Sunday 5 February 2012

ಅಳುವೇ ಏಕೆ ಮನವೇ
ಕಳೆದ ನೋವ ನೆನೆದು
ಅತ್ತು-  ಅತ್ತು ಸೊರಗಿ ನೀನು 
ಬಳಲದಿರು,
 
ಕನಸ ನೆನದು ಮರುಗದಿರು 
ಹೊಸ ಕನಸ ನೀ ಹೆಣೆ
ಎಲ್ಲ   ಬಲ್ಲೆ ಎಂಬ ತತ್ವ 
ಅಸ್ಟು ಸರಿಯೇ 
 
ಹೂವಿಗಾಗಿ ತಪಿಸದಿರು
ದುಂಬಿ ನೆನೆದು ಸುಮ್ಮನಿರು
ನೋವು ಯಾರಿಗಿಲ್ಲ ಹೇಳು
ಸಹಿಸೋ ಕೆಲಸ ಆಗಬೇಕು
 

No comments:

Post a Comment