Tuesday 27 March 2012

ತನ್ಮಯವಾದ ಗಳಿಗೆ

 
ಆ ತೀರದಲಿ , ಅ ಮರಳಿನಲಿ
ಅಲೆಯಾಗಿ ಮೂಡಿ ಬರಲು
ಹೊಸಕನಸ ಕಂಪು ಎಲ್ಲೆಡೆಯೂ
ಪಸರಿಸಲು , ಭಾವಾಂತರಂಗ ಚೆಲ್ಲಲು
ಆ ಗಾಳಿ ಸೋಕಲು , ಆ ನೀರು ಸೇರಲು
ಹೃದಯವು ತನ್ಮಯದಿ ತುಳುಕಾಡಲು
ಜಗವೆಲ್ಲ ತುಂಬಿರಲು ಸುಧೆಯೋಳು
ಕಣ್ಣ ನೋಟದಲೂ , ಮಾತ ಆಂತರ್ಯದಲೂ
ತೇಲಾಡುತಿರಲೂ ಭವ್ಯತೆಯು,
 ಮಂಗಳವೂ ಆ ದಿನವೂ
ಮರೆಯದ ಸಂಚಲನ
ಏಳೇಳು  ಜನ್ಮದಲೂ ಕೇಳಿಸುವ ಕಿರಣ 
ದೀಪದ ಬೆಳಕು ಪ್ರಜ್ವಲಿಸುವಂತೆ 
ಜೊತೆಯಲ್ಲೇ ಮೆಲುವಾಗಿ ನೀ ನಡೆಯಲು .......
 
 
..........ಮಾಲಿನಿ ಭಟ್ .... 

No comments:

Post a Comment