Wednesday 30 October 2013



ದೂರ ಸಾಗು ನೆನಪೇ


ಖಾಲಿಯಾದ ಮನದ ಪುಟವು ಬರದ ನಿನ್ನ ನೆನಪಲಿ
ಹೀಗೆ ಇರುವೆ ಇಂತೆ ಇರುವೆ ಎನ್ನುವುದೆಲ್ಲ ಕ್ಷಣಿಕವು
ಗೂಡ   ಒಳಗೆ ರಚನೆಯಾದ ವರ್ಣಚಿತ್ರವು
ಬಣ್ಣ  ಮಾಸಿ ಮುನಿದಿದೆ ಹೃದಯ ದೀಪವು
ಎಲ್ಲ ಮೌನ , ಮೌನವೊಂದೆ ಉತ್ತರ
ಬರದ ನಿನ್ನ ನೆನಪು ನನ್ನ ಕಾಡುತಿರುವುದು
 ಮೌನದಲ್ಲೇ ಸರಿದುಬಿಡು ಇರುಳತೋಳಲಿ
ಮತ್ತೆ ಎಂದು ನೆನಪು ಆಗಿ ಕಾಡದಿರು
ದೂರ ದೂರ ಸಾಗಿಬಿಡು ,. ಅಲ್ಲೇ ನಿನ್ನ ನೆಲೆಯು
ಘಾಸಿಯಾದ ಮನದಲ್ಲಿ ನಿನಗಿಲ್ಲ ಜಾಗವು .


................. ಮಾಲಿನಿ ಭಟ್ ,,,,,,,,,,,,,,,

ಮನಸಿನಲೊಂದು ಭಾವ ,ಕನಸಿನಲೊಂದು ರಾಗ
ಒಡಗೂಡಿದ ಮಿಲನ ಪುಳಕ , ಅಲ್ಲೊಂದು ನವ  ಸಂವಸ್ಸರ
ಕೂಡಿ ಬಾಳುವ ಮುನ್ಸೂಚನೆ , ತೆರೆದ ಬಾಗಿಲೊಳಗೆ
ದೀಪ್ತಿಯ ಕಾಂತಿ ಹೊಮ್ಮುವುದು ಮನದೊಳಗೆ ..

........... ಮಾಲಿನಿ ಭಟ್ .................
ಈ ಸಂಜೆ ಯಾಕೋ ಮೋಡ ಕವಿದಿದೆ
ಮೇಲಿಂದ ತಿಳಿ ಮಿಂಚು ಹೊರಡುವುದು
ನನ್ನ ಮನಸಂತೆ ಆಕಾಶ ವು  ಮಬ್ಬಿದೆ
ಹೊಂಬಣ್ಣದ ದಿವ್ಯಪ್ರಭೆ ಮೂಡುವುದು
ಕಾಯುವುದು ನಿಯಮಿತ ...

.............  ಮಾಲಿನಿ ಭಟ್ ............

ಆಸೆಯ ಬೆನ್ನೇರಿ



ಕಾಣದ ಆಸೆಗೆ , ಎಲ್ಲಿಯ ಬೇಲಿ
ಕನಸಲಿ ಬಂದು ತಡವರಿಸಿ
ನಿನ್ನೆಯೂ ಇಂದು ನಾಳೆಯು ಇಲ್ಲ
 ಹುಡುಕುವ ದಾರಿ ಮನಸಲಿ
ಸ್ತಿರತೆ ಇಲ್ಲದ ಗುರಿಯೆಡೆಗೆ
ಆಸೆಯ ಹಿಂದೆ ಸಂಚರಿಸಿ
ಮೌನವು ತಬ್ಬಿದ ನೋವಿನ ಮಡಿಲಿಗೆ
ಬಿಳುವ ಮುಂಚೆ ಎಚ್ಚರಿಕೆ

....... ಮಾಲಿನಿ ಭಟ್ ......

ನಿನ್ನ ಒಲುಮೆ





ನನ್ನದೊಂದು ಜೀವ , ನಿನ್ನದೊಂದು ಜೀವ
ಮನಸುಗಳ ಮರೆಯಲ್ಲಿ ಪ್ರೀತಿ ಪರಿಮಳವು
ಕನಸುಗಳ ಸೆರೆಯಲ್ಲಿ ಜೇನ ಝೆಂಕಾರವು
 ಕಾಲ ಉರುಳಿಹೋದರೂ ಮತ್ತೆ ಸವಿಯ ಹೊಳಪು
ಬಣ್ಣ ಆರದು ,   ನಿನ್ನ ಒಲುಮೆಯಲಿ ...


................. ಮಾಲಿನಿ ಭಟ್  .............. 









ಪ್ರೀತಿ ಹೆಸರಲ್ಲಿ ಕಪಟ




ನೀ ದಾಟಿ ಹೋದೆ ನನ್ನದೆಯ ಅರಮನೆಯ
ಬರಿದು ಆಯಿತು ಪೋಣಿಸಿಟ್ಟ  ನಿರೀಕ್ಷೆಗಳು
ಸ್ಮಶಾನ ಮೌನ ಉಳಿದುಹೋಯಿತು
ಅರಳೋ ಹೂಗಳು ಮುದ ನೀಡಲಿಲ್ಲ
ಪ್ರೀತಿ ಎನ್ನೋ ತತ್ವಕ್ಕೆ ಮುಳ್ಳಾದೇ  ನೀ
ಭರವಸೆಯ ನೆಪ ಮಾಡಿ ಬೇರನ್ನೇ ಕಿತ್ತು ಬಿಟ್ಟೆ
ನಾ ಚೆನ್ನಾಗಿ ಇದ್ದೆ ,.. ಸಂತೋಷದಿ ಮಿಂದಿದ್ದೆ
ನಗುವನ್ನೇ ಕಸಿದು ಬಿಟ್ಟೆ , .. ದುಃಖವ  ನೀಡಿದೆ
ಯಾರಲ್ಲಿ ಹೇಳಲಿ,ಅಮ್ಮನಲ್ಲಿ .. ಅಪ್ಪನಲ್ಲಿ 
ಸ್ನೇಹಿತರಲ್ಲಿ ,... ಹೇಗೆ ಹೇಳಲಿ
ಯಾರ ಮಾತನ್ನು ಕೇಳಲಿಲ್ಲವಲ್ಲ ಅಂದು
ಎದೆ ಒಡೆದಂತ ಬಡಿತ,..
ದುಃಖಕ್ಕೆ  ಕಣ್ಣಿರು  ಸೋತಿದೆ
ನೀ ದಾಟಿ ಹೋದೆ ನನ್ನೆದೆಯ ಅರಮನೆಯ
ನಾಳೆ ಉಳಿಯುದೋ ಈ ಜೀವ ನಾ ಕಾಣೇನು .


ಮಾಲಿನಿ ಭಟ್ ....................

Tuesday 8 October 2013

ಮುಟ್ಟಿನ ದಿನಗಳು





ಆ ದಿನಗಳು ಅದೇಕೆ ನೆನಪಾಗುವುದೋ
ಪದೇ  ಪದೇ ಹಿಂಸಿಸುವುದೋ

ಈಗಿನ ಮುಂದುವರಿದ ಜನಾಂಗ
ಅರಿತು ಅರಿಯದೆ ಮೂರ್ಖರಾದಾಗ
ಎಷ್ಟೇ ಜ್ಞಾನವಿದ್ದರೂ , ಎಲ್ಲ ಸುಮ್ಮನೆ

ಹಿರಿಯರು ಸಂಪ್ರದಾಯ ಮಾಡಿದ್ದಕ್ಕೆ ಕಾರಣವಿತ್ತು
ನಮ್ಮವರ ಮೂಢನಂಬಿಕೆಗೆ ಅರ್ಥವೇ ಇಲ್ಲ

ನಾ ಹೇಳ ಹೊರಟಿದ್ದು ಬೇರೇನೂ ಅಲ್ಲ
ಹೆಂಗಳೆಯರ ಆ ಮುಟ್ಟಿನ  ದಿನಗಳು

ದೇಹದ ಒಂದು ಸಹಜ ಕ್ರಿಯೆಗೆ
ತಿಂಗಳ ನೋವಿನ ನರಳಾಟದ ಜೊತೆಗೆ
ಸಂಪ್ರದಾಯವ ಮೀರಿದ ಮೌಢ್ಯತೆ


ತಿಂಗಳಲಿ ಹದಿನೈದು ದಿನಗಳು ನಿರ್ಭಿತಿ
ಮತ್ತೆ ಕಾಡುವ ಋತು ಸ್ರಾವದ ದಿನ
ಎಲ್ಲೆಡೆ  ಹೋಗಲಾಗದ ತಾಕಲಾಟ

ಇನ್ನು ಏಕೆ ತಿಳಿದವರು , ತಿಳಿಯದವರ
ಕೈಗೊಂಬೆಯಾಗಿ ಅದನ್ನೇ ದಾಟುವರೋ

ಇನ್ನೆಷ್ಟು ವರುಷಗಳು ಸಾಗಬೇಕೋ
ಕಾಯಬೇಕು , ಕಾದುನೋಡಬೇಕು
ತಿಳಿದವರು ತಿಳಿಸಿ ಹೇಳಬೇಕು

ಮುಟ್ಟಿನ  ದಿನಗಳು ಶಾಪವಾಗದಿರಲಿ
ಇದೊಂದು ವಿನಂತಿ .



............... ಮಾಲಿನಿ ಭಟ್ ........

Sunday 6 October 2013

ಆಸರೆಯ ಕೈ ,.





ಮನಸಾಗದು  ಆ ಕಣಿವೆಯ ಮಾರ್ಗದಿ
ಪರಿತಪಿಸುತ ನಡೆಯುವುದು
ಇಳಿಜಾರಿನ ಕಾಲ್ದಾರಿ , ದುರ್ಗಮ ;
ಎದೆಬಡಿತದ ಸಂಚಲನ
ತಂತಾನೇ ಮೂಡುವುದು 
ಆಸರೆಯ ಕೈ ,.
ವಿಧಿಬರಹದ ನೋಟದಿ
ಪ್ರಾರ್ಥನೆಯ ಅಳಲು ,..
ಜೊತೆನಡೆಯಲು  ಧೈರ್ಯವ ನೀಡು
ತಲೆಬಾಗಿ ವಂದಿಸುವೆ ..

