Saturday, 2 March 2019


ಬುಗುರಿಯಾಟವ ಬಲ್ಲೆಯಾ? ?
ಬುಗುರಿ  ತಿರುಗುತಿದೆ
ಒಂದು ಮೊನೆಯ ಸುತ್ತ
ಬದುಕು ತಿರುಗುತಿದೆ
ಕಾಣದಂತೆ,  ಅಜ್ಞಾನದ  ಸೆಳೆತದಿ

ತನ್ನ ಸುತ್ತ ತಾನು
ಏನೂ ಕಾಣದಂತೆ
ವೇಗವಾಗಿ  ಆಸೆಯ ತಬ್ಬಿ
ಮಾಯದಂತೆ ಮೋಡ  ಮುಸುಕುತಿದೆ

ಹಲವು ಬಣ್ಣ ನೋಡಸಿಗದು
ಸ್ವಾರ್ಥವೆಂಬ ಅಗ್ನಿಯಲಿ
ಹರಿತವಾಗಿ ತಿವಿಯುತಿಹುದು
ಮೂರ್ಖತನದ ಛಾಯೆಲಿ


ಎಲ್ಲಿ ನೋಡು ಹೇಗೆ ನೋಡು
ಎಲ್ಲ ಮಾಯದ ಬಂಧಿಯಾಗಿ
ಬಿಡುಗಡೆಯು ಸಿಗದು
ಮೌಢ್ಯ ಮನಸ ಗರ್ಭಕೆ

ಕಾಣದು ಕಲ್ಪನೆಯ ಗೊಂಬೆ
ಗಾಳಿಯಲಿ  ಲೀನವಾಗಿ ಆತ್ಮಬೆಸುಗೆ
ಬದುಕು ಮಾತ್ರ  ಅರ್ಥವಿಲ್ಲದೆ
ಜ್ಞಾನದ ಬೆಳಕ ಕಾಣದಂತೆ

          ಮಣ್ಣ ಸೇರಿದೆ  ಎಲ್ಲ  ಅಗಲಿ.

MALINI BHAT. ..

Friday, 10 January 2014

ಮೌನವೊಂದು ಸರಳ  ಉತ್ತರ
ಮನಸ ಒಳಗೆ ಕಣ್ಣೀರ ಹನಿಗಳು
ದೂರವಾದ ಸಂಬಂಧಗಳು
ಕಟ್ಟಲಾಗದ ಹೊಸದು ಸೌಧ
ತೋಳಲಾಡುತಿದೆ ,ಅಳಿದು ಹೋಗುವ ಭೀತಿಯಲಿ


.................. ಮಾಲಿನಿ ಭಟ್ ..............

ಚಿಂತೆ



ಮನೆಯ ಮಾಳಿಗೆ ಮೇಲೆ , ನಿಂತು ನೋಡಲು ಕಳವಳ
ಬಿಸಿತೊಮ್ಮೆ  ಬಿರುಸು ಗಾಳಿ , ಹೃದಯ ಒಮ್ಮೆ ಸ್ತಬ್ಧವು
ಮನದ ಬಾಗಿಲ ಒಳಗೆ ಕುಳಿತ ಚಿಂತೆ ಇನ್ನು ಯಾತನೆ
ಗಾಳಿಯಂತೆ ತೇಲಿಹೋಗಬಾರದೆ , ಪುಟ್ಟ ಮನಸು ಹಗುರವಾಗಬಾರದೇ



................ ಮಾಲಿನಿ ಭಟ್ ..................

ಪ್ರೀತಿಗೆ ಮೋಸ



ಬಾರದಿರು   ಹುಸಿ ಪ್ರೀತಿಯ ತೋರುತ
ನಿನ್ನಲಿ ಮೋಸದ ಬಲೆಯ ಬೀಸುತ

ಸತ್ಯವು ಕಾಣದು , ಸುಳ್ಳೇ ಸತ್ಯವು
ನಿನ್ನ ಮೋಹದಿ ಎಲ್ಲವೂ ಚೆಂದವು

ಮೋಸದಿ ಸೆಳೆದು, ಮೋಹವೇ ಎಂದು
ಕಪಟ  ನಾಟಕ ನಿನ್ನದು ಅಂದು

ತಿಳಿಯದೆ ಸೋತಿರೋ ಪ್ರೀತಿಯ ಪಯಣಿಗ

ಸಾವಲಿ ನೆಮ್ಮದಿ ಕಾಣುವ ನಂಬಿಗ .

