ಮನಸಲಿ ಸುಳಿದ ಮಾತಿನ ಪಲ್ಲವಿಗೆ
ಮಿಡಿಯಿತು ಹೃದಯದ ಕನ್ನಡಿಯು
ಸುತ್ತಲು ತಿರುಗುವ ಭೂಮಿಯಲ್ಲಿ
ಸಾಗರದಲೆಯ ಸುಳಿಯಲ್ಲಿ
ಮೋಹನ ತೆರೆಯ ನಾಟ್ಯದಲ್ಲಿ
ಸಿಲುಕಿದ ನಿನ್ನನು ಕಂಡೇನು
ಕರಗಿದೆ ನಿನ್ನಯ ಮಾಯದ ಬೆರಗಿಗೆ
ನಿನ್ನಲಿ ನಾನು ಸೇರಿರಲು
ಅರಿವಿನ ಬಲವು ಕದವನು ತೆರೆಯಲು
ಸೋಲಿನ ಗೆರೆಯ ಮುಟ್ಟಿರಲು
ಬಿಡಿಸಲು ಆಗದೆ ನಲುಗಿರಲು
ಉಸಿರಿನ ಕೊನೆಯೂ ಕಾದಿರಲು
ಮಿಂಚಿತು ಕಿರಣವು ದೂರದಲಿ .
..................ಮಾಲಿನಿ ಭಟ್ ..........
No comments:
Post a Comment