ನೂಲು ಚರಕದಿ ಹೊಮ್ಮಿ ಬರಲು
ಭಾವ ಹೃದಯದಿ ಹೊರಟಿತು
ಜೀವ ಬಯಸದೆ ಸಿಲುಕಿತು
ಹೊಸದು ಕಾಣದ ಬಂಧಕೆ
ಮೌನವಾಗಿಯೇ ಕರಗಿತು
ಮುನಿಸು ಒಳಗೆ ಅರಳಿತು
ಎದೆಯ ಬಿಸಿಯು ಏರಿತು
ಅರಿಯದಂತ ಬಂಧಕೆ
ಉಸಿರ ವೀಣೆ ಸ್ವರವ ಚೆಲ್ಲಲು
ದೇಹ ತನ್ನಲೆ ಕಂಪಲು
ಲೋಕ ಕಾಣದೆ ,ಮನಸು ತಾನೆ ನಗುವ ಸೂಸಲು
ಬೆರೆಯಿತೊಂದು ಹೊಸದು ಬಂಧ ...
ಬಾನ ಸೂರ್ಯ ಬೆಳಕ ಬೀರಲು
ಮನದ ರವಿಯು ಕದವ ತೆರೆಯಲು
ಸ್ಪಷ್ಟವಾಗಿ ಜಗವ ಕಾಣಲು
ಮೂಡಿತೊಂದು ಹೊಸದು ಬಂಧ ...
No comments:
Post a Comment