ಮಾಲಿನಿ ಭಟ್ .....

ಮತ್ತೆ ಮಗುವಾಗುವಾಸೆ




ನಿನ್ನ ಮಡಿಲಲ್ಲಿ   ಮತ್ತೆ ಮಗುವಾಗುವೆ
ನಿನ್ನ ಸೆರಗಂಚಲ್ಲಿ  ಹುದುಗಿ ಕೂರುವೆ
ಮೃದುವಾಗಿ  ನಿನ್ನ ಕಾಡಿ ಬೇಡುವೆ
ನಿನ್ನೊಡಲ ಪ್ರೀತಿಯ ಸವಿಯುಣ್ಣುವೆ


ನೀ ಹೇಳಿದ ಕಥೆಯ ಆಲಿಸಿ ಕೇಳುವೆ
ಮಮತೆಯ ತುತ್ತ ಮುದ್ದಾಗಿ ತಿನ್ನುವೆ
ನಗುವೇ,ನಲಿವೆ, ನಿನ್ನು ನಲಿಸುವೆ
ನಿದ್ದೆಗೆ ಜಾರಲು ಹಣೆಗೆ ನಿನ್ನ ಸ್ಪರ್ಶವೆ

ಮತ್ತೊಮ್ಮೆ ಹುಟ್ಟಿ ಬರುವಾಸೆ
ನಿನ್ನ ಹೃದಯವ ತಟ್ಟುವಾಸೆ
ಮಗುವಾಗಿಯೇ ಉಳಿಯುವಾಸೆ
ಪೂರ್ಣಚಂದ್ರ  ನಿನಮ್ಮ , ನಿನ್ನ ಜೊತೆಯಿರುವೆ


................... ಮಾಲಿನಿ ಭಟ್ .................... 

ತಾಯಿಯ ಹಾರೈಕೆ




ಬರಿದೇ ಮೌನ ಎದೆಯಲಿ ;ಉಳಿದೆ ನೀನು ಜೊತೆಯಲಿ
ಉರಿಯ ಬೇಗೆಯ ಹಾಗೆ  ಮಧುರ ಮನಸ ತಳದಲಿ

ಜಾತಿ ಧರ್ಮದ ಬೇಲಿ ಮುರಿದು ಬಂದೆ ನಿನ್ನ ಬಳಿಯಲಿ'
ಮಮತೆ ನೀಡಿ ಪೊರೆದ ತಾಯಿ ಅತ್ತಳೆದೆಯ ನೋವಲಿ

ಬಲಿತ ಹಕ್ಕಿಯು ಮರೆತೇ ಬಿಟ್ಟಿತು , ತನ್ನ ಸುಖದ ಅಲೆಯಲಿ

ದೂರವಾಯಿತು ತಾಯಿ ಹಕ್ಕಿಯು ,ಬೆಳೆದ ಮಗುವ ಹಟದಲಿ

ಪ್ರೀತಿ ಬಯಸಿ ಹಾರಿಬಿಟ್ಟಿತು , ವಯಸು ಸಹಜ ಬಯಕೆಯಲಿ
ಅತ್ತು ಅತ್ತು ಕಣ್ಣಿರಿಟ್ಟಿತು , ತಾಯಿ ಮನಸು ಕೊರಗುತಲಿ

ನೂರು ಪ್ರಶ್ನೆಯ ,... ಕುಟುಕು ಮಾತಲಿ
ಸಹಿಸದಾಯಿತು ...........    ನೋವಲಿ

ಇಂದು ನಾನು ಒಂಟಿಯು ,. ಮಕ್ಕಳಿದ್ದು ಬಂಜೆಯು
ಕರುಳ ಕುಡಿಯೇ ನೀಡೋ  ನೋವು ,... ಯಾವ ತಾಯಿಗೂ ಬೇಡವು


ಇಂದು ನನಗೆ ಯಾರೋ ಹೇಳಿದರು ,.. ಮಗಳು ತನ್ನ ಪ್ರೀತಿಲಿ ಸೋತಳು
ನನ್ನ ಕುಡಿಗೆ ಹರಸು ದೇವರೇ ,... ಅವಳ ಸಂಭ್ರಮ ಉಳಿಯಲಿ ..


ದೂರವಾದ ಮನಸು ಬೆರೆಯಲಿ

   ಅವರ ಹೃದಯ ನೀಲ ಸಾಗವಾಗಲಿ .




................  ಮಾಲಿನಿ ಭಟ್ .............