ಮಾಲಿನಿ  ಭಟ್ ................

ಅಮ್ಮ ನಿನ್ನ ಬಿಟ್ಟು ಬಂದ ಆ ಕ್ಷಣ





ಹಿಂದೆ ಹೇಗೆ ನೋಡಲಿ   , ಕಳೆದು ಹೋದ ದಿನಗಳ
ಸೋತ ಮನಸು, ದಣಿದ ದೇಹ ;ಕಾಲ ಗರ್ಭದಿ
ಎದೆಯ ತಲ್ಲಣ ,ಘೋರ ವಿಷವು
ತಲೆಯ ತುಂಬಾ ಜೋಮು ಹಿಡಿದ ಅನುಭವ
ಅಮ್ಮ ನಿನ್ನ ಮಡಿಲ ಹೇಗೆ ಮರೆಯಲಿ
ನಿನ್ನ ಪ್ರೀತಿ ಸಿಂಚನ , ಜೇನ ಸವಿಯ ಆಗರ
ಇಂದು ನಾನು ನೀನು ದೂರ ದೂರ
ಸಹಿಸಲಾಗದು , ಎದೆಯು ತುಂಬಾ ನೋಯುತಿದೆ
ಕಷ್ಟ ಕೊಡೆನು ,ನೋವು ಕೊಡೆನು ,
ನಿನ್ನ ಮಡಿಲೆ ಸಾಕು ನನಗೆ ,...
ತಬ್ಬಿಕೊಂಡು ಅತ್ತುಬಿಡುವ ಆಸೆ ಮನದಲಿ
ಕಾದು ಕಾದು  ಊಟ ಬಡಿಸೋ ನಿನ್ನ ಮಮತೆಗೆ
ಸೋತೆನಮ್ಮ , ನನ್ನ ಜೀವ ನೀನು
ನನ್ನ ಉಸಿರು ನೀನು ,.. ನಿನ್ನ ನಗುವೇ
ಸಕಲ ಭಾಗ್ಯ ನನಗೆ ಅಮ್ಮ. ..


.............. ಮಾಲಿನಿ ಭಟ್ ......................


Friday 27 September 2013

ಗಿಡದ ವ್ರತ


ಮೋಡದಲೊಂದು  ಮಳೆಹನಿಯ ಒರತೆ
ಆ ಹನಿ ಸ್ಪರ್ಶಕೆ ಗಿಡದ ವ್ರತವು
ಚುಂಬಿಸಿ ಚುಂಬಿಸಿ ಮನವು ಹಸಿರಾಗಿ
ಹೃದಯವು ಬಯಸಿತು ,  ನಿನ್ನ ಇರುವಿಕೆ
ಸದಾ  , ಕಾಣುವ ನಿನ್ನದೇ ಬಿಂಬ
ಜೊತೆಯಲೇ ಇರು, ಒಲವೇ
ಉರಿಯುವ ಹಣತೆಯ ಹಾಗೆ
ಬೆಳಕನು ನೀಡು ಇರುಳಿನ ಚಪ್ಪರಕೆ
ಅಂಧಕಾರವು ಕಾಣದೆ ಅಡಗಲಿ
ನಾನು ಉಳಿಸುವೆ, ನಾನು ಬೆಳೆಸುವೆ
ನೀವು ಬನ್ನಿರಿ, ನೀವು ಬೆಳೆಸಿರಿ
ಮುಂದಿನ ದಿನದ ವರೆಗೂ  ...


............. ಮಾಲಿನಿ ಭಟ್ .............

ಪ್ರೀತಿ ದೀಪ



ಮೌನವಾದ ಗಾಳಿಯಲ್ಲಿ ನಿನ್ನ ನೆನಪು ಇಣುಕುತಿದೆ
ಬೆಟ್ಟದಾಚೆಯಾಗಸದಲಿ ನಿನ್ನ ಧ್ವನಿಯು ಉಲಿಯುತಿದೆ

ಕಣ್ಣರೆಪ್ಪೆ ಮುಚ್ಚಿ ನೋಡಲು ಕಳೆದ ಮಧುರ ದಿನಗಳ
ಅಲ್ಲೇ ಹರಿವ ಝರಿಯು ಹೇಳಿದೆ ಪ್ರೀತಿ ತುಂಬಿದ ಕ್ಷಣಗಳ

ಜಾರಿಹೋದ ಕಾಲಗರ್ಭಕೆ ಮರವು ಸಾಕ್ಷಿಯೂ ಇಂದು

ಮರಳಿ ಹೋಗಿ , ನೋಡಿ ಬರಲು ಮೂಕವೇದನೆ  ಇಂದು

ಅಳಿಸಿ ಹೋಗಿದೆ ಬಲಿತ ಪ್ರೀತಿಯು , ಮರವೇ ನೊಂದಿದೆ ಅಂದು
ಚಿಕ್ಕ  ಜಗಳಕೆ ಪ್ರೀತಿ ಒಡೆಯಿತು , ಪಶ್ಕಾತಾಪವು ಇಂದು


................ ಮಾಲಿನಿ ಭಟ್ ...............




ಮಧುರ ವೀಣೆಯ ಸ್ವರವು
ಹೃದಯ ಹೃದಯ ದ ಒಳಗೆ 
ನಿಶೆಯ ಕರ ಮನಸೊಳಗೆ
ಇರುಳ ಅಂಗಳದಂತೆ'
ಹೊಳೆಯೋ ತಾರೆಯು ಬರಲು
ಬೆಳಕು ಬದುಕಿನುದ್ದಕ್ಕೂ

ಮಾಲಿನಿ ಭಟ್ ...

ಗಣಪತಿಗೆ ವಂದನೆ



ಗಣಪ ನಿನ್ನ ಸೇವೆಯಲ್ಲಿ ನಾವು ಧನ್ಯರು
ವಿಘ್ನನಿವಾರಕ ನಿನ್ನ ಅಡಿಯಲ್ಲಿ
ನಾವು ಎಲ್ಲರೂ
ವಿದ್ಯೆ  ಬುದ್ಧಿ  ನಿನ್ನ ಸತ್ವದಲ್ಲಿ
ಸಕಲರಿಗೂ  ನೀಡುವೆ
ಭಕ್ತಿಗೆ ತಲೆದೂಗುವ ಏಕದಂತನೇ
ವರಪ್ರಸಾದ ಕಲ್ಪಿಸುವೆ
ಗರಿಕೆ ಹುಲ್ಲಿಗೆ ತೃಪ್ತ ಗಣಪನೇ
ಬಡವ ಬಲ್ಲಿದ ಎಲ್ಲ ಒಂದೆಯೇ
ಜ್ಞಾನದಿ  ನಿನ್ನ ಭಜಿಪಗೆ
ಸಕಲ ಸಿದ್ಧಿ ನೀಡುವ ಗಜವದನೇ .


ಎಲ್ಲರಿಗೂ  ಗಣೇಶ ಚತುರ್ಥಿಯ ಶುಭಾಷಯಗಳು , .



.... ಮಾಲಿನಿ ಭಟ್ ....

Friday 6 September 2013

ನಿನ್ನ ಪ್ರೀತಿ ಅರಮನೆಯಲ್ಲಿ



ಅರಮನೆಯ ನಾ ನೋಡಿಲ್ಲ
ನನ್ನದೇ ಪುಟ್ಟ ಅರಮನೆಯಿದೆ
ಅಲ್ಲಿ ಬೇಧವಿಲ್ಲ  ಯಾವುದಕ್ಕೂ
ಪ್ರೀತಿಗೆ  ಕೊರತೆಯಿಲ್ಲ
ಸಂಬಂಧದ ಸಾಮೀಪ್ಯವಿದೆ
ಭಾವನೆಗಳ ಬಂಧವಿದೆ
ಮನಸುಗಳ ಮಿಲನವಿದೆ
ನಿನ್ನ ಕಾಳಜಿಯ ಕರೆಯಿದೆ
ಇದಕಿಂತ ಮಿಗಿಲಾದ ಅರಮನೆ ಇದೆಯೇ ?


.... ಮಾಲಿನಿ ಭಟ್ ............
ದಾರಿ ದೂರ ,ನೀನಿನ್ನು ದೂರ 
ಮನಸುಗಳು ಮಾತ  ತಪ್ಪಿವೆ 
ಕನಸು  ಎಲ್ಲೋ ಜಾರಿದೆ 
ಬೆಳಕಿನ ಕಿರಣ ಮನದಲ್ಲಿ ಮೂಡಿ 
ನಿಶೆಯು ಸಾಗಲಿ ದೂರ ದೂರ ... 


..... ಮಾಲಿನಿ ಭಟ್ ........ 
ಬಯಸೋದು ಬದುಕಲಿ ಪ್ರೀತಿಯ  ಪರಿಮಳ 
 ಹುಡುಕಿದರೆ  ಸಿಗದು , ಬಾನಿನ ತಾರೆ 
ದೇವರ ಕೃಪೆ ಇರಲು ತಾನೇ ಒಲಿಯುದು 
ಬಣ್ಣದ ತಾರೆಯ ಸೊಬಗ ನೀಡುವುದು 


..... ಮಾಲಿನಿ ಭಟ್ ............... 

ನನ್ನ ಪ್ರೀತಿಯ ಇನಿಯ





ಜೀವ ಕಣದಿ  ಹುದುಗಿ  ಹೋಗಿರುವೆ
ಬಿಡಿಸಲಾರದ  ಬಂಧದಿ ನೆಲೆಸಿರುವೆ
ಕಾಣದೆ ಸಿಲುಕಿರುವೆ
ತಿಳಿಯದ ಪಯಣದಿ
ಹುಡುಕಿದರೂ  ಸಾಧ್ಯವೇ
ಮಾಣಿಕ್ಯ ಹುಡುಕುವುದು
ಎಂಥ ಮಾಯವೋ
ಅರಿಯನು ಒಂದೂ
ಅದೃಷ್ಟವ ನಾ ಕಾಣೇನು
ನಿನಗಿಂತ ಭಾಗ್ಯ ಬೇರೇನೂ ಇಲ್ಲ
ನನ್ನ ಪ್ರೀತಿಯ ಇನಿಯ.


