ಮನದ ನಡುವೆ ಸೊಗಸಾ ಚೆಲ್ಲಿ
ಹೃದಯ ತುಂಬಾ ನಗುವ ಹರಡಿ
ಕಂಡ ಕನಸ ಕರದಿ ಹಿಡಿದು
ಸ್ನೇಹದಿಂದ ಜೊತೆಯೂ ನಿಂತ ಹೂವು ನೀನು
ಭಾವನೆಯ ಗೂಡವೊಳಗೆ
ಕೂಗಿ ಕರೆವ ನಿನ್ನ ದನಿಗೆ
ಅದೃಷ್ಟವು ನನದು ಎಂದು
ಬಿಗಿಕೊಂಡೇನು
ಸಮಯ ಕಳೆದು ನಿಶೆಯು ಹರಿದು
ಅಂದು ಬಂತು ನಿನ್ನ ಮನದಿ ಹೊಸದು ರೂಪವೂ
ಅರಿತ ಮನವ ಚಿವುಟಿ ಹೊರಟೆ
ನನ್ನ ಯಾವ ತಪ್ಪಿಗೆ
ಸ್ನೇಹಕ್ಕೆ - ಸ್ನೇಹವೆಂದು
ಭರವಸೆಯಲಿ ನಿನ್ನ ಕಲಶವಿಡಲು
ಹುದುಗಿ ನೋವ ನೀಡಿದೆ
ಭಗ್ನವಾಯಿತಿಂದು ಎನ್ನ ಹೃದಯ ದೇಗುಲ
ಅವಿತ ಮನವು ಬಿಗಿದುಕೊಂಡಿದೆ
ಎದೆಯ ನೋವು ತುಂಬಿ ನಡುಗಿದೆ
ಹೃದಯ ಕೂಗಿ ಕೂಗಿ ಕೇಳಿದೆ
ಯಾವ ತಪ್ಪಿಗೆ ಶಿಕ್ಷೆ ನೀಡಿದೆ
ನನ್ನ ಮನವ ಗೃಹಿಸದಾದೆ
ಕಣ್ಣ ನೀರ ಕಾಣದಾದೆ
ಸ್ನೇಹದಲ್ಲಿ ಯಾವ ಲೋಪ ನೋಡಿದೆ
ಜೊತೆಯೇ ಇರುವೆ ಎಂಬ ಮಾತು ಇಷ್ಟು ಕ್ಷಣಿಕವೇ
ನೋವು ನನಗೆ ಉಳಿಯಲಿ
ನೀನು ಸದಾ ನಗುತಿರು
ನನ್ನ ಹೃದಯ ಮಿಥ್ಯ ನುಡಿಯದು
ಗ್ರಹಣ ಕಳೆದು ಬೆಳಕು ಹರಿಯಲಿ ...
.........ಮಾಲಿನಿ ಭಟ್..............
ಕವಿತೆಯ ಭಾವ ಯಾವುದೇ ಸ್ನೆಹಿತರನ್ನೂ ಮನತಟ್ಟುವಂತಿದೆ
ReplyDeleteDhanyavaadagalu...
ReplyDelete