ಹೊಸ ವರುಷವೊಂದು  ಕಾಲಿಟ್ಟಿದೆ
ಪ್ರಶಾಂತ ಸಾಗರದಂತೆ
ಅಲ್ಲಲ್ಲಿ ಅಲೆ ಏಳುವುದು ಸಹಜ
ಸಿಲುಕದಿರು ಸುಳಿಯ ಬಲೆಗೆ
ಸುಖವಾಗಿರಲಿ ಬದುಕ ಪಯಣ
ಶುಭಾಷಯಗಳು ............... ಗೆಳೆಯರೇ ,.. ಗೆಳತಿಯರೆ ...


ಮಾಲಿನಿ ಭಟ್ ....................

ಎಂಥ ಮಾಯೆಯೋ




ನಿನ್ನ ಉಸಿರಲಿ ನನ್ನದೇನಿದೆ
 ಬರಿಯ ಭ್ರಮೆಯು ನನ್ನದಾಗಿದೆ

ಕಣ್ಣು ಕಟ್ಟಿದ ಸ್ವಾರ್ಥದಡಿಗೆ
ಮೌನತಬ್ಬಿದೆ ಆಸೆಯಂಚಿಗೆ

ನನ್ನದೆಲ್ಲವೂ ನನ್ನದಲ್ಲ
ನಿನ್ನಲೇನು ಬಯಸಲಿ

ಅಳಿದು ಹೋಗುವ ದೇಹದುಡುಗೆಗೆ
ಸ್ನೇಹ ಪ್ರೀತಿಯೇ ಶಾಶ್ವತ


.............. ಮಾಲಿನಿ ಭಟ್ .........
ದೂರದಲ್ಲಿ ಕಂಡಾಗ ಅನಿಸಿತು
ಅದು ನನ್ನದೇ ಪ್ರತಿಬಿಂಬ
ಬಳಿಬಂದು ನೋಡಿದಾಗ ಸಿಕ್ಕಿತು
 ನಿನ್ನ  ಪ್ರಿಯತಮೆಯ ಬಿಂಬ


....... ಮಾಲಿನಿ ಭಟ್ ...........

Wednesday, 30 October 2013



ದೂರ ಸಾಗು ನೆನಪೇ


ಖಾಲಿಯಾದ ಮನದ ಪುಟವು ಬರದ ನಿನ್ನ ನೆನಪಲಿ
ಹೀಗೆ ಇರುವೆ ಇಂತೆ ಇರುವೆ ಎನ್ನುವುದೆಲ್ಲ ಕ್ಷಣಿಕವು
ಗೂಡ   ಒಳಗೆ ರಚನೆಯಾದ ವರ್ಣಚಿತ್ರವು
ಬಣ್ಣ  ಮಾಸಿ ಮುನಿದಿದೆ ಹೃದಯ ದೀಪವು
ಎಲ್ಲ ಮೌನ , ಮೌನವೊಂದೆ ಉತ್ತರ
ಬರದ ನಿನ್ನ ನೆನಪು ನನ್ನ ಕಾಡುತಿರುವುದು
 ಮೌನದಲ್ಲೇ ಸರಿದುಬಿಡು ಇರುಳತೋಳಲಿ
ಮತ್ತೆ ಎಂದು ನೆನಪು ಆಗಿ ಕಾಡದಿರು
ದೂರ ದೂರ ಸಾಗಿಬಿಡು ,. ಅಲ್ಲೇ ನಿನ್ನ ನೆಲೆಯು
ಘಾಸಿಯಾದ ಮನದಲ್ಲಿ ನಿನಗಿಲ್ಲ ಜಾಗವು .


................. ಮಾಲಿನಿ ಭಟ್ ,,,,,,,,,,,,,,,

ಮನಸಿನಲೊಂದು ಭಾವ ,ಕನಸಿನಲೊಂದು ರಾಗ
ಒಡಗೂಡಿದ ಮಿಲನ ಪುಳಕ , ಅಲ್ಲೊಂದು ನವ  ಸಂವಸ್ಸರ
ಕೂಡಿ ಬಾಳುವ ಮುನ್ಸೂಚನೆ , ತೆರೆದ ಬಾಗಿಲೊಳಗೆ
ದೀಪ್ತಿಯ ಕಾಂತಿ ಹೊಮ್ಮುವುದು ಮನದೊಳಗೆ ..

