ಗಣಪ ನಿನ್ನ ಸೇವೆಯಲ್ಲಿ ನಾವು ಧನ್ಯರು
ವಿಘ್ನನಿವಾರಕ ನಿನ್ನ ಅಡಿಯಲ್ಲಿ
ನಾವು ಎಲ್ಲರೂ
ವಿದ್ಯೆ ಬುದ್ಧಿ ನಿನ್ನ ಸತ್ವದಲ್ಲಿ
ಸಕಲರಿಗೂ ನೀಡುವೆ
ಭಕ್ತಿಗೆ ತಲೆದೂಗುವ ಏಕದಂತನೇ
ವರಪ್ರಸಾದ ಕಲ್ಪಿಸುವೆ
ಗರಿಕೆ ಹುಲ್ಲಿಗೆ ತೃಪ್ತ ಗಣಪನೇ
ಬಡವ ಬಲ್ಲಿದ ಎಲ್ಲ ಒಂದೆಯೇ
ಜ್ಞಾನದಿ ನಿನ್ನ ಭಜಿಪಗೆ
ಸಕಲ ಸಿದ್ಧಿ ನೀಡುವ ಗಜವದನೇ .
ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಷಯಗಳು , .
.... ಮಾಲಿನಿ ಭಟ್ ....
No comments:
Post a Comment