ನೀ ದಾಟಿ ಹೋದೆ ನನ್ನದೆಯ ಅರಮನೆಯ
ಬರಿದು ಆಯಿತು ಪೋಣಿಸಿಟ್ಟ ನಿರೀಕ್ಷೆಗಳು
ಸ್ಮಶಾನ ಮೌನ ಉಳಿದುಹೋಯಿತು
ಅರಳೋ ಹೂಗಳು ಮುದ ನೀಡಲಿಲ್ಲ
ಪ್ರೀತಿ ಎನ್ನೋ ತತ್ವಕ್ಕೆ ಮುಳ್ಳಾದೇ ನೀ
ಭರವಸೆಯ ನೆಪ ಮಾಡಿ ಬೇರನ್ನೇ ಕಿತ್ತು ಬಿಟ್ಟೆ
ನಾ ಚೆನ್ನಾಗಿ ಇದ್ದೆ ,.. ಸಂತೋಷದಿ ಮಿಂದಿದ್ದೆ
ನಗುವನ್ನೇ ಕಸಿದು ಬಿಟ್ಟೆ , .. ದುಃಖವ ನೀಡಿದೆ
ಯಾರಲ್ಲಿ ಹೇಳಲಿ,ಅಮ್ಮನಲ್ಲಿ .. ಅಪ್ಪನಲ್ಲಿ
ಸ್ನೇಹಿತರಲ್ಲಿ ,... ಹೇಗೆ ಹೇಳಲಿ
ಯಾರ ಮಾತನ್ನು ಕೇಳಲಿಲ್ಲವಲ್ಲ ಅಂದು
ಎದೆ ಒಡೆದಂತ ಬಡಿತ,..
ದುಃಖಕ್ಕೆ ಕಣ್ಣಿರು ಸೋತಿದೆ
ನೀ ದಾಟಿ ಹೋದೆ ನನ್ನೆದೆಯ ಅರಮನೆಯ
ನಾಳೆ ಉಳಿಯುದೋ ಈ ಜೀವ ನಾ ಕಾಣೇನು .
ಮಾಲಿನಿ ಭಟ್ ....................
No comments:
Post a Comment