೋಟಿ ಮನದಿ ಶಾಪ ಇಟ್ಟರು
ಮೇಘರಾಜ ಹೆದರಿ ನಭದಿ ಹೊಕ್ಕಲು
                         
                             ಜಲಕೆ ವಿನಂತಿ  ತಲುಪಿದೆ

ವನವ ಬೆಳೆಸಿ , ಜೀವಶಕ್ತಿ ಉಳಿಸಿ
ನಾಶಮಾಡಿ ಕೊರಗದಿರು , ..


 ...........ಮಾಲಿನಿ ಭಟ್....

                          

Friday 30 March 2012

ಆಸರೆ



ಸುಕ್ಕುಗಟ್ಟಿದ  ತನುವ ಎಳೆಯಲಿ
ಮಂಜಹನಿಯು ಶೂನ್ಯ ನೆಟ್ಟಿದೆ
ಬತ್ತಿಹೋದ ಕಣ್ಣ ಕಂಬನಿಯಲಿ
ಮೌನವಾಗಿ ಕಾದು ಕುಳಿತಿದೆ
                                   ಹೊಸದು ಆಸರೆಯೊಂದಕೆ

ಬಯಲು ದಾರಿಯು ಕಠಿಣವಾಗಿದೆ
ಸೆರೆಯ ಜಾಲವು ಅಪ್ಪಿಕೊಂಡಿದೆ
ಮಮತೆ ಪ್ರೀತಿಯು ಅಳಿಸಿಹೋಗಿದೆ
ಮನದ ವೇದನೆ ಮುಗಿಲು ಮುಟ್ಟಿದೆ
                                     ಜೀವ ಕಾದಿದೆ ಮಿಂಚುದೀಪಕೆ
ಹಗಲು ಅಳಿದು ಇರುಳು ಮುಟ್ಟಿದೆ
ನಗುವು ಕಳೆದು ದುಃಖ ತಬ್ಬಿದೆ
ವಾಸ್ತವ ನೋವ ಸ್ತುತಿಯ ಬಿಗಿದಿದೆ
ತಾಳ್ಮೆ ಕಾದು ಕುಳಿತಿದೆ
                             ಕಪ್ಪು ಕನಸು ಬೆನ್ನ ಜೊತೆಗಿದೆ
ಬಾಡಿದಂತ ಮೂಖವು ಸಾರಿದೆ
ತೊದಲು ನುಡಿಯು ಮರೆತುಹೋಗಿದೆ
ಮಂಜು ತಗುಲಿದ ನಯನ ಕಾದಿದೆ
ರೋಸಿ ಹೋದ ಜೀವ ನೆನೆದಿದೆ
                                  ದಿನವೂ ಕಾದಿದೆ ಪುಟ್ಟ ದೀಪಕೆ 
ಜೀವ ಸೆಳೆದ ಆ ದಿನ 
ಜೊತೆಗೆ ಇದ್ದರು ಬಹುಜನ 
ಹುದುಗಿ ಹೋದ  ಕಾಲಕೆ
ನೆನಪು ಒಂದೇ ಕಾಣಿಕೆ
                          ನೀರವ ಮೌನ ಅನುಕ್ಷಣ ಪುಟ್ಟ ಮಿಂಚು ಬರದೆ ....