........... ಮಾಲಿನಿ ಭಟ್ .................
ಈ ಸಂಜೆ ಯಾಕೋ ಮೋಡ ಕವಿದಿದೆ
ಮೇಲಿಂದ ತಿಳಿ ಮಿಂಚು ಹೊರಡುವುದು
ನನ್ನ ಮನಸಂತೆ ಆಕಾಶ ವು  ಮಬ್ಬಿದೆ
ಹೊಂಬಣ್ಣದ ದಿವ್ಯಪ್ರಭೆ ಮೂಡುವುದು
ಕಾಯುವುದು ನಿಯಮಿತ ...

.............  ಮಾಲಿನಿ ಭಟ್ ............

ಆಸೆಯ ಬೆನ್ನೇರಿ



ಕಾಣದ ಆಸೆಗೆ , ಎಲ್ಲಿಯ ಬೇಲಿ
ಕನಸಲಿ ಬಂದು ತಡವರಿಸಿ
ನಿನ್ನೆಯೂ ಇಂದು ನಾಳೆಯು ಇಲ್ಲ
 ಹುಡುಕುವ ದಾರಿ ಮನಸಲಿ
ಸ್ತಿರತೆ ಇಲ್ಲದ ಗುರಿಯೆಡೆಗೆ
ಆಸೆಯ ಹಿಂದೆ ಸಂಚರಿಸಿ
ಮೌನವು ತಬ್ಬಿದ ನೋವಿನ ಮಡಿಲಿಗೆ
ಬಿಳುವ ಮುಂಚೆ ಎಚ್ಚರಿಕೆ

....... ಮಾಲಿನಿ ಭಟ್ ......

ನಿನ್ನ ಒಲುಮೆ





ನನ್ನದೊಂದು ಜೀವ , ನಿನ್ನದೊಂದು ಜೀವ
ಮನಸುಗಳ ಮರೆಯಲ್ಲಿ ಪ್ರೀತಿ ಪರಿಮಳವು
ಕನಸುಗಳ ಸೆರೆಯಲ್ಲಿ ಜೇನ ಝೆಂಕಾರವು
 ಕಾಲ ಉರುಳಿಹೋದರೂ ಮತ್ತೆ ಸವಿಯ ಹೊಳಪು
ಬಣ್ಣ ಆರದು ,   ನಿನ್ನ ಒಲುಮೆಯಲಿ ...


................. ಮಾಲಿನಿ ಭಟ್  .............. 









ಪ್ರೀತಿ ಹೆಸರಲ್ಲಿ ಕಪಟ




ನೀ ದಾಟಿ ಹೋದೆ ನನ್ನದೆಯ ಅರಮನೆಯ
ಬರಿದು ಆಯಿತು ಪೋಣಿಸಿಟ್ಟ  ನಿರೀಕ್ಷೆಗಳು
ಸ್ಮಶಾನ ಮೌನ ಉಳಿದುಹೋಯಿತು
ಅರಳೋ ಹೂಗಳು ಮುದ ನೀಡಲಿಲ್ಲ
ಪ್ರೀತಿ ಎನ್ನೋ ತತ್ವಕ್ಕೆ ಮುಳ್ಳಾದೇ  ನೀ
ಭರವಸೆಯ ನೆಪ ಮಾಡಿ ಬೇರನ್ನೇ ಕಿತ್ತು ಬಿಟ್ಟೆ
ನಾ ಚೆನ್ನಾಗಿ ಇದ್ದೆ ,.. ಸಂತೋಷದಿ ಮಿಂದಿದ್ದೆ
ನಗುವನ್ನೇ ಕಸಿದು ಬಿಟ್ಟೆ , .. ದುಃಖವ  ನೀಡಿದೆ
ಯಾರಲ್ಲಿ ಹೇಳಲಿ,ಅಮ್ಮನಲ್ಲಿ .. ಅಪ್ಪನಲ್ಲಿ 
ಸ್ನೇಹಿತರಲ್ಲಿ ,... ಹೇಗೆ ಹೇಳಲಿ
ಯಾರ ಮಾತನ್ನು ಕೇಳಲಿಲ್ಲವಲ್ಲ ಅಂದು
ಎದೆ ಒಡೆದಂತ ಬಡಿತ,..
ದುಃಖಕ್ಕೆ  ಕಣ್ಣಿರು  ಸೋತಿದೆ
ನೀ ದಾಟಿ ಹೋದೆ ನನ್ನೆದೆಯ ಅರಮನೆಯ
ನಾಳೆ ಉಳಿಯುದೋ ಈ ಜೀವ ನಾ ಕಾಣೇನು .