... ಮಾಲಿನಿ ಭಟ್ ......

.............. ಸ್ವಾರ್ಥದಡಿಯಲಿ ...........



ಜಾರುತಿದೆ ಕಡಲು ಮುಗಿಲ ಸಾಲನು ಮೀರಿ
ತೆರೆಯ ಅಂಚಲಿ ಪುಟ್ಟ ಕನಸು ಸೇರಿ ,
ದೂರ ಸಾಗಿದ ನೀರ ಕಲರವ ;
ಬದುಕಿನೊಡನೆ ನರ್ತಿಸಿ ,
ಪುಟ್ಟ  ಗೂಡನು ಸೆಳೆದುಕೊಂಡಿತು
ಹಟದ ಮೋಹಕೆ ವಶವ ಮಾಡಿತು ತನ್ನಲಿ
ತಬ್ಬಿಕೊಂಡು ಜೀವಹಿಂಡಿ ;ಎಸೆದುಬಿಟ್ಟಿತು ದಡದಲಿ ,
ಎಂಥ ಖುಷಿಯೋ , ಅರಿತವರು  ಯಾರಿಲ್ಲ
ಎಲ್ಲ ಬಯಲಿನಾಟ ,
ಜಾರುತಿದೆ ಕಡಲು ಸ್ವಾರ್ಥದ ಅಲೆಯಲಿ ,
ಜಾರುತಿದೆ ಕಡಲು ಮುಗಿಲ ಸಾಲನು ಮೀರಿ


..... ಮಾಲಿನಿ ಭಟ್ .............



ಒಲವಿನ ಕರೆಯಿದೆ



ಮೌನವೇ ಮಾತಾಡು ಬಾ
ಒಲವಿನ ಕರೆಯಿದೆ
ಭಾವನೆಯಲಿ ಚಡಪಡಿಸದಿರು
ಬಾ ಸನಿಹ , ಬಾ ಸನಿಹ ,
ಒಲವಿನ ಕರೆಯಿದೆ
ಹಸಿರೆಲೆಯ   ನೋಡಿ ತಿಳಿ
ಸಂತಸದ ಮರ್ಮವ
ಕಲ್ಪನೆಯ ಕದವ ಎಸೆದು
ವಾಸ್ತವವ ನೋಡು
ನಿನಗಾಗಿ ಕಾದಿರುವುದು
ಈ ಜೀವವು ,
ಬಾ ಸನಿಹ , ಬಾ ಸನಿಹ ,
ಒಲವಿನ ಕರೆಯಿದೆ .
........... MALINI BHAT.............







ದೇವರ ಮಕ್ಕಳು



ಆ ದೇವರ ಕೈ ಗೊಂಬೆ ನಾವು,
ನಡೆಯುದೊಂದೇ ನಮ್ಮ ಕೆಲಸ
ಹುಡುಕೋ ದಾರಿಯು ಸಿಗದು  ಇಲ್ಲಿ
ಸಿಕ್ಕ ಫಲವೇ ಅಮೃತವು
ಅದುವೇ ನಮ್ಮ ಭಾಗ್ಯ



.... ಮಾಲಿನಿ ಭಟ್ ..............

ಕಂಪ್ಯೂಟರ್



ಕಂಪ್ಯೂಟರ್ ನ  ಮುಂದೆ  ಕುಳಿತು 

ಕೀಬೋರ್ಡ್  ಮೇಲೆ ಬೆರಳಾಡಿಸುತ್ತ
ಮೌಸ್ ನ್ನು  ಅತ್ತಿಂದಿತ್ತ ಒಲಾಡಿಸುತ್ತ
ಬಂದ  ಎರರ್ ಒಂದೊಂದೇ ತೆಗೆಯುತ್ತ
ಇಂಟರ್ನೆಟ್ ಸುಮ್ಮನೆ ಬ್ಯುಸಿ ತೋರಿಸುತ್ತ
ಅಲ್ಲಿತನಕ ಸಮಯ ನಿಲ್ಲುವುದೇ
ಯಾವ ಕೆಲಸವೂ ಇಲ್ಲದೆ ,
ಕಂಪ್ಯೂಟರ್ ನ ದರ್ಶನ ಪಡೆದು
ಕಣ್ಣು ಹಾಳು ಮಾಡಿಕೊಂಡಿದ್ದೆ ಲಾಭ ..


.. ಮಾಲಿನಿ ಭಟ್ ....

Saturday 17 August 2013

ಉಂಗುರ



ನಾಚುತಿಹುದು ಬೆರಳು ,
ಉಂಗುರವ ತೊಡಿಸುವಾಗಿನ  ಬೆರಗು ,
ಬರಿಯ  ಉಂಗುರವಲ್ಲ ,
ಎರಡು ಹೃದಯಗಳ ಮಿಲನ ,
ಕುತೂಹಲವು ಬೇರೆ ,
ನವಿರಾದ ಸೆಳೆತ ಬೇರೆ .


... ಮಾಲಿನಿ ಭಟ್ ....
ಗುರಿಯು ಮುಟ್ಟದ ಮಿಡಿತವು
ನನ್ನಲೇನೋ ಆತಂಕವು
ಚಿಗುರು ನಕ್ಕಿದೆ ನನ್ನ ನೋಡಿ
ಮನಸು ಸೋತಿದೆ ಮೌನದಲ್ಲಿ

.... ಮಾಲಿನಿ ಭಟ್ ...........

ಅಣ್ಣನೆಂಬ ಶಕ್ತಿ


 
 
ಪ್ರೀತಿ ಎದೆಯಲಿ , ಹೃದಯ ಹಾರೈಸಿದೆ
ಸದಾ ಸುಖಿಯಾಗಿರು ,ನನ್ನ   ಪ್ರೀತಿಯ ಅಣ್ಣ
 
 
ಮನಸಿನ ಭಾವನೆಯಲಿ , ಕಾದು  ಕುಳಿತಿದೆ
ತೋರ್ಪಡಿಸಲಾಗದ ಮಾತು , ನನ್ನ ಪ್ರೀತಿಯ ಅಣ್ಣ
 
ನೆನಪು ಮರುಕಳಿಸುವುದು , ಸವೆದಿರುವ ದಾರಿಯಲಿ
ಬೆಳಕಾಗಿ ಬರುವೆ,  ನನ್ನ ಪ್ರೀತಿಯ ಅಣ್ಣ
 
 
ರಕ್ಷಣೆಯ ಹೊಣೆಯನ್ನು ಹೊತ್ತಿರುವೆ , ದಾರದಿಂದ ಬಂಧಿಸಲಾರೆ
ಮನಸೇ ನಿನ್ನಲಿರುವುದು ,ನನ್ನ ಪ್ರೀತಿಯ ಅಣ್ಣ
 
 
ಜೊತೆಯಿಲ್ಲ ನಾನೀಗ , ದೂರ ಉಳಿದಿರುವೆ
ಶುಭವಾಗಲಿ  ನನ್ನಣ್ಣಗೆ  ಸದಾ
 
 
ಹೊಳೆಯುವ ನಿನ್ನ ಮುಖವ ನೋಡಿ ಸಂತಸಗೊಳ್ಳುವೆ
 ನಗು - ನಗುತಾ  ಇರು ನನ್ನ ಪ್ರೀತಿಯ ಅಣ್ಣ .
 
 
 
.............  ಮಾಲಿನಿ ಭಟ್
 
 

ನಾ ತೆಂಗಿನಮರ



ಆಗಸದೆತ್ತರ  ಆ ಮರವು
ಚೆಲುವನು ತುಂಬಿದ ನಂದನವು
ಹೆಡೆಯನು ಬಿಚ್ಚಿ ಅಂದವ ಅರಳಿಸಿ
ಮೈ ಉಮ್ಬಿ ನಿಂತಿದೆ  ಈ ಮರವು
ಎಳ ನೀರಿನ ಅಮೃತ ನೀಡಿ
ಅಡುಗೆಯ ರುಚಿಗೆ ಬಲಿತಿರೊ ಫಸಲು
ಬಿದ್ದ ಹೆಡೆಯು  ಚಪ್ಪರವಾಗಿ
ಉಳಿದ ಸಿಪ್ಪೆ ನಾರುಗಳು ಉರುವಲಾಗಿ
ಕರಾವಳಿಯ ಜೀವದ ಸೆಲೆಯು
ಬದುಕಿಗೆ ದಾರಿಯ ನೀಡಿದ ಮರವು
ಅದುವೇ ನಿಮ್ಮ ಪ್ರೀತಿಯ  ಮರವು ....

.... ಮಾಲಿನಿ ಭಟ್ ......

ಪ್ರೀತಿ .. ಮೌನ .... ಅಮೂಲ್ಯ



ಹೃದಯವು ಅರಿತಿದೆ  ನಿನ್ನಯ ಮನಸನು
ಕಣ್ಣಿಗೆ ಕಾಣದು ಆದರೂ ಬೆರೆಯುದು
ಬದುಕಿನ ರಥದ ದಾರಿಯಲಿ
ಹತ್ತಿರವಿರಲಿ , ದೂರವೇ ಇರಲಿ
ತಿಳಿಯುವುದು  ಮನವು
ನಿನ್ನಯ ; ಮೌನದ  ಹಿಂದಿನ ಪ್ರೀತಿಯ ಸಾಗರ ..

.... ಮಾಲಿನಿ ಭಟ್ ..........

