ಒಂದು ವಿನಂತಿ ಪತ್ರ
ಪ್ರೀತಿಯ ಅಣ್ಣ ,
ನಿನಗೆ ತಿಳಿಯದು ಏನಿದೆ , ಈ ತಂಗಿಯ ಕಥೆಯು , ಹೇಗೆ ನಿನ್ನ ತಂಗಿಯಾದೇನೋ , ಹೇಗೆ ನಿನ್ನ ಗೆಳೆತನವಾಯಿತೋ, ನನಗೆ ತಿಳಿಯದು , ಆದರೆ ಒಂದು ಸತ್ಯ , ಅಣ್ಣ ಎಂದರೆ ನಿನ್ನಂತೆಯೇ ಇರಬೇಕು , ನಾ ಬೇಡದೆ ಆ ದೇವರು ನಿನ್ನನ್ನ್ನು ಕರುಣಿಸಿದ ಅದಕ್ಕೆ ದೇವರನ್ನು ನಂಬುತ್ತೇನೆ , ನನ್ನ ಭಾವನೆಗಳನ್ನು ಗೌರವಿಸಿದೆ , ಕನಸುಗಳಿಗೆ ಸಾಕಾರ ನೀಡಿದೆ ನನ್ನಲ್ಲಿ ಹೊಸ ಚೈತನ್ಯ ತುಂಬಿದೆ. ನಿರ್ಜಿವದಂತಿದ್ದ ನನ್ನನ್ನು ಸುಂದರ ಹೂವಾಗಲು ಸಹಕರಿಸಿದೆ , ನನಗ್ಯಾರು ಇಲ್ಲ ಎಂಬ ನನ್ನ ಮನಸಿನ ಕಲ್ಮಶವನ್ನು ದೂರವಾಗಿಸಿದೆ . ದೇವರೇ ನಿನ್ನನ್ನು ವಿಶಿಷ್ಟವಾಗಿ ಸೃಷ್ಟಿಸಿದ ಸುಗಂಧಿತ ಮನಸು ನಿನ್ನದು , ಕಲ್ಪನೆಗೂ ಎಟುಕದ ಸ್ವಚ್ಛ ಕಿರಣ ನೀನು , ಆದರು ನಿನಗೆ ನಾ ನೋವ ಕೂಟ್ಟಿರುವೇನಲ್ಲ ಅಣ್ಣ , ಅದೂ ನನಗೆ ತಿಳಿಯದೆ , ನಿನ್ನ ಮೇಲಿನ ಪ್ರೀತಿಯಿಂದ , ನಿನ್ನ ಮೇಲಿನ ಮಮಕಾರದಿಂದ , ನೀ ಸದಾ ನನ್ನ ಜೋತೆಗಿರಬೇಕೆಂಬ ಸ್ವಾರ್ಥದಿಂದ ಅಷ್ಟೇ , ಆ ಕೋಪವೆಲ್ಲ ಹೃದಯದಿಂದ ಬಂದಿದ್ದಲ್ಲ , ಮುನಿಸೇತಕೆ ಸಹೋದರ , ಈ ತಂಗಿಯ ಮೇಲೆ , ಹಾಗೆಯೇ ನಿನ್ನ ಮನಸು ಭಾವನೆಗಳನ್ನು ಪ್ರೀತಿಸುತ್ತೇನೆ , ನಿನ್ನ ತಂಗಿಯಾಗಿ ಸದಾ ನಿನ್ನ ಜೊತೆಗಿರಲು ಇಸ್ತಪಡುತ್ತೇನೆ , ನನ್ನ ಉಸಿರಿರೂ ತನಕ ಈ ಸಂಭಂಧವ ಕಾಪಾಡುತ್ತೇನೆ , ಯಾವ ಒತ್ತಡಕ್ಕೆ ಒಳಗಾಗಿ ಈ ಮಾತನ್ನು ಹೇಳ್ತಿಲ್ಲ ನನಗೆ ಗೊತ್ತಿದೆ ಅಣ್ಣ ಯಾವಾಗ ಇದ್ದು ನಡೆದುಬಿಡುತ್ತೇನೆಯೇ ನನಗೂ ತಿಳಿಯದು, ಅಂದು ನಿನಗೆ ತಿಳಿಯದೇನೆ ಇರಬಹುದು , ಆದರೆ ನನ್ನ ಮನಸು , ಭಾವನೆ, ಆಡಿದ ಮಾತು , ಒಡನಾಡಿದ ದಿನಗಳು ,ಕೋಪ ತಂದ ಆ ಕ್ಷಣ , ಮುನಿಸಿಕೊಂಡ ಗಳಿಗೆ , ಇವೆಲ್ಲವೂ ನನ್ನ ನೆನೆಪುಗಳು ಅಣ್ಣ , ಇನ್ನು ಮುನಿಸೇತಕೆ ಅಣ್ಣ ..
ಪ್ರೀತಿಯಿಂದ ನಿನ್ನ ತಂಗಿ ..
ಮಾಲಿನಿ ಭಟ್