ಆ ತೀರದಲಿ , ಅ ಮರಳಿನಲಿ
ಅಲೆಯಾಗಿ ಮೂಡಿ ಬರಲು
ಹೊಸಕನಸ ಕಂಪು ಎಲ್ಲೆಡೆಯೂ
ಪಸರಿಸಲು , ಭಾವಾಂತರಂಗ ಚೆಲ್ಲಲು
ಆ ಗಾಳಿ ಸೋಕಲು , ಆ ನೀರು ಸೇರಲು
ಹೃದಯವು ತನ್ಮಯದಿ ತುಳುಕಾಡಲು
ಜಗವೆಲ್ಲ ತುಂಬಿರಲು ಸುಧೆಯೋಳು
ಕಣ್ಣ ನೋಟದಲೂ , ಮಾತ ಆಂತರ್ಯದಲೂ
ತೇಲಾಡುತಿರಲೂ ಭವ್ಯತೆಯು,
ಮಂಗಳವೂ ಆ ದಿನವೂ
ಮರೆಯದ ಸಂಚಲನ
ಏಳೇಳು ಜನ್ಮದಲೂ ಕೇಳಿಸುವ ಕಿರಣ
ದೀಪದ ಬೆಳಕು ಪ್ರಜ್ವಲಿಸುವಂತೆ
ಜೊತೆಯಲ್ಲೇ ಮೆಲುವಾಗಿ ನೀ ನಡೆಯಲು .......
..........ಮಾಲಿನಿ ಭಟ್ ....
No comments:
Post a Comment