Sunday 29 July 2012

ಭೀಷ್ಮ

 
 
ಗಂಗೆಯ ಕುವರ
ಬೆಳೆದನು ರಾಜ್ಯದ ಬೆಳಕಾಗಿ
ಪ್ರೀತಿಯ ಮಗುವಿಗೆ
ಒಲವಿನ ಹೆಸರು ದೇವವ್ರತ
ತಂದೆಯ ಮೋಹದ
ಕಾಮದ ಶರಕೆ
ಅಂಧನೆ ಆದನು ಪುತ್ರನು 
ಸಂಕಟ ನೋಡಲು ಆಗದೆ 
ಹೊರಟನು ಅಂಬಿಗನ ಮನೆಯತ್ತ 
ಕೇಳಿದ ತಂದೆಗೆ ವಧುವಿನ ಭಿಕ್ಷೆ 
ಅಂಬಿಗನಿತ್ತ ಕ್ಲಿಸ್ಟ  ಪ್ರಶ್ನೆ
ನನ್ನ ಮಗಳ ಪುತ್ರರು ರಾಜ್ಯಕೆ
ವಾರಸುದಾರರು ಆಗುವರೇ
ಜೇಷ್ಠ ಪುತ್ರನು ನೀನಿರುವಾಗ
ಯೋಚಿಸಿ ನೀಡಿದ ಸರಳ ಉತ್ತರ
ನಾರಿಯರೆಲ್ಲ ತಾಯಿಗೆ ಸಮ
ಎನ್ನುವ ಪ್ರತಿಜ್ಞೆ ಮಾಡಿದನು
ತಂದೆಯ ಸಂತಸ ನೋಡಿ
ತೃಪ್ತಿಯ ನಗುವ ಬಿರಿದನು
ನಂತರ ತಿಳಿಯಿತು ಲಗ್ನದ ಷರತ್ತು
ಬೇಸರಗೊಂಡನು ಪಾಪಪ್ರಜನೆಯೋಳು
ಪ್ರೀತಿಯ ಪುತ್ರಗೆ ವರವನಿಟ್ಟನು
ಇಚ್ಚಾ  ಮರಣಿಯಾಗು
ಘೋರ ಪ್ರತಿಜ್ಞೆಯ ಪಲವಾಗಿ
ಭೀಷ್ಮನೆಂದು ಹೆಸರಾದನು ........
 
.......ಮಾಲಿನಿ ಭಟ್ .............

No comments:

Post a Comment