ನನ್ನಮ್ಮನ ದಣಿವಿರದ ಕೆಲಸ

 

 
ಸೂರ್ಯ ಏಳೋ ಮೊದಲು
ನನ್ನಮ್ಮನ  ದಿನಚರಿ ಶುರುವಾಗುವುದು
ಯಾವ ಗಡಿಯಾರವು ಇಲ್ಲದೇ
ತಟ್ಟನೇ ಎದ್ದೇಳುವ , ಸ್ವಲ್ಪವೂ ದಣಿವಿರದೆ
ಹೆಗಲಮೇಲಿನ ಬಾರ  ಹೊರುವ
ನನ್ನಮ್ಮ ನಿಜಕ್ಕೂ ಅಧ್ಬುತ   ।। ೧।।
 
ಮನೆ - ಮನದ ಕಸ ತೆಗೆದು
ಪ್ರೀತಿ ರಸವ ಚಿಮುಕಿಸಿ
ಮನೆಯನ್ನು ಅಂದಗೊಳಿಸಿ
ಹಣತೆಯ ಗೂಡಲ್ಲಿ ಬೆಳಕನ್ನ ಮೂಡಿಸಿ
ತಿಂಡಿ ಕಾರ್ಯ ಕೈಗೊಳ್ಳೋ
ನನ್ನಮ್ಮ ನಿಜಕ್ಕೂ ಅಗೋಚರಶಕ್ತಿ   ।।೨।।
 
ಎಲ್ಲರಿಗೂ  ಪ್ರೀತಿಯಿಂದ ತುತ್ತ ಕೊಡೊ
ಕೊನೆಯಲ್ಲಿ ತಿಂಡಿ ತಿಂದಲೋ ಊಟ ಮಾಡಿದಳೋ
ಅರಿಯುವವರು ಒಬ್ಬರೂ ಇಲ್ಲ
ಎಲ್ಲರಿಗಾಗಿ ಉಸಿರನ್ನು  ಹಸಿರಾಗಿಸಿ ದುಡಿವ
ಕರುಣೆಯ ಮೂರ್ತಿಯಾದ
ನನ್ನಮ್ಮ ನಿಜಕ್ಕೂ  ಒಂದು ನಿಗೂಢ ನಿಧಿ   ।।೩।।
 
 
ಪ್ರೀತಿಯಿಂದ ಎಲ್ಲ ನೋವ ಸಹಿಸುತ
ಮಮತೆಯಿದ ಲಾಲಿಸುವ
ಕಣ್ಣಿರ ಮಡುವಿನಲೂ ಸ್ಪಂದಿಸುವ
ತನ್ನ ಉಸಿರನ್ನೇ ನೀಡಿರುವ
ಅವಿರತ ಪರಿಶ್ರಮ ಪಡುವ
ನನ್ನಮ್ಮ ನಿಜಕ್ಕೂ  ಒಂದು ಪವಾಡ ।।೪।।
 
 
ನಿಸ್ವಾರ್ಥ ಸೇವೆ ಮಾಡೋ
ಯಾರಿಗೂ ಕೆಡಕು ಮಾಡದ
ಎಲ್ಲರಲೂ ಸಂತೋಷ ನೋಡುವ
ನನ್ನಮ್ಮನ ನಗುಮುಖದ
ಹಿಂದಿರುವ ಅಳಿಸಲಾಗದ ನೋವು
ನಿಜಕ್ಕೂ ಆ ಗಾಳಿಯಷ್ಟೇ ಮೌನ ।।೫।।
 
 
ನಿದ್ದೆ ಮಾಡುವ ಕಂಗಳು
ತೇವಗೊಂಡಿರುವುದು ನಿಜ
ನೂರು ಹೃದಯ ವೇದನೆ
ಇರುವುದು ಅಷ್ಟೇ ನಿಜ
ಕಲ್ಪನೆಗೂ ಎಟುಕದ ನನ್ನ್ನಮ್ಮ
ನಿಜಕ್ಕೂ ಬ್ರಹ್ಮಸೃಷ್ಟಿಯ ಅವಿಸ್ಮರಣೀಯ ಕೊಡುಗೆ  ।।೬।।
 
 
 
............. ಮಾಲಿನಿ ಭಟ್ .................
 
 

ಅಮ್ಮನ ಮನಸೊಳಗೆ .........

 

 
ಮದುವೆಯಾದ ಮಗಳು ತವರಿನಿಂದ  ಹೊರಟು ನಿಂತಾಗ 
ಕಣ್ಣೀರು ಎಲ್ಲಿಹುದು ಚಿಮುಕಿತು  ಎನ್ನೆದೆಯ ಸೀಳಿ
ದಾರಿಗುಂಟವು  ನಿನ್ನದೇ ನೆನಪು , ನೀ  ನಡೆದ ಹೆಜ್ಜೆಗುರುತುಗಳು 
ಮನಸು ಕೇಳದೆ ಬಂದೆ ನಿನ್ನ ಜೊತೆಯಲಿ ಸನಿಹ
ಮೌನವಾಗಿಯೇ ದುಃಖ ಕಣ್ಣೀರು ....
ಒಂದು ಮಾತು  ಆಡಲಾಗದೆ ಎದೆಯು ಸೆಟೆದಿದೆ ,
ಮೊಗವು ತಿಳಿಸಿದೆ ನೋವಿನೆಳೆಯನು ,
ಹರಸಿದೆ ಮನಸು ... ಶುಭವಾಗಲೆಂದು .
 
 
 
.............  ಮಾಲಿನಿ ಭಟ್ ................
 
 
 
 
 
 

ಗುಲಾಬಿಯ ವ್ಯಥೆ



ಆಗ ತಾನೆ ಅರಳಿದ ಆ ಗುಲಾಬಿ
ಭಯದಲ್ಲಿ ಕಂಪಿಸುತಲಿತ್ತು
ತನ್ನ ಸೌಂದರ್ಯಕೆ ಬೇಸರಿಸಿತ್ತು
ಮನೆಯೊಡತಿಯ ಮಾತು ಕೇಳಿಸಿತ್ತು
ಇನ್ನೇನು ನನ್ನ ಜೀವನ ಮುಗಿಯಿತು
ಕಾಡಿನ ಪುಷ್ಪವಾದರೂ ಆದೇನಾ ?

..... ಮಾಲಿನಿ ಭಟ್ ......
ಸಂಜೆಯ ಇಬ್ಬನಿ ಮೋಡದಿ ಸೆರೆನಿಂತು
ಪ್ರೀತಿಯ ಹಾಡೊಂದ ಸುಳಿಗಾಳಿಯಲ್ಲಿ
ಜೇನಿನ ಹನಿಯಾಗಿ ಹರಡಿತ್ತು
ಅಲ್ಲಿಯೇ ಹಾರಾಡೋ ಹಕ್ಕಿ
ಗೂಡನ್ನು ಮರೆತು ತಲೆಯಾಡಿಸಿತ್ತು
ಎಂತಹ ವಿಸ್ಮಯ ಆ ಕ್ಷಣ ...
 
 
..... ಮಾಲಿನಿ ಭಟ್ ....
ಜೀವನ ಎಲ್ಲಿದೆ ಸಾವಿನ ಹತ್ತಿರ
ಬದುಕಿನ ವೀಣೆ  ಆಸೆಯ ಮಡಿಲಿಗೆ
ನಡೆಸಲು ಆಗದು, ಉಳಿಸಲು ಆಗದು
ನಮ್ಮ ಪಾಲಿಗೆ ಎಲ್ಲವೂ ಮಾಯ
ಹೊಂದಿಕೆ ಎನ್ನುವುದು ....
ಹುಟ್ಟು - ಸಾವಿನ ನಡುವಿನ ಪಯಣ
 
 
 
..... ಮಾಲಿನಿ ಭಟ್ .............
 

Sunday 28 July 2013

ಯುಗಾದಿ


ಹಿಂದೂಗಳ ಹಬ್ಬ, ಯುಗಾದಿಯ ಕಂಪು 
ನವ  ನವೀನತೆ ತುಂಬಲಿ ಎಲ್ಲರ ಮನದಲಿ 
ಚೈತ್ರದ ಸೆರಗಿಗೆ , ಉಲ್ಲಾಸವು ಮೊಳಗಲಿ 
ವರುಷ ಪೂರ್ತಿ ಸಂಭ್ರಮವು ಚಿಗುರಲಿ . 


.....  ಮಾಲಿನಿ ಭಟ್ .................. 

ಯಾರು ನೀ ದೂರದಿ ನಿಂತಿರುವೆ 
ಅರಿತು ನೀ ಮನಸಿಗೆ ಹೊಂದಿರುವೆ 
ದುಗುಡವೆಲ್ಲ  ನಿನ್ನಲಿ ಅರುಹಿರುವೆ 
ಕೇಳಿಯು  ನೀ ಮರೆತು ಹೊರಟಿರುವೆ 
 
..... ಮಾಲಿನಿ ಭಟ್ ............ 
 
ಪುಸ್ತಕವ ತಿರುವಿದಾಗಲೆಲ್ಲ 
ಅಮ್ಮ ಕಟ್ಟಿದ ಕನಸು ಕಂಡಿತು 
ಓದುತ್ತ ಓದುತ್ತ ಸಾರ್ಥಕ 
ಅಮ್ಮ ಕಟ್ಟಿದ ಕನಸು. 
 
 
.... ಮಾಲಿನಿ ಭಟ್ ...... 
ನಾಳೆಯು ನಮ್ಮದಾ?
ನಿನ್ನೆಯು  ನಮ್ಮದಾ?
ಎರಡು ತಿಳಿಯದ 
ಇಂದು ನಮ್ಮದಾ 
ವಿಧಿಯೇ ಮೌನದಿ 
ಕಾದಿರುವಾಗ 
ನಮ್ಮದು  ಏನೂ ಉಳಿದಿಲ್ಲ 
 
ಮಧುರ ನಾವೆಣಿಸದ ಬದುಕು 
ದೇವರ ಕೈಚಳಕ  ಸುಂದರ ಜೀವನ
ಕಷ್ಟ ಸುಖವೇ ಅದಕೆ ಮೆರಗು 
ತಾಳ್ಮೆಯೇ ಎಲ್ಲಕಿಂತ ಅದ್ಭುತ .. 
 
..... ಮಾಲಿನಿ ಭಟ್ ..... 

