Wednesday 15 February 2012

ಶಂತನು



ಭಾರತ ಕಥೆಯ ಸ್ಪರ್ಶವ ಮಾಡಲು,
ತಿಳಿಯಿತು ಒಲವಿನ ಕಥೆಯೊಂದು,
ಶಂತನು ಎನ್ನುವ ಮಹಾರಾಜ ,
ನದಿಯ ತೀರದಲಿ ಒಂದುದಿನ,ಗಂಗೆಯ ನೋಡಲು 
ಒಮ್ಮೆಲೇ ಮೋಹಿತಗೊಂಡನು ,
ಸುಂದರ ರೂಪಕೆ ,
ತಳಮಳಗೊಂಡನು, ವಿಚಲಿತನಾದನು
ದುಗುಡದಿ ಸೋತನು ಅನುದಿನವು
ಅರಳುವ ಹೂವ ಬಾಡಲು ಬಿಡದೆ 
ತಿಳಿಸಿಯೇ ಬಿಟ್ಟನು ಪ್ರೇಮದ ಸಂದೇಶ 
ಉತ್ತರವಿತ್ತಳು ಕನ್ಯೆಯು ಸರಳ ಸ್ವರೂಪದಿ ,
ವಿರಹದ ತಲ್ಲನದಿ, ರಾಜನು ಇಟ್ಟನು ಶಪಥವ,
ಕಂಕಣ ಬಲವು  ಕೂಡಿಯೇ ಬರಲು  
ಬೆಳಗಿತು ಸಂತಸ ಸಂಭ್ರಮವು
ಕಿರಣವು ಅರಳಿತು ಮಗುವಿನ ರೂಪವ ತಾಳಿ ,
ಹುಟ್ಟಿದ ಕಂದನ ನೀರಲಿ ಬಿಟ್ಟಳು
ಒಂದರ - ನಂತರ - ಇನ್ನೊಂದು
ಚಿಂತಿತನಾದನು ರಾಜನು ಅರಿಯದ ವಾಸ್ತವ ಸಂಗತಿಗೆ ,
ಭಾಷೆಯ ಮರೆತು ಕೇಳಿಯೇ ಬಿಟ್ಟನು
ಮಗುವನು ಏತಕೆ ನೀರಲಿ ಬಿಡುವೆ
ಉತ್ತರವಿಡದೆ ಹುಟ್ಟಿದ ಕಂದನ
ಕೈಯಲಿ ಇತ್ತು ಹೊರಟಳು ಗಂಗೆ ತವರಿಗೆ ..............



.........ಮಾಲಿನಿ ಭಟ್.........


No comments:

Post a Comment