Monday 26 March 2012

ಒಲವ ಕಂಪನ


 
ನೂಲು ಚರಕದಿ ಹೊಮ್ಮಿ ಬರಲು
ಭಾವ ಹೃದಯದಿ ಹೊರಟಿತು
ಜೀವ ಬಯಸದೆ ಸಿಲುಕಿತು
ಹೊಸದು ಕಾಣದ ಬಂಧಕೆ
 
ಮೌನವಾಗಿಯೇ ಕರಗಿತು
ಮುನಿಸು ಒಳಗೆ ಅರಳಿತು
ಎದೆಯ ಬಿಸಿಯು ಏರಿತು
ಅರಿಯದಂತ ಬಂಧಕೆ
 
ಉಸಿರ ವೀಣೆ ಸ್ವರವ ಚೆಲ್ಲಲು
ದೇಹ ತನ್ನಲೆ ಕಂಪಲು
ಲೋಕ ಕಾಣದೆ ,ಮನಸು ತಾನೆ ನಗುವ ಸೂಸಲು
ಬೆರೆಯಿತೊಂದು ಹೊಸದು ಬಂಧ ...
 
ಬಾನ ಸೂರ್ಯ ಬೆಳಕ ಬೀರಲು
ಮನದ ರವಿಯು ಕದವ ತೆರೆಯಲು
ಸ್ಪಷ್ಟವಾಗಿ ಜಗವ ಕಾಣಲು
ಮೂಡಿತೊಂದು ಹೊಸದು ಬಂಧ ...
 
 
 
 
 
 
 
 
 
 
 
 
 
 
 
 
 
 

No comments:

Post a Comment