ಅರ್ಥವಾಗದ ಹೆಣ್ಣಿನ ಜೀವನ


ತೇವಗೊಂಡ ಕಣ್ಣಂಚಲಿ 
ಸೆರೆಹಿಡಿದಿರುವ ನೂರು ನಿಗೂಢ 
ನಿಲುವುಗಳೊಂದಿಗೆ ತನ್ನನ್ನೇ  ಅರಿತು 
ಅರಿಯದವರೊಂದಿಗೆ ಹೆಜ್ಜೆ ಇಡುವ 
ಹೆಣ್ಣಿನ ಮನಸಿಗೊಂದು ಪ್ರೀತಿಯ ವಂದನೆ . 


..... ಮಾಲಿನಿ ಭಟ್ ............. 
ಜೀವನ  ಜಾತ್ರೆಲಿ  ಹೊಸ ಹೊಸ ಮೆರಗು
ಅಳಿಯುದಾ ಉಳಿಯುದಾ ತಿಳಿಯದ ಚಿಗುರು
ಹೊಂದಿಕೆ ಎನ್ನುವುದು ನವ್ಯತೆ ಸೊಬಗು
ನಿಮ್ಮಲಿ ನೋಡಲು ನಮ್ಮಯ ಬದುಕು
ಆಗಲೇ ಧನ್ಯರು  ನಾವುಗಳೆಲ್ಲಾ ....


......  ಮಾಲಿನಿ ಭಟ್ ...........

ಇನಿಯ ನಿನ್ನ ಬರುವಿಕೆಗೆ

 

ದಾರಿ ಕಾಯುತ ಕಣ್ಣು ಸೋತವು
ಇನಿಯ ನೀನು ಬರದೆ ಉಳಿದೆ
ಮೌನದಲ್ಲೇ ನೆನಪು ಇಣುಕಿ
ಮನಸ  ಹದವ ಕಲಕಿತು
ಎಲ್ಲಿ ಸರಿದೆ ,ಧ್ವನಿಯು ಇಲ್ಲ
ಹೃದಯ ತುಂಬಿದೆ ದುಗುಡವು
.....  ಮಾಲಿನಿ ಭಟ್ ........

ಸಂಗಾತಿ

 
 
 ನೀನು ನನ್ನ ಉಸಿರು 
ನನ್ನ ಹೃದಯ ದೀಪವು
ಬೆಳಕ ಕೊಡುವ ಆಸೆ ನನ್ನಲಿ
ಚಿರವು ಆಗಲಿ ನಮ್ಮ ಪ್ರೀತಿಯು
 
 
...... ಮಾಲಿನಿ ಭಟ್ ......
 

ನಗುವ ಹಂಚುವ



ಬಿಸೋ  ಗಾಳಿಗೇಕೋ  ಕಾತರ
ನಿನ್ನ ನೋಡೋ  ಆತರ
ಮನಸ  ಗರ್ಭದಿ ನಿನ್ನ ನೆರಳಿದೆ
ಹುದುಗಿ  ಬೆಳೆದಿದೆ ಸೊಂಪಿನೊಂದಿಗೆ
ಬಯಕೆಯೆಲ್ಲ ಚೆಲ್ಲಿದೆ ಗಂಧದೊಂದಿಗೆ
ನಗುವ ಹರಡಬೇಕಿದೆ  ನಮ್ಮ ಸುತ್ತಲೂ
ಅಳುವ ಕಂಗಳಲ್ಲೂ ಪ್ರೀತಿ ನೆಲೆಸಲು
ನಾವು ನೀವು ಎಲ್ಲರು  ಸ್ವಾರ್ಥ  ಮರೆಯುವ..


......  ಮಾಲಿನಿ ಭಟ್ .................... 

ಪ್ರೀತಿ .. ಮೌನ .... ಅಮೂಲ್ಯ



ಹೃದಯವು ಅರಿತಿದೆ  ನಿನ್ನಯ ಮನಸನು
ಕಣ್ಣಿಗೆ ಕಾಣದು ಆದರೂ ಬೆರೆಯುದು
ಬದುಕಿನ ರಥದ ದಾರಿಯಲಿ
ಹತ್ತಿರವಿರಲಿ , ದೂರವೇ ಇರಲಿ
ತಿಳಿಯುವುದು  ಮನವು
ನಿನ್ನಯ ; ಮೌನದ  ಹಿಂದಿನ ಪ್ರೀತಿಯ ಸಾಗರ ..

.... ಮಾಲಿನಿ ಭಟ್ .......... 

ಅಮ್ಮನ ಮನಸೊಳಗೆ .........


 
ಮದುವೆಯಾದ ಮಗಳು ತವರಿನಿಂದ  ಹೊರಟು ನಿಂತಾಗ 
ಕಣ್ಣೀರು ಎಲ್ಲಿಹುದು ಚಿಮುಕಿತು  ಎನ್ನೆದೆಯ ಸೀಳಿ
ದಾರಿಗುಂಟವು  ನಿನ್ನದೇ ನೆನಪು , ನೀ  ನಡೆದ ಹೆಜ್ಜೆಗುರುತುಗಳು 
ಮನಸು ಕೇಳದೆ ಬಂದೆ ನಿನ್ನ ಜೊತೆಯಲಿ ಸನಿಹ
ಮೌನವಾಗಿಯೇ ದುಃಖ ಕಣ್ಣೀರು ....
ಒಂದು ಮಾತು  ಆಡಲಾಗದೆ ಎದೆಯು ಸೆಟೆದಿದೆ ,
ಮೊಗವು ತಿಳಿಸಿದೆ ನೋವಿನೆಳೆಯನು ,
ಹರಸಿದೆ ಮನಸು ... ಶುಭವಾಗಲೆಂದು .
 
 
 
.............  ಮಾಲಿನಿ ಭಟ್ ................
 

ನನ್ನಮ್ಮನ ದಣಿವಿರದ ಕೆಲಸ

 
ಸೂರ್ಯ ಏಳೋ ಮೊದಲು
ನನ್ನಮ್ಮನ  ದಿನಚರಿ ಶುರುವಾಗುವುದು
ಯಾವ ಗಡಿಯಾರವು ಇಲ್ಲದೇ
ತಟ್ಟನೇ ಎದ್ದೇಳುವ , ಸ್ವಲ್ಪವೂ ದಣಿವಿರದೆ
ಹೆಗಲಮೇಲಿನ ಬಾರ  ಹೊರುವ
ನನ್ನಮ್ಮ ನಿಜಕ್ಕೂ ಅಧ್ಬುತ   ।। ೧।।
 
ಮನೆ - ಮನದ ಕಸ ತೆಗೆದು
ಪ್ರೀತಿ ರಸವ ಚಿಮುಕಿಸಿ
ಮನೆಯನ್ನು ಅಂದಗೊಳಿಸಿ
ಹಣತೆಯ ಗೂಡಲ್ಲಿ ಬೆಳಕನ್ನ ಮೂಡಿಸಿ
ತಿಂಡಿ ಕಾರ್ಯ ಕೈಗೊಳ್ಳೋ
ನನ್ನಮ್ಮ ನಿಜಕ್ಕೂ ಅಗೋಚರಶಕ್ತಿ   ।।೨।।
 
ಎಲ್ಲರಿಗೂ  ಪ್ರೀತಿಯಿಂದ ತುತ್ತ ಕೊಡೊ
ಕೊನೆಯಲ್ಲಿ ತಿಂಡಿ ತಿಂದಲೋ ಊಟ ಮಾಡಿದಳೋ
ಅರಿಯುವವರು ಒಬ್ಬರೂ ಇಲ್ಲ
ಎಲ್ಲರಿಗಾಗಿ ಉಸಿರನ್ನು  ಹಸಿರಾಗಿಸಿ ದುಡಿವ
ಕರುಣೆಯ ಮೂರ್ತಿಯಾದ
ನನ್ನಮ್ಮ ನಿಜಕ್ಕೂ  ಒಂದು ನಿಗೂಢ ನಿಧಿ   ।।೩।।
 
 
ಪ್ರೀತಿಯಿಂದ ಎಲ್ಲ ನೋವ ಸಹಿಸುತ
ಮಮತೆಯಿದ ಲಾಲಿಸುವ
ಕಣ್ಣಿರ ಮಡುವಿನಲೂ ಸ್ಪಂದಿಸುವ
ತನ್ನ ಉಸಿರನ್ನೇ ನೀಡಿರುವ
ಅವಿರತ ಪರಿಶ್ರಮ ಪಡುವ
ನನ್ನಮ್ಮ ನಿಜಕ್ಕೂ  ಒಂದು ಪವಾಡ ।।೪।।
 
 
ನಿಸ್ವಾರ್ಥ ಸೇವೆ ಮಾಡೋ
ಯಾರಿಗೂ ಕೆಡಕು ಮಾಡದ
ಎಲ್ಲರಲೂ ಸಂತೋಷ ನೋಡುವ
ನನ್ನಮ್ಮನ ನಗುಮುಖದ
ಹಿಂದಿರುವ ಅಳಿಸಲಾಗದ ನೋವು
ನಿಜಕ್ಕೂ ಆ ಗಾಳಿಯಷ್ಟೇ ಮೌನ ।।೫।।
 
 
ನಿದ್ದೆ ಮಾಡುವ ಕಂಗಳು
ತೇವಗೊಂಡಿರುವುದು ನಿಜ
ನೂರು ಹೃದಯ ವೇದನೆ
ಇರುವುದು ಅಷ್ಟೇ ನಿಜ
ಕಲ್ಪನೆಗೂ ಎಟುಕದ ನನ್ನ್ನಮ್ಮ
ನಿಜಕ್ಕೂ ಬ್ರಹ್ಮಸೃಷ್ಟಿಯ ಅವಿಸ್ಮರಣೀಯ ಕೊಡುಗೆ  ।।೬।।
 
 
 
............. ಮಾಲಿನಿ ಭಟ್ .................
 

Friday 26 April 2013

ಸ್ವಯಂ ಪ್ರತಿಷ್ಠೆ ...

