Tuesday 14 February 2012

ಇಂದೇಕೆ ಈ ಸುಡು ಮೌನ
ಕಾಡುತಿದೆ ಒಡಲನು
ಅದೇಕೆ ಬೇಸರಿಸಿ ಕುಳಿತಿದೆ
ಮನವೀಗ,
ಕಣ್ಣು ಕಟ್ಟಿದ ದುಗುಡ
ಭಾವ ಸರಿಸಿದ ತಲ್ಲಣ
ತನುವೀಗ ವಿಭ್ರಾಂತ,
ಮುಸುಕಿದ ತೆರೆಗೆ
ಸಲಹು ದೇವ,
ಸರಿಸು ಮುಸುಕ ಕಲೆಯನು,
ಹೊಸ ಬೆಳಕು ಬರಲು
ಸಹಕರಿಸು ..
ನಿನ್ನಡಿಯಲಿ ನಾ ಬೇಡುವೆ

No comments:

Post a Comment