Saturday 17 August 2013

ನಾ ತೆಂಗಿನಮರ



ಆಗಸದೆತ್ತರ  ಆ ಮರವು
ಚೆಲುವನು ತುಂಬಿದ ನಂದನವು
ಹೆಡೆಯನು ಬಿಚ್ಚಿ ಅಂದವ ಅರಳಿಸಿ
ಮೈ ಉಮ್ಬಿ ನಿಂತಿದೆ  ಈ ಮರವು
ಎಳ ನೀರಿನ ಅಮೃತ ನೀಡಿ
ಅಡುಗೆಯ ರುಚಿಗೆ ಬಲಿತಿರೊ ಫಸಲು
ಬಿದ್ದ ಹೆಡೆಯು  ಚಪ್ಪರವಾಗಿ
ಉಳಿದ ಸಿಪ್ಪೆ ನಾರುಗಳು ಉರುವಲಾಗಿ
ಕರಾವಳಿಯ ಜೀವದ ಸೆಲೆಯು
ಬದುಕಿಗೆ ದಾರಿಯ ನೀಡಿದ ಮರವು
ಅದುವೇ ನಿಮ್ಮ ಪ್ರೀತಿಯ  ಮರವು ....

.... ಮಾಲಿನಿ ಭಟ್ ......

No comments:

Post a Comment