ನನ್ನ ಬಗ್ಗೆ ನಾ ಏನನ್ನು ಹೇಳಲಾರೆ
ನಾ ನೂರು ಕಣ್ಣು ಕಾಣಲಾರೆ
ಹುಡುಕುವರು ತಪ್ಪ ಸತ್ಯದಲಿ
ನಿಜವು ಅವರ ಮನಸಿಂದ ಅರಿಯಲಿ.

........... ಮಾಲಿನಿ ಭಟ್ .................
 
ಯಾರು ನೀ ದೂರದಿ ನಿಂತಿರುವೆ
ಅರಿತು ನೀ ಮನಸಿಗೆ ಹೊಂದಿರುವೆ
ದುಗುಡವೆಲ್ಲ ನಿನ್ನಲಿ ಅರುಹಿರುವೆ
ಕೇಳಿಯು ನೀ ಮರೆತು ಹೊರಟಿರುವೆ
..... ಮಾಲಿನಿ ಭಟ್ ............
ಪುಸ್ತಕವ ತಿರುವಿದಾಗಲೆಲ್ಲ
ಅಮ್ಮ ಕಟ್ಟಿದ ಕನಸು ಕಂಡಿತು
ಓದುತ್ತ ಓದುತ್ತ ಸಾರ್ಥಕ
ಅಮ್ಮ ಕಟ್ಟಿದ ಕನಸು.
.... ಮಾಲಿನಿ ಭಟ್ ......

ಕಸದ ಜೀವನ



 ನೀರಲಿ ತೇಲೋ ಕಸವು
ಚೇತನವಾದರೆ ಎಷ್ಟು ಚೆಂದ

...
ಚಹರೆಯ ತಿರುಚಿ, ಅಂದದ ರೂಪವ ನೀಡಲು
ದೀಪ್ತಿಯ ಕಾಂತಿಯಲಿ ಮಧುರ ಕ್ಷಣವು

ತಮವನು ಅಳಿಸಿ, ಜ್ಯೋತಿಯ ತೋರಲು
ವಿಸ್ತರ ದೇಹದ ಸುಪ್ತತೆಯರಿಯಲು

ಜ್ನಾನದ ಅಭಿಷೇಕ ಮಾಡಲು
ಪ್ರತಿಭೆಯ ಹೊಮ್ಮುವ ರೀತಿಯ ನೋಡಲು

ನೆಪ ಮಾತ್ರಕೆ ಮಾಡದೆ ಉಳಿಯಲು
ಉನ್ನತ ಸಾಧನೆ , ಸಾಧ್ಯತೆ ಹೆಚ್ಚಲು

ನೀರಲಿ ತೇಲೋ ಕಸವು
ವಿಶಿಷ್ಟ ಜೀವನ ನಡೆಸಲು
ಎಷ್ಟು ಚೆಂದವು ಅದ ಸವಿಯಲು.


Malini Bhat..

Wednesday 20 March 2013


ದಿನದ ಆಯಾಸ ಕಳೆದು
ಮುಸ್ಸಂಜೆಯ ಇಂಪಲಿ
ಪ್ರಕೃತಿಯ ಸೌಂದರ್ಯದಿ  
ಹೊಸ ಕನಸ ಹೆಣೆಯೋ ಆಸೆ


ನಮ್ಮ ನಿಮ್ಮ ನಡುವೆ ,
ಅಜಗಜಾಂತರ ವ್ಯತ್ಯಾಸ ,
ನಿಮ್ಮಲೊಂದು ಪುಟ್ಟ ಮನಸು
ನನ್ನಲೊಂದು ಪುಟ್ಟ ಮನಸು
ಅದರೊಳಗೆ  ಹೇಳಲಾಗದಸ್ಟು ವಿಷಯಗಳು ..
ಹೇಳಬೇಕೆನಿಸುವುದು ಆದರೂ ಹೇಳಲು
ಸಾಧ್ಯವಿಲ್ಲ ಅಂತಹ ಮನಸು ನಮ್ಮದು..
ಏಕೆಂದರೆ ನೋವನ್ನು ನಿಮಗೆ ನೀಡುವುದು  ಸರಿಯೇ ..

ಮನಸಿಗಾಗಿ ಬದುಕೋಣ
ನಾಳೆಗಾಗಿ ಕನಸು ಹೆಣೆಯೋಣ
ಈ  ದಿನದ ನೆನಪೊಂದಿಗೆ
ಸುಂದೆರ ಜೀವನಕ್ಕಾಗಿ ಕಾಯೋಣ ..
                  ವಿದಾಯ ಗೆಳೆಯರೇ , ಶುಭ ಸಂಜೆಯ ವಿದಾಯ...

ಕನಸು ಕಾಣಬೇಕು ಅನಿಸುವುದು
ಆದರೇನು ಮಾಡಲಿ ಹೇಳು
ಕನಸ ಭಾವನೆಗಳೆಲ್ಲ ಒಣಗಿ ಹೋಗಿದೆ
ಈಗ  ಸಂಜೆ ಪುನಹ ಆಗುತಿದೆ ..
ಏನು ಮಾಡಲಿ ಗೆಳಯ ..
ಮತ್ತೆ ಆ ತಂಪು ಆಕಾಶ ಕಂಡಾಗಲೆಲ್ಲ
ಮನಸು ಮತ್ತೆ  ಹಳೆಯ ದಿನಗಳತ್ತ ಸಾಗುವುದೇ
ಎಂಬ ಭಯ ......!!!!
 
 

ಎಲ್ಲರೂ ಎಷ್ಟು ಚೆಂದದ ಬದುಕು ನಡೆಸುತ್ತಿದ್ದರೆ ,
ನಮಗೇಕೆ ಸಂತಸದ ಜೀವನ ಸಿಕ್ಕಿಲ್ಲ , ಆದರೆ
ಈಗೀಗ ಅರ್ಥವಾಗುತ್ತಿದೆ , ದುಃಖ ಎಲ್ಲರ ಸೊತ್ತು
ಕಷ್ಟದಲ್ಲಿ ಸುಖ ಹುಡುಕೋ ಪ್ರಯತ್ನ ನಮ್ಮದು ...
 
         Malini Bhat

ನಾನು ಯಾರು ?



ನಾನು ಯಾರೆಂದು ನನಗೆ ತಿಳಿಯದು
ಜೀವನದ ಪ್ರತಿ ಕ್ಷಣನು ಚಿಂತಿಸುವೆ
ಚೆಂದದ ಹೆಸರಿದೆ ನಿಜ ..
ವ್ಯಕ್ತಿತ್ವ ಒಳ್ಳೆಯದೇ ಅದೂ ನಿಜ ,
ನಮಗೆಲ್ಲ ಅರ್ಹತೆಯ ಮಾಪಕ
ಎಂತಾ ವಿಚಿತ್ರವೋ ತಿಳಿಯದು ..
ನಿಗೂಢ , ಆದರೆ ಸತ್ಯ ..
ಮಾನದಂಡ ಅವಶ್ಯವೇ ?..
ಹೀಗೆ ಇರುವುದೇ ... ಬದಲಾಗುವುದೇ..?

ಮನ



ಸಾಗುವ ಜೀವನದಿ ಎಲ್ಲೋ ತಪ್ಪಿದೆ
ಮನಸು ಅರಿಯದೆ ತಲ್ಲಣಿಸಿದೆ ,
ಉಸಿರು ಬಿಗಿ ಹಿಡಿದಿದೆ ,
ಒಮ್ಮೆ ನನ್ನ ನಾನು ಮರೆಯಬೇಕು
ಭಾವನೆಗಳನ್ನು ತೊಡೆದು ಹಾಕಬೇಕು .
 
 
ದಿನ-ದಿನವೂ ದೂರ-ದೂರವಗುತಿದೆ
ಬದುಕು  ಬೇಸರಿಸಿದೆ
ಹೇಗೆ ಸಾಗಬೇಕು ,ಭವಿಷ್ಯವೇ  ಮುಳುಗಿದೆ
ಮಾತು -ಮೌನ ಎಲ್ಲವೂ ಸಾಕಾಗಿದೆ .
ಮನವೆಲ್ಲ ಹಾಯಾಗಬೇಕು..
 

    .....Malini Bhat.............
 
 
 
 
 
ಸ್ವಾರ್ಥ
 ಜೀವನದ ಪ್ರತಿ ಕ್ಷಣನು ಬಯಸುತ್ತೇವೆ
ನಮಗಾಗಿ ಒಂದು ಜೀವ ಇರಬೇಕು  
ಆದರೆ  ಯಾವ  ಸಮಯವೂ  ಯೋಚಿಸೋದಿಲ್ಲ
ಬೇರೆಯವರಿಗಾಗಿ  ಬದುಕಬೇಕು
ಎಂತಹ  ಸ್ವಾರ್ಥ ನೀವೇ ನೋಡಿ


