Monday 2 April 2012

ಜೀವಜಲ



ಬಿಸಿಲು ಕಾದು ನೆಲವು ಬರಿದಾಗಿದೆ
ಹಸಿರು ಮೊಳಕೆ ಅಲ್ಲೇ ಕರಗಿದೆ
ಜೀವಸೃಷ್ಟಿ ನೊಂದು ಕೊರಗಿದೆ
                 ಪುಟ್ಟ ಮನವು ಕರೆದಿದೆ

ಬರಡು ನೆಲದಿ , ಜೀವ ಸೆಲೆಯು ಉಕ್ಕಲಿ
ಬತ್ತಿ ಹೋದ ಮನಸಿನಲ್ಲಿ ಹೂವ ನಗುವು ಚೆಲ್ಲಲಿ
ಅಮೃತಧಾರೆ ನೀಡಲಿ ...
                          ಪುಟ್ಟ ಜೀವ ಬಯಸಿದೆ

ಜಲವು ನಮಗೆ ಅನ್ನದಾತ
ಜಲವು ನಮಗೆ ಜೀವಕಲ್ಪ
ಜಲವೇ ನಮ್ಮ ಭಾಗ್ಯದಾತ
                     
                           ಜೀವ ಜಲವ ಆವರಿಸಿದೆ

ಕಾಡು ಕಡಿದು , ನಾಶವಾಯ್ತು ವನದ ತಪ್ಪಲು
ಜೀವ ಕೋಟಿ ಮನದಿ ಶಾಪ ಇಟ್ಟರು
ಮೇಘರಾಜ ಹೆದರಿ ನಭದಿ ಹೊಕ್ಕಲು
                         
                             ಜಲಕೆ ವಿನಂತಿ  ತಲುಪಿದೆ

ವನವ ಬೆಳೆಸಿ , ಜೀವಶಕ್ತಿ ಉಳಿಸಿ
ನಾಶಮಾಡಿ ಕೊರಗದಿರು , ..


 ...........ಮಾಲಿನಿ ಭಟ್....

                          

1 comment: