ಅಂದು ಸಂಜೆ ಬರಿಯ ಬಾನು
ಇಣುಕಿ ಇಣುಕಿ ಕರೆಯಿತು
ಹಲವು ಪ್ರಗತಿ ಕಂಡು ನಭವು
ಅಲ್ಲೇ ಮುದುಡಿ ನಲುಗಿತು
ಸುತ್ತ ದೀಪ ಕಳೆದ ಮುಗಿಲು
ಅಣುವ ಆಸರೆ ಬಯಸಿತು
ಕಣ್ಣ ಕಂಬನಿ ಮರೆತ ಅಳುವು
ಆತ್ಮಾನಂದಕೆ ಸಿಲುಕಿತು
ಕಿರಣದ ಹೊಳಪು ಹೃದಯ ಮೀಟಲು
ಮನೋಲ್ಲಾಸವ ಪಡೆಯಿತು
ಮನದ ಪ್ರಾರ್ಥನೆ ಫಲವು ಪಡೆಯಲು
ಹೃದಯ ಹರಿಸಿತು ದೇವಗೆ ....
....
ಸುಂದರ ಕವನ ಮೇಡಮ್.. ಸುತ್ತ ದೀಪ ಕಳೆದ ಮುಗಿಲು ಇದರ ಅರ್ಥ ತಿಳಿಸುವಿರಾ ದಯವಿಟ್ಟು
ReplyDelete