  ಈ ಪ್ರಪಂಚ ಹೇಗಿದೆ ಎಂದರೆ ಇಲ್ಲಿ ಯಾರಿಗೂ ಯಾರು ಎಲ್ಲ , ಆದರೂ ನಾವುಗಳು ಹುಚ್ಚು ಸಂಬಂಧದ ನೆಪದಲ್ಲಿ, ಪ್ರೀತಿಯ ಬಯಕೆಯಲ್ಲಿ, ಭಾಂಧವ್ಯದ  ಸುಳಿಯಲ್ಲಿ ವ್ಯಾಮೋಹದ ಅಡಿಯಲ್ಲಿ , ಎಷ್ಟು ಸಲ ನಮಗೆ ನಾವು ಅಂದುಕೊಂಡಿಲ್ಲ , ಯಾರನ್ನೋ ನೋಡಿ ನಾವು ಹಾಗೆ ಇರಬೇಕು ಎಂದು , ಆದರೆ ಅವರ ಕಷ್ಟ ಅವರಿಗೆ ಗೊತ್ತು ಅವರುಗಳು ನಮ್ಮನ್ನು ನೋಡಿ ಏನೋ ಅಂದುಕೊಳ್ಳುತ್ತಾರೆ  , ಎಷ್ಟು ವಿಚಿತ್ರ ಅಷ್ಟೇ  ಸತ್ಯ .. ಪ್ರತಿಯೊಬ್ಬರೂ ಕಷ್ಟ   ಪಟ್ಟು ದಿನವಿಡೀ   ದುಡಿಯುತ್ತಾರೆ ,ಹಾಗೆ ಮನದಲ್ಲಿ ಸದಾ ನೆನೆಯುತ್ತಿರುತ್ತಾರೆ  ಒಂದು ಸುಂದೆರ್ ನೆಮ್ಮದಿ ಜೀವನ ಸಾಗಿಸಲು,  ಹಣವನ್ನು ಬೇಕಾದಷ್ಟು ಗಳಿಸುತ್ತಾರೆ ಆದರೆ ಅವರಿಗೆ ಆ ಜೀವನ ಗಗನ ಕುಸುಮವಾಗಿಯೇ  ಉಳಿದು ಬಿಡುತ್ತದೆ  , ಇಲ್ಲಿ ಕೇವಲ ಒಬ್ಬರ ಪಾತ್ರವಿರುವುದಿಲ್ಲ .. ಯಾವಾಗಲು  ಇಬ್ಬರಲ್ಲೂ ಹೊಂದಿಕೊಳ್ಳುವ ಗುಣ ಇರಬೇಕು .. ಎಲ್ಲ ಸಂದರ್ಭಗಳಲ್ಲೂ ,ಸಮಸ್ಯೆ ಬಂದಾಗ ತಾಳ್ಮೆಯಿಂದ ಬಿಡಿಸುವ ಜಾನ್ಮೆಯು ಇರಬೇಕು .. 

  ಈ ಪ್ರಪಂಚ ಹೇಗಿದೆ ಎಂದರೆ ಇಲ್ಲಿ ಯಾರಿಗೂ ಯಾರು ಎಲ್ಲ , ಆದರೂ ನಾವುಗಳು ಹುಚ್ಚು ಸಂಬಂಧದ ನೆಪದಲ್ಲಿ, ಪ್ರೀತಿಯ ಬಯಕೆಯಲ್ಲಿ, ಭಾಂಧವ್ಯದ  ಸುಳಿಯಲ್ಲಿ ವ್ಯಾಮೋಹದ ಅಡಿಯಲ್ಲಿ , ಎಷ್ಟು ಸಲ ನಮಗೆ ನಾವು ಅಂದುಕೊಂಡಿಲ್ಲ , ಯಾರನ್ನೋ ನೋಡಿ ನಾವು ಹಾಗೆ ಇರಬೇಕು ಎಂದು , ಆದರೆ ಅವರ ಕಷ್ಟ ಅವರಿಗೆ ಗೊತ್ತು ಅವರುಗಳು ನಮ್ಮನ್ನು ನೋಡಿ ಏನೋ ಅಂದುಕೊಳ್ಳುತ್ತಾರೆ  , ಎಷ್ಟು ವಿಚಿತ್ರ ಅಷ್ಟೇ  ಸತ್ಯ .. ಪ್ರತಿಯೊಬ್ಬರೂ ಕಷ್ಟ   ಪಟ್ಟು ದಿನವಿಡೀ   ದುಡಿಯುತ್ತಾರೆ ,ಹಾಗೆ ಮನದಲ್ಲಿ ಸದಾ ನೆನೆಯುತ್ತಿರುತ್ತಾರೆ  ಒಂದು ಸುಂದೆರ್ ನೆಮ್ಮದಿ ಜೀವನ ಸಾಗಿಸಲು,  ಹಣವನ್ನು ಬೇಕಾದಷ್ಟು ಗಳಿಸುತ್ತಾರೆ ಆದರೆ ಅವರಿಗೆ ಆ ಜೀವನ ಗಗನ ಕುಸುಮವಾಗಿಯೇ  ಉಳಿದು ಬಿಡುತ್ತದೆ  , ಇಲ್ಲಿ ಕೇವಲ ಒಬ್ಬರ ಪಾತ್ರವಿರುವುದಿಲ್ಲ .. ಯಾವಾಗಲು  ಇಬ್ಬರಲ್ಲೂ ಹೊಂದಿಕೊಳ್ಳುವ ಗುಣ ಇರಬೇಕು .. ಎಲ್ಲ ಸಂದರ್ಭಗಳಲ್ಲೂ ,ಸಮಸ್ಯೆ ಬಂದಾಗ ತಾಳ್ಮೆಯಿಂದ ಬಿಡಿಸುವ ಜಾನ್ಮೆಯು ಇರಬೇಕು .. 

ಈ ಕಲಬೆರಕೆ ದಂಗೆಯೋಳು
ಕಾಣದಂತೆ ಮಾಯವಾಗುವುದೇ?
ನಾವೇ ಕಟ್ಟಿಕೊಂಡ ಸಂಬಂಧಗಳು,
ಅಗೋಚರ ಶಕ್ತಿಯ ವಿಸ್ಮಯ ಆಟಗಳು ......... 
 

Monday 18 March 2013

ಬಣ್ಣದ ಮಾತೆ ನೋವಿನ ಪ್ರಾರಂಭ 
ಬುದ್ಧಿಯ ಮಾತೆ ಗೆಲುವಿನ ಆರಂಭ 
ಮೋಹದ ಸೆಳೆತಕೆ ಕೊಡು ನೀ ಕಡಿವಾಣ 
ಜಾಣ್ಮೆಯ ಬದುಕಿಗೆ ಕೊಡು ನೀ ಪ್ರಾಧಾನ್ಯ 

.... ಮಾಲಿನಿ ಭಟ್ .................. 


ಮೌನ ಗೆರೆಯ ಪರಿಧಿಯ  ಒಳಗೆ
ಹನಿಗಳ ಗುಚ್ಹ ಅರಳಲು ನಿಂತಿದೆ
ಒಳಗಿನ ಭಾವನೆ ಬೆಳಕನು ನೋಡಲು ಕಾದಿದೆ
ಜೀವನ ನೌಕೆಗೆ ,ಬೇಲಿ  ಹೊರಗೆ
ಜೊತೆಯಲಿ ನಡೆಯುವ  ಬಾ
ಮಧುರ ಮನಸಿನ ಮಾತುಗಳ ಸರದಿಯಲಿ ...
 

 
............ಮಾಲಿನಿ ಭಟ್ .........................
 
 
 
ಗುರುತಿಲ್ಲದೆ ಗುರುತು ಹಿಡಿಯಲು ಸಾಧ್ಯವಿಲ್ಲ 
ಮನಸಿಲ್ಲದೇ ಭಾವನೆ ಬೆಳೆಯಲು ಸಾಧ್ಯವಿಲ್ಲ 
ನೀನಿಲ್ಲದೆ ಜೀವನ ಇಲ್ಲ ಎನ್ನುವುದು ಸುಳ್ಳು 
ಹಾಗೆಯೇ  ನೀ ಏನು ಅಲ್ಲ ಎನ್ನುವುದು ಸುಳ್ಳು 


..........ಮಾಲಿನಿ ಭಟ್ 
ನಿನ್ನಲ್ಲಿ ಇರುವುದು ಒಂದು ತಪ್ಪು 
ನನ್ನಲ್ಲೇ ಇರುವುದು ಹಲವು ತಪ್ಪು 
ತಿದ್ದಿಕೊಳ್ಳುವ ಗುಣ ಎಲ್ಲರಲೂ ಇರಲು 
ವಿಶ್ವವೇ ನಲಿಯುವುದು ಹಕ್ಕಿಯಾಗಿ. 


............ ಮಾಲಿನಿ ಭಟ್ ................. 

Sunday 3 March 2013


ಮರಳಿನಿಂದ ಕಟ್ಟಿದ ಸುಂದರ ಗೂಡು
ಸಾಗರದ ಅಲೆಗೆಕೋ ಅಸೂಯೆ
ಪ್ರೀತಿಯ ತುಂಬಿದ ಅದರಲ್ಲಿ
ಸಂತೋಷವೇ ಅರಳಿತ್ತು,
ಮಾತ್ಸರ್ಯ ತುಂಬಿ ಹತ್ತಿರ ಬಂದಿತ್ತು
ಆ ಪ್ರೀತಿಗೆ ಸೋತು ಅಲ್ಲೆ ಕಾದಿತ್ತು.

……ಮಾಲಿನಿ ಭಟ್…………………

ಸುತ್ತಲೂ ಹೂಗಳಿಂದ ತುಂಬಿದ ಗಿಡವೇ 
ನಿನ್ನ ನೋಡಿ ಜಗವೇ ಬೆರಗಾಗಿದೆ 
ಕಾಯಿ ಹಣ್ಣಿಗೆಲ್ಲ  ನೀ ಮೂಲ 
ನಿನ್ನ ನೋಡಿ ಕಲಿಯೋದು ತುಂಬಾ ಉಳಿದಿದೆ . 

.....  ಮಾಲಿನಿ ಭಟ್ .................. 
ಬೀಸೋ ಗಾಳಿಗೆಕೋ  ಬೇಸರ 
ನಿನ್ನ ಮನಸು ಕದಡುದೆಂಬ ಚಿಂತೆಯು
ಎಲ್ಲವನ್ನು ಮನಸಿನಲ್ಲೇ ಹುದುಗಿಸಿ 
ಕೊನೆಯಲ್ಲಿ ನೋವು ಉಳಿವುದೆಂಬ ದುಗುಡವು .. 


................ ಮಾಲಿನಿ  ಭಟ್ .....................  


 
ಮನಸಿನ ಕನಸಲ್ಲಿ ಪ್ರೀತಿಯ ಬೆಳೆಸಿ 
ಕೊನೆಯುಸಿರು ಇರುವ ತನಕ ಉಳಿಸಿ 
ಎಂದೆಂದೂ ಚಿರವಾಗಿ ಬೆಳಕನ್ನ ನೀಡು 
ಅದುವೇ ಆಶಯ ನಮ್ಮದು 


.....ಮಾಲಿನಿ ಭಟ್ ...............