ಮಾಲಿನಿ ಭಟ್ ....................

Tuesday, 8 October 2013

ಮುಟ್ಟಿನ ದಿನಗಳು





ಆ ದಿನಗಳು ಅದೇಕೆ ನೆನಪಾಗುವುದೋ
ಪದೇ  ಪದೇ ಹಿಂಸಿಸುವುದೋ

ಈಗಿನ ಮುಂದುವರಿದ ಜನಾಂಗ
ಅರಿತು ಅರಿಯದೆ ಮೂರ್ಖರಾದಾಗ
ಎಷ್ಟೇ ಜ್ಞಾನವಿದ್ದರೂ , ಎಲ್ಲ ಸುಮ್ಮನೆ

ಹಿರಿಯರು ಸಂಪ್ರದಾಯ ಮಾಡಿದ್ದಕ್ಕೆ ಕಾರಣವಿತ್ತು
ನಮ್ಮವರ ಮೂಢನಂಬಿಕೆಗೆ ಅರ್ಥವೇ ಇಲ್ಲ

ನಾ ಹೇಳ ಹೊರಟಿದ್ದು ಬೇರೇನೂ ಅಲ್ಲ
ಹೆಂಗಳೆಯರ ಆ ಮುಟ್ಟಿನ  ದಿನಗಳು

ದೇಹದ ಒಂದು ಸಹಜ ಕ್ರಿಯೆಗೆ
ತಿಂಗಳ ನೋವಿನ ನರಳಾಟದ ಜೊತೆಗೆ
ಸಂಪ್ರದಾಯವ ಮೀರಿದ ಮೌಢ್ಯತೆ


ತಿಂಗಳಲಿ ಹದಿನೈದು ದಿನಗಳು ನಿರ್ಭಿತಿ
ಮತ್ತೆ ಕಾಡುವ ಋತು ಸ್ರಾವದ ದಿನ
ಎಲ್ಲೆಡೆ  ಹೋಗಲಾಗದ ತಾಕಲಾಟ

ಇನ್ನು ಏಕೆ ತಿಳಿದವರು , ತಿಳಿಯದವರ
ಕೈಗೊಂಬೆಯಾಗಿ ಅದನ್ನೇ ದಾಟುವರೋ

ಇನ್ನೆಷ್ಟು ವರುಷಗಳು ಸಾಗಬೇಕೋ
ಕಾಯಬೇಕು , ಕಾದುನೋಡಬೇಕು
ತಿಳಿದವರು ತಿಳಿಸಿ ಹೇಳಬೇಕು

ಮುಟ್ಟಿನ  ದಿನಗಳು ಶಾಪವಾಗದಿರಲಿ
ಇದೊಂದು ವಿನಂತಿ .



............... ಮಾಲಿನಿ ಭಟ್ ........

Sunday, 6 October 2013

ಆಸರೆಯ ಕೈ ,.





ಮನಸಾಗದು  ಆ ಕಣಿವೆಯ ಮಾರ್ಗದಿ
ಪರಿತಪಿಸುತ ನಡೆಯುವುದು
ಇಳಿಜಾರಿನ ಕಾಲ್ದಾರಿ , ದುರ್ಗಮ ;
ಎದೆಬಡಿತದ ಸಂಚಲನ
ತಂತಾನೇ ಮೂಡುವುದು 
ಆಸರೆಯ ಕೈ ,.
ವಿಧಿಬರಹದ ನೋಟದಿ
ಪ್ರಾರ್ಥನೆಯ ಅಳಲು ,..
ಜೊತೆನಡೆಯಲು  ಧೈರ್ಯವ ನೀಡು
ತಲೆಬಾಗಿ ವಂದಿಸುವೆ ..

ಮಾಲಿನಿ  ಭಟ್ ................

