Monday 27 February 2012

ಬದುಕೆಂಬ ಬಳ್ಳಿಯಲಿ ಹೊಸತನ




ನಮ್ಮೊಳಗೆ ಅವ್ಯಕ್ತವಾಗಿ ಹುದುಗಿರುವ ನೂರೊಂದು ಭಾವನೆಗಳಿಗೆ ಒಂದು ಸುಂದರ ರೂಪ ಕೊಡುವ ದಿನವೇ ನಮಗೆಲ್ಲ ಹೊಸವರುಷ. ದ್ವೇಷ , ಸುಲಿಗೆ , ಅಸೂಯೆ ,.. ಇವೆಲ್ಲವನ್ನೂ ತೊರೆದು ನಮ್ಮತನವನ್ನು ಉಳಿಸಿಕೊಳ್ಳಬೇಕು . ಮನುಷ್ಯಧರ್ಮವನ್ನು ಎತ್ತರಿಸುವುದು . ಪ್ರತಿಯೊಬ್ಬ ಮನುಷ್ಯನು ಹೊಸ ವರ್ಷಾಚರಣೆಯನ್ನು ಹೊರಗಿನ ಆಡಂಬರದ ಜೀವನಕ್ಕಾಗಿ ಮಾಡದೆ ಮನಶುದ್ಧಿಗಾಗಿ ಮಾಡಬೇಕು .
              ಹೇಗೆ ವರ್ತಮಾನ ಕಳೆದು ಭವಿಷ್ಯ ಎದುರಾಗುವುದೋ  ಅಷ್ಟೇ ಕ್ಷಣಿಕ ಈ ದುಃಖಗಳು , ನೋವುಗಳು . ನಿನ್ನೆಯ ನೋವಿಗಾಗಿ ಚಿಂತಿಸದೆ , ಇಂದಿನ ಬದುಕನ್ನು ಸಕಾರಾತ್ಮಕವಾಗಿ ಹೇಗೆ 
ರೂಢಿಸಿಕೊಲ್ಲಬಹುದು   ಎಂಬುದನ್ನು ಅರ್ಥೈಸಬೇಕು . ಯಾವ ರೀತಿ ವರ್ಷ ಕಳೆದು ಹೊಸವರ್ಷವು ಬರುವುದೋ ಹಾಗೆ ಜೀವನದಲ್ಲಿ ಸಾಲುಗಳು ಕಳೆದು ಗೆಲುವುಗಳು ಬರುತ್ತದೆ .ಆದರೆ  ಅದರ ನಿಟ್ಟಿನಲ್ಲಿ ಕಾರ್ಯತತ್ಪರಾಗಬೇಕು .
      ಪ್ರತಿವರ್ಷದ ನಮ್ಮ ಬದುಕಿನಲ್ಲಿ ನೋವು , ನಲಿವು , ದುಃಖ, ಪ್ರೀತಿ , ದ್ವೇಷ , ಅಸೂಯೆ , ನಿಂದೆ , ಅವಮಾನ , ಬಿರುದು  ಸನ್ಮಾನಗಳು ಇರುವುದೂ ಹಾಗೆಯೇ ಹೊಸವರ್ಷವೆಂದ  ಮಾತ್ರಕೆ ಇವೆಲ್ಲವೂ ಅದರಲ್ಲಿಯೂ ಇರುತ್ತದೆ , ಆದರೆ ಎಲ್ಲವನ್ನು ಧೈರ್ಯದಿಂದ  ಎದುರಿಸಿ  ತಾಳ್ಮೆಯಿಂದ ನಿರ್ವಹಿಸಿ ಪ್ರೆರನಾತ್ಮಕವಾಗಿ ಮುನ್ನಡೆಸಿ ಬದುಕನ್ನು ಗೆಲ್ಲುವುದೇ ನಿಜವಾದ ಹೊಸವರುಷ ..

No comments:

Post a Comment