ಬಾಲ್ಯದೆಲೆಯ ಮೇಲೆ ಕೂಡಿಕೊಂಡ ಇಬ್ಬನಿ
ಹರಳಿನಂತೆ ತಬ್ಬಿ ಹಿಡಿದ ನಿನ್ನ ಪುಟ್ಟ ಮಂದಿರ
ಸೌಂದರ್ಯದಿ ಸಾಟಿ ನಿನಗೆ ಸಲ್ಲದು
ನಿನ್ನ ನೋಡಿ ಖುಷಿಯ ಪಡುವುದೇ ನಮ್ಮ ಭಾಗ್ಯವು.
 
 
 
...ಮಾಲಿನಿ ಭಟ್........................

ಮುಗಿಲಲಿ  ನೋಡು ಮೋಡದ ಸಾಲು
ಕರೆದಿವೆ ನಿನ್ನನು ಬಾ ಎಂದು ,
ಬರದೆಹೋದರೆ ನೋವನು ಸಹಿಸೆನು ,
ಕಾಡುತ ನೀನಗೆ ಶರಣಾಗಿ ..
 
 
..... ಮಾಲಿನಿ ಭಟ್...............
 
  
 

         ಅಂಬೇಡ್ಕರ್
 
 
ಸಂವಿಧಾನದ ರಚನೆಯ ರೂವಾರಿ
ಪ್ರಜೆಗಳ ಹಕ್ಕಿನ ಕಾರಣಕರ್ತ
ಕರ್ತವ್ಯವನು ನೆನಪಿಗೆ ತಂದು
ದೇಶಕೆ ಹೊಸದು ಕಾಣಿಕೆ ನೀಡಿದ .
 
.....ಮಾಲಿನಿ ಭಟ್..............
 
 
 

ಕಣ್ಣಿನ ಪರದೆಯಲಿ ಒಮ್ಮೆ ನೋಡು
ಅಡಗಿದೆ ನಿನ್ನ ಪ್ರತಿಬಿಂಬವು
ಸಾವಿಲ್ಲದ ನಯನದಲಿ
ನೀನುಳಿಯಬೇಕು  ಶಾಶ್ವತವಾಗಿ
 
 
...ಮಾಲಿನಿ ಭಟ್................

ಮೈ ಕೊಳೆಯ  ದಿನವೂ ತೊಳೆಯೋ  ನಾವುಗಳು
ಮನಸು ಕೊಳೆಗೆ ಸಿಲುಕಿ ರಾಡಿಯಾಗಿದೆ
ತಪ್ಪೆಂದು ಗೊತ್ತಿದ್ದೂ ಮಾಡೋ ತಪ್ಪುಗಳು
ಮೌಲ್ಯವಿಲ್ಲದ  ಉಪದೇಶದಂತೆ ....
 
 
.......ಮಾಲಿನಿ ಭಟ್....................

ಮನಸ ಇಚ್ಚೆ ದಾಟಿ ಬಂದು
ದೀನನಾಗಿ ಕುಳಿತು ಇಂದು
ಲೋಕದೆಡೆಗೆ ನೋಡೋ ನಯನ
ತಪ್ಪಿನರಿಕೆ ಕಂಡಿತೆ ನಿನ್ನಾತ್ಮಕೆ 
 
..........ಮಾಲಿನಿ ಭಟ್...........
 

Thursday 17 January 2013

ವಿಶ್ವಾಸವಿಲ್ಲದವರು ಅಂಜುವರು 
ಆತ್ಮವಿಶ್ವಾಸವಿದ್ದವರು ಗೆಲ್ಲುವರು
ಎಲ್ಲರಲಿ ಅವಿತಿರುವ ಬೆಳಕಿಗೆ
ಜ್ಞಾನದ  ಸಾಕ್ಷಾತ್ಕಾರ ನಿಡೋಣ
 
.......ಮಾಲಿನಿ ಭಟ್.....

Tuesday 15 January 2013

ಅತ್ಯಾಚಾರದ ಸುಳಿ 

ಇದೇನಿದು ಮೂಕವೇದನೆ
ಇದೇನಿದು ಭಾವಸೂಚನೆ
ಕಣ್ಣಿನ ಹೊಳಪೆಲ್ಲಾ ಸವೆದಿದೆ
ಮುದ್ದು ಮುಖವು ಕಮರಿದೆ 
                                ಯಾರಿಲ್ಲಿ ಸ್ಪಂದಿಸುವರು ನೋವಿಗೆ.||

ಉಸಿರಾದ  ಬದುಕೀಗ  ಬಳಲಿದೆ
ಕನಸೆಲ್ಲಾ ಜೊತೆಗೂಡಿ ಕರಗಿದೆ
ಬೆಳಕು ಹಚ್ಚೊಮೊದಲು ದೀಪ ಆರಿದೆ
ನೋವೆಲ್ಲಾ ಒಂದಾಗಿ ಮುತ್ತಿದೆ.
                               ಯಾರಿಲ್ಲಿ ಸ್ಪಂದಿಸುವರು ನೋವಿಗೆ.||

ಹಸಿಯಾದ ದೇಹ ಸೆಳೆದಿದೆ
ಕಾಮುಕರು ಒಂದೆಡೆ ನಿಂತರು
ಪೈಶಾಚಿಕ ಕೃತ್ಯ ಎಸೆದರು
ಖಡ್ಗವಾಗಿ ಒಬ್ಬೊಬ್ಬರು ತಿವಿದರು
                               ಯಾರಿಲ್ಲಿ ಸ್ಪಂದಿಸುವರು ನೋವಿಗೆ.||

ಹೆಣ್ಣಾದ ತಪ್ಪಿಗೆ ಶಿಕ್ಶೆಯೇ
ಕಾಮದ ತೃಷೆಯೇ ತೀರದೇ
ಪ್ರಾಣಿಗಿಂತ ಕೀಳಾದನೇ ಮಾನವ
ಪುಟ ಪುಟದಿ ಅಚ್ಚಾಗಿದೆ ಈ ದುರಂತ
                               ಯಾರಿಲ್ಲಿ ಸ್ಪಂದಿಸುವರು ನೋವಿಗೆ.||

ಸಾವಿನ ಬಾಗಿಲು ತೆರೆದಿತ್ತು
ಬದುಕುವ ಆಸೆಯು ಜೀವಂತ
ಮಾನ ಕಳೆದು ದೇಹ ತಿಂದ ಮಂದಿಗೆ
ಶಿಕ್ಶೆಯಿಂದ ಮುಕ್ತಿಯೇ
                               ಯಾರಿಲ್ಲಿ ಸ್ಪಂದಿಸುವರು ನೋವಿಗೆ.|| 


................MALINI BHAT...............................
ಬಚ್ಚಿಟ್ಟ ಪ್ರೀತಿ

ಅವಿತವಿತು ಕುಳಿತ ನಿನ್ನ ನೋಡಿ
ನನ್ನ ಮನಸ್ಯಾಕೋ ಸೆಳೆದಯ್ತೆ ನಿನ್ನ ಬಳಿಗೆ||

ಬರುವಾಗ ಬಂದಂತ ವಯ್ಯಾರ ನೋಡಿ
ತನುವೆಲ್ಲ ಮೆಲ್ಲಗೆ ನಲುಗೈತೆ ||

ಹೂವಂತ ಮೃದುಲ ನಿನ್ನೊಡಲ ಅರಿತು
ಹೃದಯವೇ ಬೇಡಿತು ತನಗಾಗಿ ಎಂದು ||

ಹೇಗ್ ಹೇಗೆ ಕಾಡುವೆಯೋ ನೀನಿಂದು
ಸ್ಪರ್ಶಕೆ ನಲುಗುವೆನೆಂಬ ಭಯವು ||

ಎಲ್ಲಿಂದಲೋ ಬಂದ ನೀನಿಂದು
ಮನೆ ಮಾಡಿ ಕುಳಿತಿರುವೆ ಮನಸಲಿಂದು ||

ಉಳಿದಿರುವೆ ನೀನು ನನ್ನೊಡಲ ಮಡಿಲಲ್ಲಿ
ಹಾಯಾಗಿ ಮಲಗಿರು ಮಗುವಂತೆ. ||
………. ಮಾಲಿನಿ ಭಟ್…………………..
ಬಳ್ಳಿಯಂತೆ ಸುತ್ತಿದ ಪ್ರೀತಿ
ಮರವಾಗಿ ಬೆಳೆಯಬಾರದೆ
ಸಂತೋಷದ ಹಣ್ಣುಗಳನ್ನೀಯಬಾರದೆ
ಅದುವೇ ನಮ್ಮ ಭಾಗ್ಯವಲ್ಲವೇ ...
....ಮಾಲಿನಿ ಭಟ್ .......
ಸದಾ ಉಳಿವ ನಿನ್ನ ನೆನಪು
 
ಮನಸಲಿ ತುಂಬಿರೋ ನಿನ್ನ ನೆನಪು
ಸದಾ ಉಳಿಯಲಿ ಬೆಳಕಾಗಿ
ಅಲೆಯ ಹೂವಾಗಿ ಚೆಲ್ಲಲಿ ಹೃದಯಾಂತರಾಳದಲ್ಲಿ
ಎಲ್ಲಿದ್ದರೂ , ಹೇಗಿದ್ದರೂ ಮನದಲ್ಲಿ ನೀನಿರುವೆ ..
 
 
.....ಮಾಲಿನಿ ಭಟ್ ...................
 
ಕಾಣದ ಕೈ , ದಿಕ್ಕು ಬದಲಿಸುವ ಪರಿಪಾಟ
ಉಸಿರಿನ ಕೀಲಿ , ಭದ್ರವಾಗಿ ಇಟ್ಟಿರುವ ಪರಿ
ಶ್ರೇಷ್ಠತೆಯಲಿ  ಮೆರೆದಾಡೋ  ಇವನು
ಕೊನೆಸಿಗದ ರಹಸ್ಯಕೆ ಸೋಲುವನು ...
 
 
....... ಮಾಲಿನಿ ಭಟ್...........