ಅಮ್ಮ ನಿನ್ನ ಬಿಟ್ಟು ಬಂದ ಆ ಕ್ಷಣ





ಹಿಂದೆ ಹೇಗೆ ನೋಡಲಿ   , ಕಳೆದು ಹೋದ ದಿನಗಳ
ಸೋತ ಮನಸು, ದಣಿದ ದೇಹ ;ಕಾಲ ಗರ್ಭದಿ
ಎದೆಯ ತಲ್ಲಣ ,ಘೋರ ವಿಷವು
ತಲೆಯ ತುಂಬಾ ಜೋಮು ಹಿಡಿದ ಅನುಭವ
ಅಮ್ಮ ನಿನ್ನ ಮಡಿಲ ಹೇಗೆ ಮರೆಯಲಿ
ನಿನ್ನ ಪ್ರೀತಿ ಸಿಂಚನ , ಜೇನ ಸವಿಯ ಆಗರ
ಇಂದು ನಾನು ನೀನು ದೂರ ದೂರ
ಸಹಿಸಲಾಗದು , ಎದೆಯು ತುಂಬಾ ನೋಯುತಿದೆ
ಕಷ್ಟ ಕೊಡೆನು ,ನೋವು ಕೊಡೆನು ,
ನಿನ್ನ ಮಡಿಲೆ ಸಾಕು ನನಗೆ ,...
ತಬ್ಬಿಕೊಂಡು ಅತ್ತುಬಿಡುವ ಆಸೆ ಮನದಲಿ
ಕಾದು ಕಾದು  ಊಟ ಬಡಿಸೋ ನಿನ್ನ ಮಮತೆಗೆ
ಸೋತೆನಮ್ಮ , ನನ್ನ ಜೀವ ನೀನು
ನನ್ನ ಉಸಿರು ನೀನು ,.. ನಿನ್ನ ನಗುವೇ
ಸಕಲ ಭಾಗ್ಯ ನನಗೆ ಅಮ್ಮ. ..


.............. ಮಾಲಿನಿ ಭಟ್ ......................


Friday, 27 September 2013

ಗಿಡದ ವ್ರತ


ಮೋಡದಲೊಂದು  ಮಳೆಹನಿಯ ಒರತೆ
ಆ ಹನಿ ಸ್ಪರ್ಶಕೆ ಗಿಡದ ವ್ರತವು
ಚುಂಬಿಸಿ ಚುಂಬಿಸಿ ಮನವು ಹಸಿರಾಗಿ
ಹೃದಯವು ಬಯಸಿತು ,  ನಿನ್ನ ಇರುವಿಕೆ
ಸದಾ  , ಕಾಣುವ ನಿನ್ನದೇ ಬಿಂಬ
ಜೊತೆಯಲೇ ಇರು, ಒಲವೇ
ಉರಿಯುವ ಹಣತೆಯ ಹಾಗೆ
ಬೆಳಕನು ನೀಡು ಇರುಳಿನ ಚಪ್ಪರಕೆ
ಅಂಧಕಾರವು ಕಾಣದೆ ಅಡಗಲಿ
ನಾನು ಉಳಿಸುವೆ, ನಾನು ಬೆಳೆಸುವೆ
ನೀವು ಬನ್ನಿರಿ, ನೀವು ಬೆಳೆಸಿರಿ
ಮುಂದಿನ ದಿನದ ವರೆಗೂ  ...


............. ಮಾಲಿನಿ ಭಟ್ .............

ಪ್ರೀತಿ ದೀಪ



ಮೌನವಾದ ಗಾಳಿಯಲ್ಲಿ ನಿನ್ನ ನೆನಪು ಇಣುಕುತಿದೆ
ಬೆಟ್ಟದಾಚೆಯಾಗಸದಲಿ ನಿನ್ನ ಧ್ವನಿಯು ಉಲಿಯುತಿದೆ

ಕಣ್ಣರೆಪ್ಪೆ ಮುಚ್ಚಿ ನೋಡಲು ಕಳೆದ ಮಧುರ ದಿನಗಳ
ಅಲ್ಲೇ ಹರಿವ ಝರಿಯು ಹೇಳಿದೆ ಪ್ರೀತಿ ತುಂಬಿದ ಕ್ಷಣಗಳ

ಜಾರಿಹೋದ ಕಾಲಗರ್ಭಕೆ ಮರವು ಸಾಕ್ಷಿಯೂ ಇಂದು

ಮರಳಿ ಹೋಗಿ , ನೋಡಿ ಬರಲು ಮೂಕವೇದನೆ  ಇಂದು

ಅಳಿಸಿ ಹೋಗಿದೆ ಬಲಿತ ಪ್ರೀತಿಯು , ಮರವೇ ನೊಂದಿದೆ ಅಂದು
ಚಿಕ್ಕ  ಜಗಳಕೆ ಪ್ರೀತಿ ಒಡೆಯಿತು , ಪಶ್ಕಾತಾಪವು ಇಂದು


................ ಮಾಲಿನಿ ಭಟ್ ...............