ಕರ್ಣ
ಕುಂತಿಯ ಮನದಿ
ಮೂಡಿತು ಪ್ರಶ್ನೆ ,
ಮುನಿಯ ಮಂತ್ರದ
ಸತ್ವಪರೀಕ್ಷೆ ,
ಗಂಗಜಳದಿ; ಸ್ನಾನವ ಮಾಡೇ ,
ಸೂರ್ಯನ ಮಂತ್ರವ ಜಪಿಸಿದೂಡೆ,
ಫಲಿಸಿತು ಮಗುವಿನ ರೂಪದಲಿ ,
ತಾವರೆಯಂತ ಮೊಗವನು ಧರಿಸಿದ ,
ಥಳ - ಥಳ ಹೊಳಪಿನ ನಗುವನು ಕಂಡು
ಮೆಲ್ಲನೆ ಸ್ಪರ್ಶಕೆ ಮೈಮನ ನಲುಗಿ
ಹೃದಯವು ಒಮ್ಮೆ ಕಂಪಿಸಿತು,
ಕಣ್ಣಲಿ ಹೊಳಪು , ಅರಿಯದ ಬೆಳಕು,
ತಲ್ಲಣಗೊಂಡಿತು ಮಗುವನು ಕಂಡು
ಹೆದರಿತು ಮನಸು ತಾ ಕನ್ಯೆಯು ಎಂದು
ಮಗುವನು ನೀರಲಿ ತೆಲಿಸಿಬಿಟ್ಟು
ಹೊರಟಳು ತಾಯಿ ಅರಮನೆಯತ್ತ ...............
No comments:
Post a Comment